ಬ್ರೇಕಿಂಗ್ ನ್ಯೂಸ್
28-01-26 11:16 pm HK News Desk ದೇಶ - ವಿದೇಶ
ಮುಂಬೈ, ಜ.28 : ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರಿದ್ದ ವಿಮಾನ ಪತನಕ್ಕೆ ಮಂಜಿನಿಂದ ಆವೃತಗೊಂಡ ವಾತಾವರಣ ಮತ್ತು ಇದರಿಂದ ರನ್ ವೇ ಕಾಣದೇ ಇದ್ದುದೇ ಕಾರಣ ಎಂಬ ಮಾಹಿತಿ ಮೇಲ್ನೋಟಕ್ಕೆ ಕೇಳಿಬರುತ್ತಿದೆ. ಐದು ಜನರಿದ್ದ ವಿಮಾನವು ಬೆಳಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿದ್ದು, ಪುಣೆ ಜಿಲ್ಲೆಯ ಬಾರಾಮತಿ ನಿಲ್ದಾಣದಲ್ಲಿ 8.45ಕ್ಕೆ ಇಳಿಯಬೇಕಿತ್ತು. ಆದರೆ 5.50ರ ವೇಳೆಗೆ ರನ್ ವೇ ಬಳಿಯಲ್ಲೇ ಹೊರಗಡೆ ಪತನವಾಗಿತ್ತು.
8.18ರ ವೇಳೆಗೆ ವಿಮಾನದ ಪೈಲಟ್ ಬಾರಾಮತಿ ನಿಲ್ದಾಣವನ್ನು ಸಂಪರ್ಕಿಸಿದ್ದಾರೆ, ಬೆಳಕು ಮಂದವಾಗಿದ್ದು ರನ್ ವೇ ಸರಿಯಾಗಿ ಕಾಣಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಎಟಿಸಿಯಿಂದ ರನ್ ವೇ 11 ಖಾಲಿಯಿದ್ದು ಇಳಿಯಬಹುದು, ಫ್ಲೈಟ್ ಇಳಿಸುವುದು ನಿಮ್ಮ ವಿವೇಚನೆಗೆ ಬಿಟ್ಟದ್ದು ಎನ್ನುವ ಸಂದೇಶ ಹೋಗಿತ್ತು. ಆದರೆ ನಿಲ್ದಾಣಕ್ಕೆ ಒಂದು ಸುತ್ತು ಹೊಡೆದ ವಿಮಾನವು ಕೆಲವೇ ಕ್ಷಣಗಳಲ್ಲಿ ರನ್ ವೇಯಿಂದ ಹೊರಗಡೆ ಪತನವಾಗಿತ್ತು. ಲೀಯರ್ ಜೆಟ್ 45 ವಿಮಾನದಲ್ಲಿ ಯಾವುದೇ ತಾಂತ್ರಿಕ ತೊಂದರೆಗಳಿರಲಿಲ್ಲ. ಇಬ್ಬರು ಪೈಲಟ್ ಗಳೂ ಅನುಭವಿಗಳಾಗಿದ್ದು ಪ್ರಮುಖ ಪೈಲಟ್ ಸುಮಿತ್ ಕಪೂರ್ 16 ಸಾವಿರ ಕಿಮೀ ಹಾರಾಟದ ಅನುಭವ ಹೊಂದಿದ್ದರು, ಸಹ ಪೈಲಟ್ ಶಾಂಭವಿ ಪಾಠಕ್ 1500 ಕಿಮೀ ಹಾರಾಟದ ಅನುಭವ ಹೊಂದಿದ್ದರು ಎಂದು ವಿಮಾನದ ಕಂಪನಿ ತಿಳಿಸಿದೆ.
ವಿಮಾನ ಪತನವಾಗುತ್ತಲೇ ಎರಡು ಬಾರಿ ಸ್ಫೋಟಗೊಂಡಿದ್ದು, ಇದರ ಸದ್ದು ಕೇಳಿ ಸ್ಥಳೀಯರು ಓಡಿ ಬಂದಿದ್ದಾರೆ. ಸ್ಫೋಟ ಆಗುತ್ತಲೇ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ನಾವು ರಕ್ಷಣೆಗೆ ತೆರಳಿದ್ದೆವು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಜಿತ್ ಪವಾರ್ ಸೇರಿದಂತೆ ಸುಟ್ಟು ಹೋಗಿದ್ದ ದೇಹಗಳನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಅಷ್ಟರಲ್ಲಿಯೇ ಅವರೆಲ್ಲ ಮೃತಪಟ್ಟಿದ್ದರು. ಬಾರಾಮತಿ ವಿಮಾನ ನಿಲ್ದಾಣ ಟೇಬಲ್ ಟಾಪ್ ರೀತಿಯಿದ್ದು ಅಲ್ಲದೆ, ವಿಮಾನ ಲ್ಯಾಂಡಿಂಗ್ ವೇಳೆ ಆಧುನಿಕ ಮಾದರಿಯ ತಂತ್ರಜ್ಞಾನ ಹೊಂದಿಲ್ಲ.
ಮೂರು ದಿನಗಳ ಶೋಕಾಚರಣೆ
ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಮೂರು ದಿನಗಳಲ್ಲಿ ಎಲ್ಲ ರೀತಿಯ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ರಾಷ್ಟ್ರ ಧ್ವಜ ಹಾರಿಸುವ ಸ್ಥಳಗಳಲ್ಲಿ ಅರ್ಧಕ್ಕೆ ಧ್ವಜ ಇಳಿಸಲು ಸೂಚಿಸಲಾಗಿದೆ. ಅಜಿತ್ ಪವಾರ್ ಅಂತ್ಯಕ್ರಿಯೆ ಗುರುವಾರ ಬಾರಾಮತಿಯಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ, ಕಾಂಗ್ರೆಸಿನ ಗಣ್ಯರು ಭಾಗವಹಿಸಲಿದ್ದಾರೆ.
ಅಜಿತ್ ಪವಾರ್ ನಿಧನಕ್ಕೆ ದೇಶಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ. ಆದರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತ್ರ ಈ ದುರಂತದ ಹಿಂದೆ ಷಡ್ಯಂತ್ರವಿದ್ದು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಕೇಂದ್ರೀಯ ತನಿಖಾ ಏಜನ್ಸಿಗಳು ನಂಬಿಕೆ ಕಳಕೊಂಡಿವೆ, ಹೀಗಾಗಿ ಸುಪ್ರೀಂ ಮೇಲ್ವಿಚಾರಣೆಯಲ್ಲಿ ಮಾತ್ರ ತನಿಖೆ ನಡೆದರೆ ಸತ್ಯಾಂಶ ಹೊರಬರಬಹುದು ಎಂದಿದ್ದಾರೆ. ಆದರೆ ಮಮತಾ ಮಾತನ್ನು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ನಿರಾಕರಿಸಿದ್ದು, ವಿಮಾನ ಅಪಘಾತ ಆಕಸ್ಮಿಕ, ಇದರಲ್ಲೇನೂ ಸಂಶಯ ಇಲ್ಲ. ರಾಜಕೀಯ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ.
ಇದೇ ವೇಳೆ, ವಿಮಾನ ಅಪಘಾತದ ಬಗ್ಗೆ ಆಘಾತ ವ್ಯಕ್ತವಾಗಿದ್ದು ತನಿಖೆಗೆ ಕೇಂದ್ರ ವಿಮಾನ ಯಾನ ಸಚಿವಾಲಯ ಸೂಚಿಸಿದೆ. ಅಲ್ಲದೆ, ತನಿಖಾ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದು ಅಧಿಕಾರಿಗಳು ವಿಮಾನದ ಬ್ಲಾಕ್ ಬಾಕ್ಸ್ ಸೇರಿದಂತೆ ಸ್ಥಳದ ಪರಿಶೀಲನೆಗೆ ಮುಂದಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರವೂ ಘಟನೆ ಬಗ್ಗೆ ತನಿಖೆಗೆ ಆದೇಶ ಮಾಡಿದೆ.
Preliminary information suggests dense fog and poor runway visibility may have caused the plane crash that killed Maharashtra Deputy CM Ajit Pawar and others near Baramati. While Mamata Banerjee alleged conspiracy and demanded a Supreme Court–monitored probe, NCP chief Sharad Pawar dismissed such claims, calling the incident an accident.
17-02-26 10:33 pm
HK News Desk
Mohan Das Pai: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾ...
17-02-26 09:12 pm
ಫೇಲಾದವರನ್ನು ಪಾಸು ಮಾಡುವುದೇ ತಪ್ಪು ; ಕೇರಳದಲ್ಲಿ ಶ...
17-02-26 08:56 pm
ಕಾಪಿರೈಟ್ ಕದನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ...
17-02-26 02:53 pm
ದಂಪತಿಗೆ ಎರಡನೇ ಪ್ರೆಗ್ನೆನ್ಸಿ ಫೋಟೋಶೂಟ್ ಸಡಗರ ; ಮೂ...
15-02-26 10:38 pm
17-02-26 08:50 pm
HK Desk
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
17-02-26 12:42 pm
Mangaluru Staffer
Mangalore Ullal Accident: ಉಳ್ಳಾಲ ; ಅತಿ ವೇಗದಿಂ...
16-02-26 11:13 pm
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
17-02-26 03:03 pm
HK News Desk
ದಾವಣಗೆರೆ ಬೆನ್ನಲ್ಲೇ ಮಂಗಳೂರು ಕೋರ್ಟಿಗೂ ಬೆದರಿಕೆ ಸ...
16-02-26 04:01 pm
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm