Kasargod News, Crime: ಉಕ್ಕಿನಡ್ಕ ; ಕೆರೆಗೆ ಬಿದ್ದು ತಾಯಿ- ಮಗು ಮೃತ್ಯು, ಬದಿಯಡ್ಕ ಠಾಣೆಯಲ್ಲಿ ಸಂಶಯಾಸ್ಪದ ಕೇಸು

22-02-25 01:31 pm       HK News Desk   ದೇಶ - ವಿದೇಶ

ಕೆರೆಗೆ ಬಿದ್ದು ತಾಯಿ ಮತ್ತು ಮಗು ಸಾವನಪ್ಪಿದ ಘಟನೆ ಪೆರ್ಲ- ಉಕ್ಕಿನಡ್ಕ ಬಳಿಯ ಎಳ್ಕಾನ ಎಂಬಲ್ಲಿ ನಡೆದಿದೆ. ಎಳ್ಕಾನ ನಿವಾಸಿಗಳಾದ ಪರಮೇಶ್ವರಿ (42) ಮತ್ತು ಅವರ ಪುತ್ರಿ ಪದ್ಮಿನಿ (2) ಕೆರೆಗೆ ಬಿದ್ದವರು. 

ಕಾಸರಗೋಡು, ಫೆ.22: ಕೆರೆಗೆ ಬಿದ್ದು ತಾಯಿ ಮತ್ತು ಮಗು ಸಾವನಪ್ಪಿದ ಘಟನೆ ಪೆರ್ಲ- ಉಕ್ಕಿನಡ್ಕ ಬಳಿಯ ಎಳ್ಕಾನ ಎಂಬಲ್ಲಿ ನಡೆದಿದೆ. ಎಳ್ಕಾನ ನಿವಾಸಿಗಳಾದ ಪರಮೇಶ್ವರಿ (42) ಮತ್ತು ಅವರ ಪುತ್ರಿ ಪದ್ಮಿನಿ (2) ಕೆರೆಗೆ ಬಿದ್ದವರು. 

ಪರಮೇಶ್ವರಿಯವರ ಪತಿ ಮತ್ತು ಮಗ ಬೆಳಗ್ಗೆ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಮನೆಯಿಂದ ಹೊರಟಿದ್ದರು. ಸಂಜೆ ಮನೆಗೆ ಹಿಂತಿರುಗಿದಾಗ, ತಾಯಿ ಮತ್ತು ಮಗು ಇಬ್ಬರೂ ಕಾಣದಾಗಿದ್ದರು. ಹುಡುಕಾಟ ನಡೆಸಿದಾಗ, ಮನೆ ಬಳಿಯ ತೋಟ ಕೆರೆಯಲ್ಲಿ ಶವ ಪತ್ತೆಯಾಗಿವೆ. 

ಸ್ಥಳೀಯರು ಅವರನ್ನು ಕೆರೆಯಿಂದ ಮೇಲೆತ್ತಿ ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಿದ್ದು ಅಷ್ಟರಲ್ಲಿ ಮೃತಪಟ್ಟಿದ್ದಾರೆ. ತಾಯಿ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೇ, ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದರೇ ಎನ್ನುವ ಬಗ್ಗೆ ಪೊಲೀಸರು ತ‌ನಿಖೆ ನಡೆಸುತ್ತಿದ್ದಾರೆ. ಸ್ಥಳೀಯರ ಪ್ರಕಾರ, ಮಗು ಆಟವಾಡುವಾಗ ಆಕಸ್ಮಿಕವಾಗಿ ಕೆರೆಗೆ ಜಾರಿರಬಹುದು. ಇದನ್ನು ನೋಡಿದ ತಾಯಿ ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ್ದರಿಂದ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಘಟನೆ ಕುರಿತು ಬದಿಯಡ್ಕ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

A woman and her two year child were found dead in a lake of a plantation at Elkana in Perla Ukkinadka on Friday evening. The deceased are Parameshwari (42) and her daughter Padmini (2).