ಬ್ರೇಕಿಂಗ್ ನ್ಯೂಸ್
07-06-25 07:10 pm HK News Desk ದೇಶ - ವಿದೇಶ
ನವದೆಹಲಿ, ಜೂನ್.7: ಇಂಟರ್ನೆಟ್ ಸಿಗದ ಹಳ್ಳಿಗಳಲ್ಲು ಶೀಘ್ರದಲ್ಲೇ ಉಪಗ್ರಹ ಆಧರಿತ ಪ್ರಬಲ ಇಂಟರ್ನೆಟ್ ಸೇವೆ ಸಿಗಲಿದೆ. ಜಗತ್ತಿನ ಅತಿ ಸಿರಿವಂತ ಉದ್ಯಮಿ, ಅಮೆರಿಕ್ ಎಲಾನ್ ಮಸ್ಕ್ ಒಡೆತನದ ಸ್ಟಾರ್ಲಿಂಕ್ ಗೆ ಅಂತರ್ಜಾಲ ಸೇವೆ ಆರಂಭಿಸಲು ಭಾರತ ಸರ್ಕಾರವು ಅನುಮತಿ ನೀಡಿದೆ.
ದೇಶದಲ್ಲಿ ಉಪಗ್ರಹ ಸೇವೆಯನ್ನು ಪ್ರಾರಂಭಿಸಲು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸ್ಟಾರ್ಲಿಂಕ್ಗೆ ಪರವಾನಗಿ ನೀಡಲಾಗಿದೆ. ಸ್ಯಾಟಲೈಟ್ ಆಧರಿತ ಇಂಟರ್ನೆಟ್ ಸೇವೆಗಾಗಿ ಭಾರತ ಸರ್ಕಾರದಿಂದ ಅನುಮೋದನೆ ಪಡೆದ ಮೂರನೇ ಕಂಪನಿ ಸ್ಟಾರ್ಲಿಂಕ್ ಆಗಿದೆ. ಇದಕ್ಕೂ ಮೊದಲು ಸರ್ಕಾರ ಜಿಯೋ ಮತ್ತು ಏರ್ಟೆಲ್ಗೆ ಪರವಾನಗಿ ನೀಡಿತ್ತು. ಸರ್ಕಾರದಿಂದ ಪರವಾನಗಿ ಪಡೆಯುವ ಮೊದಲು, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸ್ಟಾರ್ಲಿಂಕ್ ಸ್ಯಾಟ್ಕಾಮ್ಗೆ ಶೀಘ್ರದಲ್ಲೇ ಪರವಾನಗಿ ನೀಡಲಾಗುತ್ತದೆ ಎಂದು ಹೇಳಿದ್ದರು.
GMPCS ಪರವಾನಗಿ ಪಡೆದ ನಂತರ, ಈಗ ಸ್ಟಾರ್ಲಿಂಕ್ಗೆ ಒಂದೇ ಒಂದು ಸವಾಲು ಇದೆ. ಭಾರತದಲ್ಲಿ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಲು ಕಂಪನಿಯು IN-SPACE ನಿಂದ ಅನುಮೋದನೆ ಪಡೆಯಬೇಕಾಗುತ್ತದೆ. ಈ ಅನುಮೋದನೆ ಪಡೆದ ನಂತರ, ಬಳಕೆದಾರರು ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ.
ಭಾರತದಲ್ಲಿ ಸ್ಟಾರ್ಲಿಂಕ್ ಪ್ರವೇಶಕ್ಕಾಗಿ ಎಲಾನ್ ಮಸ್ಕ್ 2022ರಿಂದ ನಿರಂತರ ಪ್ರಯತ್ನ ನಡೆಸಿದ್ದರು. ಇದೇ ವೇಳೆ, ಅಮೆಜಾನ್ನ ಕೈಪರ್ ಕಂಪನಿ ಕೂಡ ಭಾರತದಲ್ಲಿ ಉಪಗ್ರಹ ಇಂಟರ್ನೆಟ್ ಸೇವೆ ನೀಡುವುದಕ್ಕಾಗಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಕಂಪನಿಯು ಭಾರತ ಸರ್ಕಾರಕ್ಕೂ ಅರ್ಜಿ ಸಲ್ಲಿಸಿದೆ. ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಹೊಯ್ದಾಟ ಶುರುವಾಗಿದ್ದು ಜಾಲತಾಣದಲ್ಲಿ ಅಲಾನ್ ಮಸ್ಕ್ ಮತ್ತು ಟ್ರಂಪ್ ಪರಸ್ಪರ ಬೈದಾಡಿಕೊಂಡಿದ್ದಾರೆ. ಇಂಥ ಹೊತ್ತಲ್ಲೇ ಭಾರತದಲ್ಲಿ ಉಪಗ್ರಹ ಆಧರಿತ ಸೇವೆಗೆ ಅನುಮೋದನೆ ನೀಡಲಾಗಿದೆ. ಜಿಯೋ ಕಂಪನಿಯ ಆಕ್ಷೇಪ ಮಧ್ಯೆಯೂ ಸ್ಟಾರ್ ಲಿಂಕ್ ಕಂಪನಿಗೆ ಅನುಮತಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
The Indian government has recently approved Elon Musk's proposal to bring Starlink services to India. While the company may take some time to activate services in the country, it is surely a turning point for the internet in India. Why? Starlink, already available in 100 countries, is a satellite broadband initiative from SpaceX, and is on a mission to revolutionise internet connectivity by beaming high-speed access from space. Now that it is coming to India, the internet will reach every nook and corner of the country.
24-06-25 05:23 pm
Bangalore Correspondent
Lokayukta Raid, Karnataka: ಬೆಂಗಳೂರು, ಶಿವಮೊಗ್ಗ...
24-06-25 01:53 pm
Kodi Sri ; ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವ...
22-06-25 07:52 pm
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 01:36 pm
Mangalore Correspondent
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm