ಬ್ರೇಕಿಂಗ್ ನ್ಯೂಸ್
14-01-25 07:18 pm HK News Desk ದೇಶ - ವಿದೇಶ
ಪ್ರಯಾಗರಾಜ್, ಜ.14: ಮಹಾಕುಂಭ ಮೇಳಕ್ಕೆ ಗೂಗಲ್ ಸಂಸ್ಥೆಯು ಗುಲಾಬಿ ದಳಗಳಿಂದ ಪುಷ್ಪ ವೃಷ್ಟಿ ಮಾಡಿದೆ. ಗೂಗಲ್ ಸರ್ಚ್ ಬಾಕ್ಸ್ನಲ್ಲಿ ಕುಂಭ ಮೇಳ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ತಕ್ಷಣ ಮೊಬೈಲ್ ಸ್ಕ್ರೀನ್ ಮೇಲೆ ಗುಲಾಬಿ ದಳಗಳು ಸುರಿಯುತ್ತವೆ.
ಕುಂಭಮೇಳ ಭಾರತದ ಆಧ್ಯಾತ್ಮಿಕ ವೈಭವವನ್ನು ಸಾರುವ ಕಾರ್ಯಕ್ರಮ. 45 ದಿನಗಳಲ್ಲಿ ಸುಮಾರು 40 ಕೋಟಿಗೂ ಹೆಚ್ಚು ಜನರು ಕುಂಭ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಗೂಗಲ್ ಸಂಸ್ಥೆಯು ಮಹಾ ಕುಂಭಮೇಳಕ್ಕೆ ಆದ್ಯತೆ ನೀಡಿದ್ದು ಹೂ ಮಳೆ ಸುರಿಸಲು ತೊಡಗಿದೆ. ನ.14ರ ಮಕರ ಸಂಕ್ರಾಂತಿಯ ದಿನದಂದು ಗೂಗಲ್ ಕುಂಭಮೇಳದ ಬಗ್ಗೆ ಸರ್ಚ್ ಮಾಡುವ ಗ್ರಾಹಕರಿಗೆ ಹೂಮಳೆ ಸುರಿಸಿದೆ.
ಹೂವು ಸುರಿಯುವಾಗ ಸ್ಕ್ರೀನ್ ಕೆಳಗೆ ಕಾಣುವ ಮೂರು ಬಟನ್ ಪೈಕಿ ಮಧ್ಯದಲ್ಲಿರುವ ಹೂವಿನ ಬಟನ್ ಕ್ಲಿಕ್ ಮಾಡಿದರೆ, ಹೆಚ್ಚು ಹೆಚ್ಚು ಹೂವುಗಳು ಉದುರುತ್ತವೆ. ಹೀಗೆ ನೀವು ಹೆಚ್ಚು ಕ್ಲಿಕ್ ಮಾಡಿದರೆ ಹೆಚ್ಚು ಹೂವುಗಳು ಬೀಳುತ್ತವೆ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಬಯಸಿದರೆ, ಕೆಳಗಿನ ಬಲಭಾಗದ ಮೂರನೇ ಬಟನ್ ಕ್ಲಿಕ್ ಮಾಡಿ ಹಂಚಿಕೊಳ್ಳಬಹುದು. ಗೂಗಲ್ ತಂದಿರುವ ಈ ವಿಶೇಷ ಗ್ರಾಫಿಕ್ಸ್ ಅನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ತ್ರಿವೇಣಿ ಸಂಗಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಭಕ್ತರು ಹರ ಹರ ಮಹಾದೇವ, ಜೈ ಶ್ರೀರಾಮ್ ಘೋಷಣೆಗಳನ್ನು ಹಾಕುತ್ತಿದ್ದಾರೆ. 12 ಕಿಮೀ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಿರುವ ಸ್ನಾನ ಘಟ್ಟಗಳಲ್ಲಿ ಸಂತರು, ಯಾತ್ರಿಕರು, ಅಘೋರಿಗಳು ಮತ್ತು ಭಕ್ತರು ತುಂಬಿ ತುಳುಕಿದ್ದಾರೆ. ಮಕರ ಸಂಕ್ರಾಂತಿಯ ದಿನ ಮಂಗಳವಾರ ಬೆಳಗ್ಗೆ 8.30ಕ್ಕೆ ಶಾಹಿ ಸ್ನಾನ ಆರಂಭವಾಗಿದೆ. ಸೋಮವಾರ ಪುಷ್ಯ ಹುಣ್ಣಿಮೆಯಂದು ನಿರ್ವಾಣಿ ಅಖಾಡದ ನಾಗಾ ಸಾಧುಗಳು ಪವಿತ್ರ ಸ್ನಾನ ಮಾಡುವ ಮೂಲಕ ಕುಂಭಮೇಳ ಆರಂಭಿಸಿದ್ದಾರೆ. ಲೋಕದ ಪರಿವೇ ಇಲ್ಲದಂತೆ ದೇವರ ಧ್ಯಾನದಲ್ಲೇ ತಲ್ಲೀನವಾಗಿರುವ ನಾಗಾ ಸಾಧುಗಳು, ಅಘೋರಿಗಳ ಪಾಲಿಗೆ ಕುಂಭ ಮೇಳ ಮಹೋನ್ನತ ಉತ್ಸವ ಎನ್ನುವಂತಾಗಿದೆ.
Google pays homage to Maha Kumbh Mela 2025—the largest religious gathering in the world—through a unique, interactive feature available on its search platform for Indian users. This captivating digital tribute highlights the cultural and spiritual significance of the event that attracts millions of devotees from across the globe.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 11:26 pm
HK News Staffer
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
Sandesh PG, Inspector: ಮೂಡುಬಿದ್ರೆ ಇನ್ಸ್ ಪೆಕ್ಟ...
20-03-26 06:56 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm