ಬ್ರೇಕಿಂಗ್ ನ್ಯೂಸ್
14-05-25 07:33 pm HK News Desk ದೇಶ - ವಿದೇಶ
ನವದೆಹಲಿ, ಮೇ 14 : ಅಕಸ್ಮಾತ್ತಾಗಿ ಪಾಕಿಸ್ತಾನದ ವಶಕ್ಕೆ ಒಳಗಾಗಿದ್ದ ಗಡಿ ಭದ್ರತಾ ಪಡೆಯ ಯೋಧ ಕೊನೆಗೂ ಸುರಕ್ಷಿತವಾಗಿ ಮರಳಿ ಬಂದಿದ್ದಾರೆ. ಪಾಕಿಸ್ತಾನ ಸೇನೆಯು ಬುಧವಾರ ಬೆಳಗ್ಗೆ 10.30ಕ್ಕೆ ಅಟ್ಟಾರಿ ವಾಘಾ ಗಡಿಯ ಮೂಲಕ ಬಿಎಸ್ಎಫ್ ಕಾನ್ಸ್ಟೇಬಲ್ ಪೂರ್ಣಮ್ ಕುಮಾರ್ ಶಾ ಅವರನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಏಪ್ರಿಲ್ 23 ರಂದು ಆಕಸ್ಮಿಕವಾಗಿ ಪಾಕ್ ಗಡಿಯೊಳಗೆ ಪ್ರವೇಶಿಸಿದ ಶಾ ಅವರನ್ನು 20 ದಿನಗಳ ಕಾಲ ಪಾಕಿಸ್ತಾನಿ ಸೇನೆ ತನ್ನ ವಶದಲ್ಲಿರಿಸಿಕೊಂಡಿತ್ತು. ಯೋಧ ಪೂರ್ಣಮ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಮನೆಗೆ ತೆರಳುವ ಮೊದಲು ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಲಿದ್ದಾರೆ.
ಬಿಎಸ್ಎಫ್ ವಿಭಾಗದಲ್ಲಿ 182ನೇ ಬೆಟಾಲಿಯನ್ ಯೋಧರಾಗಿದ್ದ ಪೂರ್ಣಮ್ ಕುಮಾರ್ ಶಾ ಪಂಜಾಬ್ನ ಫಿರೋಜ್ಪುರ ಗಡಿಭಾಗದಲ್ಲಿ ಆಕಸ್ಮಿಕವಾಗಿ ಸ್ಥಳೀಯ ರೈತರೊಂದಿಗೆ ಪಾಕಿಸ್ತಾನ ಪ್ರವೇಶಿಸಿದ್ದರು. ಸೇನಾ ಸಮವಸ್ತ್ರ ಧರಿಸಿದ್ದ ಪೂರ್ಣಮ್ ಅವರು ವಿಶ್ರಾಂತಿ ಪಡೆಯಲೆಂದು ಸ್ಥಳೀಯ ರೈತರ ಜತೆ ಗಡಿಭಾಗದ ವ್ಯಾಪ್ತಿ ತಿಳಿಯದೆ ಪಾಕಿಸ್ತಾನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ, ಪಾಕಿಸ್ತಾನದ ರೇಂಜರ್ಸ್ ಯೋಧನನ್ನು ವಶಕ್ಕೆ ಪಡೆದಿದ್ದರು. ಯೋಧನ ಬಿಡುಗಡೆಗೆ ಉನ್ನತ ಮಟ್ಟದ ಮಾತುಕತೆ ನಡೆದಿತ್ತಾದರೂ, ಗಡಿಯಲ್ಲಿ ಯುದ್ಧ ಸನ್ನಿವೇಶ ಎದುರಾಗಿದ್ದರಿಂದ ಬಿಡುಗಡೆ ಆಗಿರಲಿಲ್ಲ.
ಉದ್ವಿಗ್ನ ಸ್ಥಿತಿಯ ನಡುವೆ ಯೋಧನ ಬಿಡುಗಡೆಗೆ ಪಾಕಿಸ್ತಾನ ನಿರಾಕರಿಸಿದರೂ, ಮಾತುಕತೆ ಮುಂದುವರಿದಿತ್ತು. ದೇಶದ ರಕ್ಷಣೆಗೆ ಸೇವೆ ಸಲ್ಲಿಸುತ್ತಿರುವ ನಮ್ಮ ಮಗನನ್ನು ಸರಕಾರ ಸುರಕ್ಷಿತವಾಗಿ ಬಿಡುಗಡೆ ಮಾಡಿಸುವ ವಿಶ್ವಾಸವಿದೆ ಎಂದು ಯೋಧನ ತಂದೆ ಭೋಲಾನಾಥ್ ತಿಳಿಸಿದ್ದರು.
A Border Security Force (BSF) Constable, who had inadvertently crossed into Pakistani territory along the Punjab border on April 23, was repatriated on Wednesday by the Pakistan Rangers. The exchange took place at the Attari-Wagah border at around 10:30 a.m., according to an official statement issued by the BSF.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm