ಬ್ರೇಕಿಂಗ್ ನ್ಯೂಸ್
08-01-25 11:07 pm HK News Desk ದೇಶ - ವಿದೇಶ
ಚೆನ್ನೈ, ಜ.8: ಅತ್ಯಂತ ಹಳೆಯದಾದ ಸಿಂಧೂ ನಾಗಕರಿಕತೆಯ ಲಿಪಿಗಳು ಲಭ್ಯವಿದ್ದು ಅದನ್ನು ಅರ್ಥೈಸುವುದು ಇಂದಿಗೂ ಕಠಿಣವೇ ಆಗಿದೆ. ಈ ಲಿಪಿಗಳನ್ನು ಓದಿ ಸರಿಯಾಗಿ ಅರ್ಥೈಸುವವರಿಗೆ ತಮಿಳುನಾಡು ಸರ್ಕಾರ ಬಂಪರ್ ಬಹುಮಾನ ಘೋಷಿಸಿದೆ. ಈ ಲಿಪಿಗಳ ಚೆನ್ನಾಗಿ ವಿವರಣೆ ಮಾಡುವವರಿಗೆ ಬರೋಬ್ಬರಿ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಸಿಂಧೂ ಕಣಿವೆ ನಾಗರಿಕತೆಯ ಲಿಪಿಯನ್ನು ಯಶಸ್ವಿಯಾಗಿ ಅರ್ಥೈಸುವವರಿಗೆ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಭಾರತದ ಕರೆನ್ಸಿಯಲ್ಲಿ ಇದರ ಮೌಲ್ಯ ಬರೋಬ್ಬರಿ 8.5 ಕೋಟಿ ರೂಪಾಯಿ ಆಗುತ್ತದೆ. ಒಂದು ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಿಂಧೂ ಕಣಿವೆಯ ಬರವಣಿಗೆಯ ವ್ಯವಸ್ಥೆಯನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕಾರ್ಯಕ್ರಮ ಒಂದರಲ್ಲಿ ಸ್ಟಾಲಿನ್ ಅಭಿಪ್ರಾಯ ಪಟ್ಟಿದ್ದಾರೆ.
ಪುರಾತತ್ವ ಶಾಸ್ತ್ರಜ್ಞರು ಮತ್ತು ತಜ್ಞರ ಹಲವಾರು ಪ್ರಯತ್ನಗಳ ಹೊರತಾಗಿಯೂ ಸಿಂಧೂ ಕಣಿವೆ ನಾಗರಿಕತೆ ಕುರಿತ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಇದಕ್ಕಾಗಿ, ಈ ಲಿಪಿಗಳನ್ನು ಓದಿ ಅರ್ಥೈಸಿದವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದರು.
ಸಿಂಧೂ ಕಣಿವೆಯಲ್ಲಿ ಗೂಳಿಗಳ ಚಿತ್ರಗಳಿದ್ದವು. ಗೂಳಿ ದ್ರಾವಿಡ ಸಂಕೇತವಾಗಿದ್ದು ಸಿಂಧೂ ಕಣಿವೆಯಿಂದ ಅಲಂಗನಲ್ಲೂರ್ (ಜಲ್ಲಿಕಟ್ಟುಗೆ ಪ್ರಸಿದ್ಧವಾದ ಮಧುರೈ ಬಳಿಯ ಗ್ರಾಮ) ವರೆಗೆ ಹರಡಿದ್ದನ್ನು ತೋರಿಸುತ್ತದೆ. ಇದು ನಮ್ಮ ಸಂಸ್ಕೃತಿಗೆ ಬಹಳ ಹತ್ತಿರವಾಗಿದೆ. ಹೀಗಾಗಿ ಸಿಂಧೂ ಕಣಿವೆಯ ಲಿಪಿ ಅರಿಯುವುದು ನಮ್ಮ ಹಿನ್ನೆಲೆ ಅರಿಯಲು ಅವಶ್ಯಕ ಎಂದಿದ್ದಾರೆ.
ಜಾನ್ ಮಾರ್ಷಲ್ ನೆನೆದ ಸ್ಟಾಲಿನ್!
1924 ರಲ್ಲಿ ಬ್ರಿಟಿಷ್ ವ್ಯಕ್ತಿ ಸರ್ ಜಾನ್ ಮಾರ್ಷಲ್ ಸಿಂಧೂ ಕಣಿವೆ ನಾಗರಿಕತೆಯನ್ನು ಜಗತ್ತಿಗೆ ಪರಿಚಯಿಸಿದರು. ಈ ಆವಿಷ್ಕಾರವು ಭಾರತೀಯ ನಾಗರಿಕತೆ ಎಷ್ಟು ಪ್ರಾಚೀನವಾದದ್ದು ಎಂಬುದರ ಮೇಲೆ ಬೆಳಕು ಚೆಲ್ಲಿತ್ತು. ಸಿಂಧೂ ಕಣಿವೆಯಲ್ಲಿದ್ದವರು ಕ್ರಮೇಣ ವಲಸೆ ಹೋಗಿ ದಕ್ಷಿಣದ ಕಡೆಗೆ ಬಂದು ನೆಲೆಸಲು ಆರಂಭಿಸಿದ್ದರು ಎಂಬ ವಾದವಾಗಿತ್ತು. ದ್ರಾವಿಡ ಸಂಸ್ಕೃತಿಯ ಪ್ರಾತಿನಿಧ್ಯವೆಂದು ಪರಿಗಣಿಸಲಾದ ಗೂಳಿಗಳ ಚಿಹ್ನೆಗಳು ಸಿಂಧೂ ಕಣಿವೆಯ ಕಲಾಕೃತಿಗಳಲ್ಲಿ ಪ್ರಚಲಿತದಲ್ಲಿವೆ ಎಂದು ಅಧ್ಯಯನಗಳು ತೋರಿಸುತ್ತವೆ. ತಮಿಳುನಾಡಿನ ಶಿವಕಲೈ, ಆದಿಚನಲ್ಲೂರು, ಮೈಲಾಡುಂಪರೈ ಮುಂತಾದ ಸ್ಥಳಗಳಲ್ಲಿ ಈ ರೀತಿಯ ಚಿಹ್ನೆಗಳು ಮತ್ತು ಶಾಸನಗಳು ಕಂಡುಬರುತ್ತವೆ. ಇಲ್ಲಿನ ಕುಂಬಾರಿಕೆ ಪ್ರಕಾರವೂ ಶೇ.60 ರಷ್ಟು ಸಿಂಧೂ ಕಣಿವೆ ನಾಗರಿಕತೆಗೆ ಹೋಲಿಕೆಯಾಗುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ.
With the script of the Indus Valley Civilisation (IVC) remaining a mystery even after a 100 years after its discovery, Tamil Nadu chief minister MK Stalin on Sunday announced a prize of $1 million to those who decipher the ancient script.
17-10-25 08:39 pm
HK News Desk
ಆರೆಸ್ಸೆಸ್ ಚಟುವಟಿಕೆ ಕಡಿವಾಣಕ್ಕೆ ಕೌಂಟರ್ ; ಸಾರ್ವಜ...
17-10-25 05:27 pm
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಬ್ರೇಕ...
16-10-25 09:04 pm
ನವೆಂಬರಲ್ಲಿ ಅಧಿಕಾರ ಬಿಡಲು ಹೈಕಮಾಂಡ್ ಹೇಳಿಲ್ಲ, ಸಿದ...
16-10-25 04:44 pm
ಆರೆಸ್ಸೆಸ್ ಚಟುವಟಿಕೆ ನಿಷೇಧ ; ಸಚಿವ ಪ್ರಿಯಾಂಕ ಖರ್ಗ...
16-10-25 04:40 pm
17-10-25 05:25 pm
HK News Desk
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
17-10-25 09:36 pm
Mangalore Correspondent
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
ಪ್ರಿಯಾಂಕ ಖರ್ಗೆ ಮಾತು ಸರಿಯಾಗಿಯೇ ಇದೆ, ಸಮಾಜದಲ್ಲಿ...
16-10-25 05:09 pm
ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಗಾನ ಕೋಗಿಲೆ ದಿನೇಶ...
16-10-25 01:11 pm
18-10-25 03:27 pm
Mangalore Correspondent
Illegal Arms Case, Mahesh Shetty Timarodi: ಅಕ...
18-10-25 01:52 pm
ಪ್ರೀತಿ ನಿರಾಕರಿಸಿದ ಕಾಲೇಜು ಯುವತಿಯನ್ನು ನಡುರಸ್ತೆಯ...
17-10-25 03:27 pm
Vitla Honeytrap case, Police, Mangalore: ಬಶೀರ...
17-10-25 03:23 pm
ಆತ್ಮಶಕ್ತಿ ಬೆನ್ನಲ್ಲೇ ಒಡಿಯೂರು ಸಹಕಾರಿ ಬ್ಯಾಂಕಿಗೂ...
17-10-25 11:56 am