ಬ್ರೇಕಿಂಗ್ ನ್ಯೂಸ್
01-06-25 12:35 pm HK News Desk ದೇಶ - ವಿದೇಶ
ಕೊಲ್ಲಂ, ಮೇ 31 : ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಕೆಳಗಡೆ ನಿಂತುಕೊಂಡಿದ್ದ ಕಂಟ್ರಾಕ್ಟರ್ ಅದನ್ನು ನೋಡಿ ಕ್ಯಾಚ್ ಹಿಡಿದು ರಕ್ಷಣೆ ಮಾಡಿದ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಎರಡನೇ ಮಹಡಿಯಲ್ಲಿ ಕಾಂಕ್ರೀಟ್ ಕಿಟಕಿಯನ್ನು ಹೊಂದಿಸುತ್ತಿದ್ದಾಗ ಹೊರಭಾಗದಲ್ಲಿ ನಿಂತುಕೊಂಡಿದ್ದ ಶಂಕರ್ ಎಂಬ ಕೆಲಸದಾಳು ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಕೆಲಸದ ಕಂಟ್ರಾಕ್ಟರ್ ಆಗಿದ್ದ ಗಣೇಶ್ ಕೆಳಭಾಗದಲ್ಲಿದ್ದುಕೊಂಡು ಕಾರ್ಮಿಕರ ಕೆಲಸವನ್ನು ಗಮನಿಸುತ್ತ ಜಾಗ್ರತೆ ಎನ್ನುತ್ತಿದ್ದ. ಅಷ್ಟರಲ್ಲೇ ಶಂಕರ್ ಮೇಲ್ಭಾಗದಿಂದ ಕೆಳಕ್ಕೆ ಬಿದ್ದಿದ್ದು, ಅರೆಕ್ಷಣದಲ್ಲಿ ಮೇಲಿನಿಂದ ಬಿದ್ದ ಕಾರ್ಮಿಕನನ್ನು ಕ್ಯಾಚ್ ಹಿಡಿದು ಇಬ್ಬರೂ ನೆಲಕ್ಕೆ ಬಿದ್ದಿದ್ದಾರೆ. ಇಬ್ಬರೂ ಧೊಪ್ಪನೆ ನೆಲಕ್ಕೆ ಬೀಳುವ ದೃಶ್ಯ ಪಕ್ಕದ ಕಟ್ಟಡದ ವಿಡಿಯೋದಲ್ಲಿ ಸೆರೆಯಾಗಿದೆ.
ಗಣೇಶ್ ತನ್ನ ಸೊಂಟ ನೋವಿಗೆಂದು ಬೆಲ್ಟ್ ಹಾಕ್ಕೊಂಡಿದ್ದರು. ಮೇಲಿನಿಂದ ಬಿದ್ದ ಕಾರ್ಮಿಕನನ್ನು ಕ್ಯಾಚ್ ಹಿಡಿದಿದ್ದರಿಂದ ಅವರ ಬಲದ ಕಾಲಿಗೆ ತುಸು ಪೆಟ್ಟಾಗಿದೆ. ಶಂಕರ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ಆನಂತರ, ಅಲ್ಲಿಯೇ ಕೆಲಸ ಆರಂಭಿಸಿದ್ದಾನೆ. ಗಣೇಶ್ ಮತ್ತು ಶಂಕರ್ ಕಳೆದ 25 ವರ್ಷಗಳಿಂದ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ. ಗಣೇಶ್ ಪ್ರತಿಕ್ರಿಯಿಸಿದ್ದು, ದೇವರ ದಯೆಯಲ್ಲಿ ಏನೂ ಆಗದೆ ಉಳಿದುಕೊಂಡಿದ್ದೇವೆ, ಅಕಸ್ಮಾತ್ ಕೆಳಕ್ಕೆ ಬಿದ್ದಿದ್ದಾನೆ. ಅಲ್ಲಿಯೇ ಇದ್ದುದರಿಂದ ಏನೋ ಕ್ಯಾಚ್ ಹಿಡಿಯಲು ಟ್ರೈ ಮಾಡಿದ್ದೇನೆ, ಇಬ್ಬರೂ ಬಚಾವಾಗಿದ್ದೇವೆ ಎಂದಿದ್ದಾರೆ.
കൊല്ലം പുനലൂരിൽ വീട് പണിക്കിടെ രണ്ടാം നിലയിൽ നിന്ന് വീണ തൊഴിലാളി അത്ഭുതകരമായി രക്ഷപ്പെട്ടു. കാൽ വഴുതി താഴേക്ക് വീണ ശങ്കറിനെ കരാറുകാരനായ ഗണേശൻ രക്ഷപ്പെടുത്തുകയായിരുന്നു#Accident #Kollam pic.twitter.com/V0Km9VPXK0
— Asianet News (@AsianetNewsML) May 28, 2025
A contractor in Kerala’s Kollam district caught a worker in his arms when he fell from the second floor of an under-construction house. The fall-and-rescue incident was captured on CCTV.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm