ಬ್ರೇಕಿಂಗ್ ನ್ಯೂಸ್
14-01-25 07:18 pm HK News Desk ದೇಶ - ವಿದೇಶ
ಪ್ರಯಾಗರಾಜ್, ಜ.14: ಮಹಾಕುಂಭ ಮೇಳಕ್ಕೆ ಗೂಗಲ್ ಸಂಸ್ಥೆಯು ಗುಲಾಬಿ ದಳಗಳಿಂದ ಪುಷ್ಪ ವೃಷ್ಟಿ ಮಾಡಿದೆ. ಗೂಗಲ್ ಸರ್ಚ್ ಬಾಕ್ಸ್ನಲ್ಲಿ ಕುಂಭ ಮೇಳ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ತಕ್ಷಣ ಮೊಬೈಲ್ ಸ್ಕ್ರೀನ್ ಮೇಲೆ ಗುಲಾಬಿ ದಳಗಳು ಸುರಿಯುತ್ತವೆ.
ಕುಂಭಮೇಳ ಭಾರತದ ಆಧ್ಯಾತ್ಮಿಕ ವೈಭವವನ್ನು ಸಾರುವ ಕಾರ್ಯಕ್ರಮ. 45 ದಿನಗಳಲ್ಲಿ ಸುಮಾರು 40 ಕೋಟಿಗೂ ಹೆಚ್ಚು ಜನರು ಕುಂಭ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಗೂಗಲ್ ಸಂಸ್ಥೆಯು ಮಹಾ ಕುಂಭಮೇಳಕ್ಕೆ ಆದ್ಯತೆ ನೀಡಿದ್ದು ಹೂ ಮಳೆ ಸುರಿಸಲು ತೊಡಗಿದೆ. ನ.14ರ ಮಕರ ಸಂಕ್ರಾಂತಿಯ ದಿನದಂದು ಗೂಗಲ್ ಕುಂಭಮೇಳದ ಬಗ್ಗೆ ಸರ್ಚ್ ಮಾಡುವ ಗ್ರಾಹಕರಿಗೆ ಹೂಮಳೆ ಸುರಿಸಿದೆ.
ಹೂವು ಸುರಿಯುವಾಗ ಸ್ಕ್ರೀನ್ ಕೆಳಗೆ ಕಾಣುವ ಮೂರು ಬಟನ್ ಪೈಕಿ ಮಧ್ಯದಲ್ಲಿರುವ ಹೂವಿನ ಬಟನ್ ಕ್ಲಿಕ್ ಮಾಡಿದರೆ, ಹೆಚ್ಚು ಹೆಚ್ಚು ಹೂವುಗಳು ಉದುರುತ್ತವೆ. ಹೀಗೆ ನೀವು ಹೆಚ್ಚು ಕ್ಲಿಕ್ ಮಾಡಿದರೆ ಹೆಚ್ಚು ಹೂವುಗಳು ಬೀಳುತ್ತವೆ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಬಯಸಿದರೆ, ಕೆಳಗಿನ ಬಲಭಾಗದ ಮೂರನೇ ಬಟನ್ ಕ್ಲಿಕ್ ಮಾಡಿ ಹಂಚಿಕೊಳ್ಳಬಹುದು. ಗೂಗಲ್ ತಂದಿರುವ ಈ ವಿಶೇಷ ಗ್ರಾಫಿಕ್ಸ್ ಅನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ತ್ರಿವೇಣಿ ಸಂಗಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಭಕ್ತರು ಹರ ಹರ ಮಹಾದೇವ, ಜೈ ಶ್ರೀರಾಮ್ ಘೋಷಣೆಗಳನ್ನು ಹಾಕುತ್ತಿದ್ದಾರೆ. 12 ಕಿಮೀ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಿರುವ ಸ್ನಾನ ಘಟ್ಟಗಳಲ್ಲಿ ಸಂತರು, ಯಾತ್ರಿಕರು, ಅಘೋರಿಗಳು ಮತ್ತು ಭಕ್ತರು ತುಂಬಿ ತುಳುಕಿದ್ದಾರೆ. ಮಕರ ಸಂಕ್ರಾಂತಿಯ ದಿನ ಮಂಗಳವಾರ ಬೆಳಗ್ಗೆ 8.30ಕ್ಕೆ ಶಾಹಿ ಸ್ನಾನ ಆರಂಭವಾಗಿದೆ. ಸೋಮವಾರ ಪುಷ್ಯ ಹುಣ್ಣಿಮೆಯಂದು ನಿರ್ವಾಣಿ ಅಖಾಡದ ನಾಗಾ ಸಾಧುಗಳು ಪವಿತ್ರ ಸ್ನಾನ ಮಾಡುವ ಮೂಲಕ ಕುಂಭಮೇಳ ಆರಂಭಿಸಿದ್ದಾರೆ. ಲೋಕದ ಪರಿವೇ ಇಲ್ಲದಂತೆ ದೇವರ ಧ್ಯಾನದಲ್ಲೇ ತಲ್ಲೀನವಾಗಿರುವ ನಾಗಾ ಸಾಧುಗಳು, ಅಘೋರಿಗಳ ಪಾಲಿಗೆ ಕುಂಭ ಮೇಳ ಮಹೋನ್ನತ ಉತ್ಸವ ಎನ್ನುವಂತಾಗಿದೆ.
Google pays homage to Maha Kumbh Mela 2025—the largest religious gathering in the world—through a unique, interactive feature available on its search platform for Indian users. This captivating digital tribute highlights the cultural and spiritual significance of the event that attracts millions of devotees from across the globe.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm