ಬ್ರೇಕಿಂಗ್ ನ್ಯೂಸ್
23-06-25 04:37 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 23 : ಟಾಮಿ ಜೆನೆಸಿಸ್ ಎಂದೇ ಹೆಸರಾಗಿರುವ ಕೆನಡಾದಲ್ಲಿ ನೆಲೆಸಿರುವ ಭಾರತ ಮೂಲದ ರ್ಯಾಪರ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಹೊಸ ಆಲ್ಬಂ ವೀಡಿಯೊದಲ್ಲಿ ಅವರು ನೀಲಿ ದೇಹದ ಬಣ್ಣ, ಚಿನ್ನದ ಆಭರಣಗಳು ಮತ್ತು ಕೆಂಪು ಬಿಂದಿಯೊಂದಿಗೆ ಹಿಂದೂ ದೇವತೆಯಂತೆ ಕಾಣಿಸಿಕೊಂಡಿದ್ದು, ಅಲ್ಲದೆ, ಕ್ರಿಶ್ಚಿಯನ್ನರು ಪವಿತ್ರ ಎಂದು ನಂಬುವ ಶಿಲುಬೆಯನ್ನು ನೆಕ್ಕುವಂತೆ ವರ್ತಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವೀಡಿಯೊದಲ್ಲಿ ಜೆನೆಸಿಸ್ ಶಿಲುಬೆಯನ್ನು ನೆಕ್ಕುವುದು ಮತ್ತು ಅದನ್ನು ಎದೆಯ ಮೇಲಿಟ್ಟುಕೊಂಡು ಪೋಸ್ ನೀಡುವುದನ್ನು ಕಾಣಬಹುದು. ಈ ದೃಶ್ಯವು ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಜನರನ್ನು ಕೆರಳಿಸಿದ್ದು 'ದೇವದೂಷಣೆ' ಎಂದು ಕರೆದಿದ್ದಾರೆ.


ಮೈಯ್ಯೆಲ್ಲಾ ಕಡು ನೀಲಿ ಬಣ್ಣವನ್ನು ಬಳಿದುಕೊಂಡು ಚಿನ್ನದ ಆಭರಣಗಳು ಹಾಗೂ ಮೈಯ್ಯೆಲ್ಲಾ ಕಾಣುವಂತೆ ಅರೆಬರೆ ಉಡುಗೆ ಧರಿಸಿದ್ದಾಳೆ. ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾಳೆ. ಇಡೀ ವಿಡಿಯೋದಲ್ಲಿ ಅಶ್ಲೀಲವೆನಿಸುವಂಥ ಭಂಗಿಯಲ್ಲಿ ಕಾಣಿಸಿಕೊಂಡು ಮಂದಗತಿಯಲ್ಲಿ ನೃತ್ಯ ಮಾಡುತ್ತಾ, ತಾನು ಕೈಯ್ಯಲ್ಲಿ ಹಿಡಿದಿರುವ ಶಿಲುಬೆಯನ್ನು ನೆಕ್ಕುತ್ತಾಳೆ. ಅಷ್ಟೇ ಅಲ್ಲ ಅಂಗಾತ ಮಲಗಿ, ಒಂದು ಪುಸ್ತಕವನ್ನು ತನ್ನ ಕಿಬ್ಬೊಟ್ಟೆಯ ಮೇಲೆ ಇಟ್ಟುಕೊಂಡು ಶಿಲುಬೆಯನ್ನು ತನ್ನ ಹೊಟ್ಟೆಯ ಮೇಲ್ಭಾಗದಲ್ಲಿ ಇಟ್ಟಿರುವ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ರ್ಯಾಪರ್ ಟಾಮಿ ಜೆನೆಸಿಸ್ ಅವರ 'ಟ್ರೂ ಬ್ಲೂ' ಸಂಗೀತ ವೀಡಿಯೊದಲ್ಲಿನ ಈ ದೃಶ್ಯಗಳಿಗಾಗಿ ಬಲವಾಗಿ ಟೀಕಿಸಿದ್ದಾರೆ. ಧಾರ್ಮಿಕ ಸಮುದಾಯಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಿಂದೂ ಭಾವನೆಗಳನ್ನು ನೋಯಿಸಲು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾಳೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಯಾಸ್ಮಿನ್ ಮೋಹನರಾಜ್ ಕೆನಡಾದ ವ್ಯಾಂಕೋವರ್ನಲ್ಲಿ ಜನಿಸಿದ್ದು ತಮಿಳು ಮತ್ತು ಸ್ವೀಡಿಷ್ ಹಿನ್ನೆಲೆಯಿಂದ ಬಂದವರು. ದಿಟ್ಟ ಶೈಲಿಗೆ ಹೆಸರಾಗಿದ್ದು ಆಗಾಗ್ಗೆ ಪ್ರಚೋದನಕಾರಿ ಹಾಡುಗಳೊಂದಿಗೆ ಜಾಲತಾಣದಲ್ಲಿ ಕಾಣಿಸುತ್ತಾರೆ. ಪ್ರಚಾರಕ್ಕಾಗಿ ಚೀಪ್ ಸ್ಟಂಟ್ ಮಾಡಿರುವಂತೆ ತೋರುತ್ತಿದೆ.
Tommy Genesis, the Canadian rapper of Indian origin whose real name is Genesis Yasmine Mohanraj, has landed in controversy following the release of her latest music video. In the video for her new album, she appears with blue body paint, gold jewelry, a red bindi, and attire resembling Hindu deity iconography—while also engaging with Christian symbols in a provocative manner.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 11:47 am
HK News Staffer
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm