ಬ್ರೇಕಿಂಗ್ ನ್ಯೂಸ್
07-05-25 10:45 pm HK News Desk ದೇಶ - ವಿದೇಶ
ನವದೆಹಲಿ, ಮೇ 7 : ಪಾಕಿಸ್ತಾನದ ಬಹವಾಲ್ಪುರ ನಗರದಲ್ಲಿರುವ ಜೈಶ್-ಎ ಮೊಹಮ್ಮದ್ ಉಗ್ರರ ನೆಲೆ ಮತ್ತು ಅದರ ಮುಖ್ಯಸ್ಥ ಮೌಲಾನಾ ಅಜರ್ ಮಸೂದ್ ನಿವಾಸ ಇರುವ (ಮರ್ಕಜ್ ಸುಭಾನ್ ಅಲ್ಲಾ) ಕಟ್ಟಡದ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು ಮಸೂದ್ ಅಜರ್ನ ಪತ್ನಿ, ಮಗ ಮತ್ತು ಅಕ್ಕ ಸೇರಿದಂತೆ ಅವನ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದಾರೆ.
ಸ್ಥಳೀಯ ಟಿವಿ ವರದಿಗಳ ಪ್ರಕಾರ, ಮಸೂದ್ನ ಅಕ್ಕ, ಭಾವ ಮತ್ತು ನಾಲ್ವರು ಆಪ್ತ ಸಹಾಯಕರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು ಮೌಲಾನಾ ಕಾಶಿಫ್, ಆತನ ಕುಟುಂಬ, ಮೌಲಾನಾ ಅಬ್ದುಲ್ ರೌಫ್ ಅವರ ಹಿರಿಯ ಮಗಳು, ಮೊಮ್ಮಗ ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ದಾಳಿಯಲ್ಲಿ ತನ್ನ ಕುಟುಂಬ ಖಾಲಿಯಾದ ನಂತರ ಮಸೂದ್ ಅಜರ್ ಆಕ್ರೋಶಗೊಂಡಿದ್ದಾನೆ. 'ನಾನು ಕೂಡ ಸತ್ತಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಹೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾರತೀಯ ವಾಯುಪಡೆ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ಮಾಡಿದಾಗ ಇವರೆಲ್ಲ ಮರ್ಕಜ್ ಆವರಣದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಬಹಾವಲ್ಪುರ್ ಪ್ರದೇಶದ ಸುಭಾನ್ ಅಲ್ಲಾ ಕೇಂದ್ರವನ್ನು ಭಾರತದ ಮಿಲಿಟರಿ ಗುರಿಯಾಗಿಸಿತ್ತು. ಪಾಕಿಸ್ತಾನ ಸೇನಾ ವಕ್ತಾರರ ಪ್ರಕಾರ, ಸುಭಾನಲ್ಲಾ ಮಸೀದಿಯ ಮೇಲೆ ನಾಲ್ಕು ದಾಳಿಗಳು ನಡೆದಿದ್ದು ಒಂದು ಮಸೀದಿ ಸಂಪೂರ್ಣ ನಾಶವಾಗಿದೆ. ಬಹವಾಲ್ಪುರ್ ನಿಷೇಧಿತ ಸಂಘಟನೆ ಜೈಶ್-ಎ-ಮೊಹಮ್ಮದ್ ಉಗ್ರರ ಕೇಂದ್ರ ಕಚೇರಿಯೂ ಆಗಿದೆ.
Masood Azhar, the chief of terror group Jaish-e-Mohammed, lost 10 family members and four close aides in ‘Operation Sindoor’, a major cross-border strike by the Indian Army targeting terror camps across Pakistan and Pakistan-occupied Kashmir
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm