ಬ್ರೇಕಿಂಗ್ ನ್ಯೂಸ್
27-02-26 06:14 am HK News Staffer ದೇಶ - ವಿದೇಶ
ಭುವನೇಶ್ವರ, ಫೆ.26: ಭುವನೇಶ್ವರದಲ್ಲಿ ನಡೆದ ವಿಜಿಲೆನ್ಸ್ ಕಾರ್ಯಾಚರಣೆ ಒಡಿಶಾ ರಾಜ್ಯದ ಭ್ರಷ್ಟಾಚಾರ ವಿರೋಧಿ ಇತಿಹಾಸದಲ್ಲಿ ಹೊಸ ಇತಿಹಾಸ ಬರೆದಿದೆ. ಕಟಕ್ ವೃತ್ತದ ಗಣಿ ಉಪ ನಿರ್ದೇಶಕ ದೇವಬ್ರತ ಮೊಹಂತಿ ಅವರನ್ನು ₹30,000 ಲಂಚ ಸ್ವೀಕರಿಸಿದ ಆರೋಪದ ಮೇಲೆ ಬುಧವಾರ ಬೆಳಗ್ಗೆ ಬಂಧಿಸಿದ ಕೆಲವೇ ಗಂಟೆಗಳಲ್ಲಿ, ಅವರ ನಿವಾಸದಲ್ಲಿ ನಡೆದ ಶೋಧದಲ್ಲಿ 4 ಕೋಟಿಗೂ ಅಧಿಕ ನಗದು ಪತ್ತೆಯಾಗಿದೆ. ಅಧಿಕಾರಿಗಳ ಪ್ರಕಾರ, ಇದು ಒಡಿಶಾ ವಿಜಿಲೆನ್ಸ್ ಇತಿಹಾಸದಲ್ಲೇ ಅತಿದೊಡ್ಡ ನಗದು ವಶಕ್ಕೆ ಪಡೆದಿರುವುದಾಗಿದೆ.
ಕಲ್ಲಿದ್ದಲು ಡಿಪೋದ ಸುಗಮ ಕಾರ್ಯಾಚರಣೆ ಮತ್ತು ಸಾರಿಗೆ ಅನುಮತಿ ನೀಡಲು ಪರವಾನಗಿ ಪಡೆದ ವ್ಯಾಪಾರಿಯಿಂದ ಲಂಚ ಬೇಡಿಕೆಯ ದೂರಿನ ಆಧಾರದ ಮೇಲೆ ವಿಜಿಲೆನ್ಸ್ ಇಲಾಖೆ ದೇಬಬ್ರತ್ ಮೊಹಂತಿ ಮೇಲೆ ಬಲೆ ಬೀಸಿತ್ತು. ಬಂಧನದ ಬಳಿಕ ಭುವನೇಶ್ವರ ವಿಜಿಲೆನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ವಿಸ್ತರಿಸಲಾಗಿತ್ತು. ನಂತರ ಭುವನೇಶ್ವರದಲ್ಲಿರುವ ಅವರ ವಸತಿ ಫ್ಲಾಟ್, ಭದ್ರಕ್ ಜಿಲ್ಲೆಯ ಮಾತಾಸಾಹಿಯಲ್ಲಿರುವ ಪೋಷಕರ ಮನೆ ಹಾಗೂ ಕಟಕ್ನಲ್ಲಿರುವ ಕಚೇರಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಯಿತು.
ಭುವನೇಶ್ವರದ ಫ್ಲಾಟ್ನಲ್ಲಿ ಟ್ರಾಲಿ ಬ್ಯಾಗ್ಗಳು ಮತ್ತು ಅಲ್ಮೆರಾಗಳಲ್ಲಿ ಸಂಗ್ರಹಿಸಲಾಗಿದ್ದ ಭಾರೀ ಪ್ರಮಾಣದ ನಗದು ಪತ್ತೆಯಾಗಿದೆ. ಇದರ ಜೊತೆಗೆ ಕಚೇರಿ ಡ್ರಾಯರ್ ಮತ್ತು ವೈಯಕ್ತಿಕ ವಶದಿಂದ ₹1.20 ಲಕ್ಷ ನಗದು, ಭುವನೇಶ್ವರದ ಪಹಲಾ ಪ್ರದೇಶದಲ್ಲಿರುವ ಸುಮಾರು 2,400 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಕಟ್ಟಡ ಮತ್ತು ಸುಮಾರು 130 ಗ್ರಾಂ ಚಿನ್ನಾಭರಣವೂ ಪತ್ತೆಯಾಗಿದೆ.
ಮೊಹಂತಿ 2004ರಲ್ಲಿ ಜೂನಿಯರ್ ಮೈನಿಂಗ್ ಆಫೀಸರ್ ಆಗಿ ಸರ್ಕಾರಿ ಸೇವೆಗೆ ಸೇರಿದ್ದರು. ಆಗ ಅವರ ಸಂಬಳ 8,000 ರೂ. ಇತ್ತು. ನಂತರ ಅವರು ಬರಿಪಾದ (2006-2008), ಬೆರ್ಹಾಂಪುರ್ (2009-2011), ಕಟಕ್ (2011-2014) ಮತ್ತು ಭುವನೇಶ್ವರದಲ್ಲಿರುವ ರಾಜ್ಯ ಪ್ರಧಾನ ಕಚೇರಿಯಲ್ಲಿ (2014-2018) ಸೇವೆ ಸಲ್ಲಿಸಿದ್ದರು. ಮಾರ್ಚ್ 2018 ರಲ್ಲಿ ಅವರನ್ನು ಸಹಾಯಕ ಗಣಿಗಾರಿಕೆ ಅಧಿಕಾರಿ ಆಗಿ ಬಡ್ತಿ ನೀಡಿ ಸಂಬಲ್ಪುರದಲ್ಲಿ ನಿಯೋಜಿಸಲಾಗಿತ್ತು. ಏಪ್ರಿಲ್ 2022 ರಿಂದ ಡಿಸೆಂಬರ್ 2025 ರವರೆಗೆ, ಅವರು ಫುಲ್ಬಾನಿಯಲ್ಲಿ ಗಣಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ದಾಳಿಯ ನಂತರ ಅವರ ಚರ ಮತ್ತು ಸ್ಥಿರ ಆಸ್ತಿಗಳ ಸಮಗ್ರ ಮೌಲ್ಯಮಾಪನ ನಡೆಯಲಿದೆ ಎಂದು ಭುವನೇಶ್ವರ ವಿಜಿಲೆನ್ಸ್ ವಿಭಾಗದ ಎಸ್ಪಿ ಸರೋಜ್ ಕುಮಾರ್ ಸಮಲ್ ತಿಳಿಸಿದ್ದಾರೆ.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am