ಬ್ರೇಕಿಂಗ್ ನ್ಯೂಸ್
16-01-25 04:24 pm HK News Desk ದೇಶ - ವಿದೇಶ
ಮುಂಬೈ, ಜ.16: ಬಾಲಿವುಡ್ ನಟ ಸೈಫ್ ಆಲಿ ಖಾನ್ ಮನೆಯೊಳಗೆ ಮಧ್ಯರಾತ್ರಿಯಲ್ಲಿ ಹೊಕ್ಕಿದ್ದ ವ್ಯಕ್ತಿಯೊಬ್ಬ ಸೈಫ್ ಮೇಲೆ ಚೂರಿಯಿಂದ ತಿವಿದು ಹಲ್ಲೆಗೊಳಿಸಿದ ಘಟನೆ ನಡೆದಿದೆ. ಗುರುವಾರ ನಸುಕಿನ 2.230ರ ವೇಳೆಗೆ ಬಾಂದ್ರಾದಲ್ಲಿರುವ ಅಪಾರ್ಟ್ಮೆಂಟ್ ಕಟ್ಟಡದ ಮನೆಯೊಳಗೆ ಘಟನೆ ನಡೆದಿದೆ. ಆಗಂತುಕ ವ್ಯಕ್ತಿ ನೇರವಾಗಿ ಸೈಫ್ ಮೇಲೆ ಚೂರಿಯಿಂದ ತಿವಿದಿದ್ದಾನೆ. ಈ ವೇಳೆ, ಬೊಬ್ಬೆ ಕೇಳಿ ಮನೆಯ ಇತರ ಸದಸ್ಯರು ಎಚ್ಚತ್ತಿದ್ದು, ಅಷ್ಟರಲ್ಲಿ ಆಗಂತುಕ ಪರಾರಿಯಾಗಿದ್ದಾನೆ.
ಮೇಲ್ನೋಟಕ್ಕೆ ದರೋಡೆ ಮಾಡಲು ಮನೆಗೆ ಹೊಕ್ಕಿದ್ದ ಆಗಂತುಕನೇ ಚೂರಿಯಿಂದ ಇರಿದಿದ್ದಾನೆ ಎನ್ನಲಾಗುತ್ತಿದೆ. ಸೈಫ್ ದೇಹಕ್ಕೆ ಆರು ಕಡೆ ಇರಿತದ ಗಾಯಗಳಾಗಿದ್ದು ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎರಡು ಸರ್ಜರಿಗಳನ್ನು ಮಾಡಲಾಗಿದ್ದು, ಸದ್ಯ ಸೈಫ್ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸೈಫ್ ಅವರ ಬೆನ್ನು ಮೂಳೆಗೆ ತೀವ್ರ ಗಾಯವಾಗಿದ್ದು, ಅಲ್ಲಿ ಚೂರಿಯ ತುಣುಕು ಉಳಿದುಕೊಂಡಿತ್ತು. ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆರವು ಮಾಡಿದ್ದಾರೆ.

ಸೈಫ್ ಮನೆಯೊಳಗಿನ ಸಿಸಿಟಿವಿಯಲ್ಲಿ ವ್ಯಕ್ತಿಯ ಚಹರೆ ಪತ್ತೆಯಾಗಿಲ್ಲ. ಘಟನೆ ಬಳಿಕ ಮೆಟ್ಟಿಲ ಮೂಲಕ ಪರಾರಿಯಾಗಿರುವುದು ಪತ್ತೆಯಾಗಿದೆ. ಅಲ್ಲದೆ, ಸಿಸಿಟಿವಿ ದೃಶ್ಯಗಳನ್ನು ತಪಾಸಣೆ ಮಾಡುತ್ತಿದ್ದೇವೆ. ಆರೋಪಿ ಪತ್ತೆಗಾಗಿ ಹತ್ತು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಬಾಂದ್ರಾ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಮುಂಬೈ ಬಾಂದ್ರಾ ವಲಯ ಡಿಸಿಪಿ ದೀಕ್ಷಿತ್ ಕದಮ್ ತಿಳಿಸಿದ್ದಾರೆ.


ಬಾಂದ್ರಾದ ಸದ್ಗುರು ಶರಣ್ ಅಪಾರ್ಟ್ಮೆಂಟ್ ಕಟ್ಟಡದಲ್ಲಿರುವ 100 ಕೋಟಿಯ ಮನೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳದಲ್ಲಿ ತೀವ್ರ ತಪಾಸಣೆ ಕೈಗೊಂಡಿದ್ದಾರೆ. ಸಿಎನ್ ಬಿಸಿ ಟಿವಿ 18 ಮಾಧ್ಯಮ ವರದಿ ಪ್ರಕಾರ, ಆಗಂತುಕ ಸೈಫ್ ಆಲಿ ಖಾನ್ ಅವರ ಮಗು ಮಲಗಿದ್ದ ಬೆಡ್ ರೂಮಿನಲ್ಲಿ ಅಡಗಿಕೊಂಡಿದ್ದ. ಮನೆ ಕೆಲಸಕ್ಕಿದ್ದ ಅರಿಯಮ್ಮ ಫಿಲಿಪ್ಸ್ ಆಗಂತುಕ ವ್ಯಕ್ತಿಯನ್ನು ನೋಡಿ ಕಿರುಚಿದ್ದಾಳೆ. ಈ ವೇಳೆ ಆಕೆಯ ಮೇಲೆ ಆಗಂತುಕ ದಾಳಿ ಮಾಡಿದ್ದಾನೆ. ಇಷ್ಟರಲ್ಲೇ ಮಗು ಚೀರಾಡಿದ್ದು, ಸದ್ದು ಕೇಳಿ ಸೈಫ್ ಆಲಿ ಖಾನ್ ಕೋಣೆಗೆ ಎಂಟ್ರಿ ಕೊಟ್ಟಿದ್ದಾರೆ. ಮಗುವಿನ ರಕ್ಷಣೆಗಾಗಿ ವ್ಯಕ್ತಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ, ಆಗಂತುಕ ಚೂರಿಯಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಯ ಸ್ಪಷ್ಟ ಚಿತ್ರಣ ಇನ್ನೂ ಲಭಿಸಿಲ್ಲ. ಹೀಗಾಗಿ ಬಂದಿದ್ದ ಆಗಂತುಕ ದರೋಡೆಗಾಗಿಯೇ ಬಂದಿದ್ದನೇ ಬೇರಾವುದೇ ಉದ್ದೇಶದಿಂದ ಮನೆಯೊಳಗೆ ಹೊಕ್ಕಿದ್ದನೇ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಗಂತುಕ ವ್ಯಕ್ತಿ ಮನೆಗೆ ಎಂಟ್ರಿ ಕೊಟ್ಟಿದ್ದು ಹೇಗೆ, ಮೊದಲೇ ಬಂದು ಮನೆಯೊಳಗೆ ಅಡಗಿಕೊಂಡಿದ್ದನೇ ಎನ್ನುವ ಬಗ್ಗೆಯೂ ತಿಳಿದಿಲ್ಲ. ಕೆಲವು ದಿನಗಳ ಹಿಂದೆ ಮನೆಗೆ ನೆಲಕ್ಕೆ ಪಾಲಿಶಿಂಗ್ ಮಾಡುವುದಕ್ಕಾಗಿ ಕಾರ್ಮಿಕರು ಬಂದಿದ್ದರು. ಈ ಬಗ್ಗೆ ಸೈಫ್ ಅವರ ಮೂವರು ಸ್ಟಾಫ್ ಸಿಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ, ಆಗಂತುಕ ಕಿಟಕಿ ಮೂಲಕ ಎಂಟ್ರಿ ಕೊಟ್ಟಿದ್ದಾನೆ. ಕಿಟಕಿ ಒಡೆದು ಹೋಗಿರುವುದು ಪತ್ತೆಯಾಗಿದೆ ಎನ್ನುವ ಮಾಹಿತಿ ಇದೆ. ಸೈಫ್ ಆಲಿ ಖಾನ್ ಜನಪ್ರಿಯ ನಟಿ ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.
Bollywood actor Saif Ali Khan has been stabbed after an intruder invaded his home in Mumbai. Khan, 54, was taken to a nearby hospital in Mumbai at about 3:30am on Thursday (22:00 GMT on Wednesday) with six injuries, two deeper than the rest and one close to his spine, ANI news agency said, quoting the hospital’s chief operating officer.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm