ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ; ಹೈಕೋರ್ಟಿಗೆ ಆಯೋಗ ಅಫಿಡವಿಟ್ 

25-10-25 09:36 pm       HK News Desk   ದೇಶ - ವಿದೇಶ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ತಮಿಳುನಾಡಿನಲ್ಲಿ ಮುಂದಿನ ವಾರದಿಂದಲೇ ಆರಂಭಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಮದ್ರಾಸ್‌ ಹೈಕೋರ್ಟ್‌ಗೆ ತಿಳಿಸಿದೆ.

ಚೆನ್ನೈ, ಅ.25 : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ತಮಿಳುನಾಡಿನಲ್ಲಿ ಮುಂದಿನ ವಾರದಿಂದಲೇ ಆರಂಭಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಮದ್ರಾಸ್‌ ಹೈಕೋರ್ಟ್‌ಗೆ ತಿಳಿಸಿದೆ.

ತಮಿಳುನಾಡು ಸೇರಿ ಸದ್ಯದಲ್ಲೇ ಅಸೆಂಬ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಬಿಹಾರ ಮಾದರಿಯಲ್ಲೇ ಎಸ್‌ಐಆರ್‌ ಪ್ರಕ್ರಿಯೆ ನಡೆಸಲಾಗುವುದು ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್‌ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಜಿ.ಅರುಳ್‌ ಮುರುಗನ್ ಅವರಿದ್ದ ಪೀಠದ ಮುಂದೆ ಆಯೋಗವು ಹೇಳಿಕೆ ನೀಡಿದೆ. 

ಚೆನ್ನೈನ ಟಿ.ನಗರ ವಿಧಾನಸಭಾ ಕ್ಷೇತ್ರದ 229 ಬೂತ್‌ಗಳಲ್ಲಿ ಸಂಪೂರ್ಣವಾಗಿ ಮತದಾರ ಪಟ್ಟಿಯನ್ನು ಪರಿಶೀಲನೆ ನಡೆಸುವಂತೆ ಎಐಎಡಿಎಂಕೆ ಮಾಜಿ ಶಾಸಕ ಬಿ.ಸತ್ಯನಾರಾಯಣ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ದೂರನ್ನು ಪರಿಗಣಿಸುವುದಾಗಿ ಆಯೋಗ ಹೈಕೋರ್ಟಿಗೆ ತಿಳಿಸಿದ್ದು ಡಿಎಂಕೆ ಪಕ್ಷಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ದೃಷ್ಟಿಯಿಂದ ಟಿ.ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಐಎಡಿಎಂಕೆ ಪಕ್ಷದ 13 ಸಾವಿರ ಬೆಂಬಲಿಗರ ಹೆಸರುಗಳನ್ನು 2021ರಲ್ಲಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತೆಗೆದುಹಾಕಿದ್ದರು. ಆದರೆ, ಸತ್ತವರ ಹೆಸರನ್ನು ತೆಗೆದುಹಾಕಿರಲಿಲ್ಲ. 1998ರಲ್ಲಿ ಕ್ಷೇತ್ರದಲ್ಲಿ 2,08,349 ಲಕ್ಷ ಮತದಾರರಿದ್ದು, 2021ರ ವೇಳೆಗೆ 36,656ರಷ್ಟು ಮಾತ್ರ ಏರಿಕೆಯಾಗಿದೆ. ಕ್ಷೇತ್ರದಲ್ಲಿರುವ ಜನಸಂಖ್ಯೆಗೂ ಹಾಗೂ ಮತದಾರರ ನಡುವೆ ದೊಡ್ಡ ಮಟ್ಟದ ಅಂತರವಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ಪರಿಷ್ಕರಣೆ ನಡೆಸಬೇಕು' ಎಂದು ಕೋರಿ ಬಿ.ಸತ್ಯನಾರಾಯಣ್‌ ಹೈಕೋರ್ಟ್ ಮೆಟ್ಟಿಲೇರಿದ್ದರು.

The Election Commission of India (ECI) has informed the Madras High Court that a Special Summary Revision (SSR) of the electoral rolls in Tamil Nadu will commence next week.