ಬ್ರೇಕಿಂಗ್ ನ್ಯೂಸ್
28-02-26 05:28 pm HK News Desk ದೇಶ - ವಿದೇಶ
ನವದೆಹಲಿ, ಫೆ.28: ಬಹುಕಾಲದ ಉದ್ವಿಗ್ನತೆಯ ಬಳಿಕ ಅಮೆರಿಕ- ಇಸ್ರೇಲ್ ಸೇನೆಯು ಇರಾನ್ ಮೇಲೆ ಹಠಾತ್ ದಾಳಿ ಆರಂಭಿಸಿದೆ. ಶನಿವಾರ ಬೆಳಗ್ಗಿನಿಂದಲೇ ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿಯಾಗಿದೆ. ಇದರ ಬೆನ್ನಲ್ಲೇ ಇರಾನ್ ಕಡೆಯಿಂದ ಅಮೆರಿಕದ ಮಿಲಿಟರಿ ಬೇಸ್ ಇರುವ ಕತಾರ್, ಕುವೈತ್, ಯುಎಇ ಮೇಲೆ ಮಿಸೈಲ್ ದಾಳಿಯಾಗಿದೆ.
ದಕ್ಷಿಣ ಇರಾನ್ ಭಾಗದ ಮಿನಾಬ್ ನಗರದಲ್ಲಿ ಮಿಸೈಲ್ ದಾಳಿಗೆ ಐದು ಬಾಲಕಿಯರು ಸಾವನ್ನಪ್ಪಿದ್ದಾರೆಂದು ಇರಾನ್ ಮಾಧ್ಯಮ ಐಆರ್ ಎನ್ಎ ನ್ಯೂಸ್ ವರದಿ ಮಾಡಿದೆ. ಮಿನಾಬ್ ಸಿಟಿಯಲ್ಲಿ ಇರಾನ್ ಪ್ಯಾರಾ ಮಿಲಿಟರಿ ರೆವೊಲ್ಯುಶನರಿ ಗಾರ್ಡ್ ಬೇಸ್ ಇದ್ದು, ಅದನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿರುವ ಸಾಧ್ಯತೆಯಿದೆ. ಇದೇ ವೇಳೆ, ಇರಾನ್ ಭಾಗದಲ್ಲಿ ಹಲವಾರು ರೆವೊಲ್ಯುಶನರಿ ಗಾರ್ಡ್ ಯೋಧರು ಮೃತಪಟ್ಟಿದ್ದಾರೆ, ದಾಳಿಯಲ್ಲಿ ದೊಡ್ಡ ಯಶಸ್ಸು ಸಿಕ್ಕಿದೆ ಎಂದು ಇಸ್ರೇಲ್ ಹೇಳಿದೆ.


ಕತಾರ್, ಯುಎಇ ಮೇಲೆ ದಾಳಿಯಾಗಿರುವುದರಿಂದ ಕತಾರಿ ಏರ್ವೇಸ್ ಸೇರಿದಂತೆ ತಮ್ಮ ವಾಯುಪ್ರದೇಶದಲ್ಲಿ ವಿಮಾನ ಹಾರಾಟವನ್ನು ನಿಷೇಧಿಸಿದೆ. ಇದೇ ವೇಳೆ, ಇರಾನ್ ವಿದೇಶಾಂಗ ಇಲಾಖೆಯ ಹೇಳಿಕೆಯಲ್ಲಿ, ತವರು ನೆಲವನ್ನು ರಕ್ಷಿಸಿಕೊಳ್ಳುವ ಸಮಯ ಬಂದಿದೆ ಎಂದು ಅಮೆರಿಕ ದಾಳಿಗೆ ಪ್ರತಿಯಾಗಿ ಹೇಳಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಮಿಲಿಟರಿಯು, ತಿಂಗಳ ಕಾಲದ ಜಂಟಿ ಯೋಜನೆಯ ಬಳಿಕ ಇರಾನ್ ದೇಶದ ಡಜನ್ನಷ್ಟು ಮಿಲಿಟರಿ ಬೇಸನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದಿದೆ.
ಯುಎಇ, ಬೆಹ್ರೈನ್ ಮೇಲೆಯೂ ಇರಾನ್ ಕಡೆಯಿಂದ ಕ್ಷಿಪಣಿ ದಾಳಿಯಾಗಿದ್ದು, ದುಬೈನಲ್ಲಿ ಒಬ್ಬ ಪ್ರಜೆ ಸಾವಿಗೀಡಾಗಿದ್ದಾನೆ. ಹೀಗಾಗಿ ಯುಎಇ ಮತ್ತು ಬೆಹ್ರೈನ್ ದೇಶಗಳು ತಮ್ಮ ವಾಯು ಪ್ರದೇಶದಲ್ಲಿ ವಿಮಾನ ಹಾರಾಟವನ್ನು ನಿಷೇಧಿಸಿವೆ. ಕತಾರಿನಲ್ಲಿ ಎಲ್ಲ ಪ್ರಜೆಗಳು ತಮ್ಮ ಮನೆ ಅಥವಾ ಕಟ್ಟಡಗಳ ಒಳಗಡೆಯಲ್ಲೇ ಇರುವಂತೆ ಮತ್ತು ಮಿಲಿಟರಿ ಬೇಸ್ ಹತ್ತಿರ ಬರದಂತೆ ಸಲಹೆ ನೀಡಲಾಗಿದೆ. ಇರಾನ್ ಮೇಲೆ ದಾಳಿಯಾಗುತ್ತಿರುವುದರಿಂದ ಅಲ್ಲಿ ಮೊಬೈಲ್ ಇಂಟರ್ನೆಟ್ ಬ್ಯಾನ್ ಮಾಡಲಾಗಿದೆ. ರಾಜಧಾನಿ ಟೆಹ್ರಾನ್ ನಲ್ಲಿ ಹೆಚ್ಚುವರಿ ಭದ್ರತೆ ಏರ್ಪಡಿಸಿದ್ದು, ಖಮೇನಿ ನಿವಾಸಕ್ಕೆ ತೆರಳುವ ರಸ್ತೆಯನ್ನು ಬ್ಲಾಕ್ ಮಾಡಲಾಗಿದೆ.
ದಾಳಿ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ನಾವು ಫಿನಿಷ್ ಮಾಡಿದ ಕೂಡಲೇ ನೀವು ಅಧಿಕಾರಕ್ಕೇರಲು ಸಜ್ಜಾಗಿ. ನಿಮ್ಮ ಸರಕಾರವನ್ನು ನೀವೇ ಮಾಡಿಕೊಳ್ಳಿ. ಈಗಿನ ಜನರೇಶನ್ನಿಗೆ ಇದೊಂದು ಅಪೂರ್ವ ಅವಕಾಶ ಎಂದು ಹೇಳಿಕೊಂಡಿದ್ದಾರೆ. ಅಮೆರಿಕವು ಇರಾನ್ ಸುತ್ತಮುತ್ತ ಇರುವ ಕತಾರ್, ಕುವೈತ್, ಸೌದಿ ಅರೇಬಿಯಾ, ಯುಎಇ ದೇಶಗಳಲ್ಲಿ ತನ್ನ ಮಿಲಿಟರಿ ಬೇಸ್ ಮಾಡಿಕೊಂಡಿದ್ದು, ಇರಾನ್ ಈಗ ಅದನ್ನು ಗುರಿಯಾಗಿಸಿ ದಾಳಿ ಮಾಡತೊಡಗಿದೆ.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am