ಬ್ರೇಕಿಂಗ್ ನ್ಯೂಸ್
28-02-26 10:54 pm HK News Desk ದೇಶ - ವಿದೇಶ
ನವದೆಹಲಿ, ಫೆ.28: ಇರಾನ್ – ಇಸ್ರೇಲ್ – ಅಮೆರಿಕ ಸಂಘರ್ಷ ಹಿನ್ನೆಲೆಯಲ್ಲಿ ದುಬೈನತ್ತಲೂ ಮಿಸೈಲ್ ದಾಳಿ ಆಗುತ್ತಿರುವುದರಿಂದ ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಎಲ್ಲ ಜನರು ತೆರವಾಗುವಂತೆ ಸೂಚಿಸಲಾಗಿದೆ.
ಇರಾನ್ ಪಡೆಗಳು ಅಲ್ ದಫ್ರಾದಲ್ಲಿರುವ ಅಮೆರಿಕದ ಮಿಲಿಟರಿ ಬೇಸನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದು, ಅಬುಧಾಬಿ ಮತ್ತು ದುಬೈನಲ್ಲೂ ಸ್ಫೋಟದ ಘಟನೆಗಳು ನಡೆದಿವೆ. ದುಬೈನ ಬುರ್ಜ್ ಖಲೀಫಾ ಕಟ್ಟಡದ ಬಳಿಯಲ್ಲೂ ಸ್ಫೋಟದ ಸದ್ದು ಕೇಳಿದ್ದು ಜನರು ಆತಂಕಗೊಂಡಿದ್ದಾರೆ. ದುಬೈನಲ್ಲಿ ಕೇರಳ, ಕರ್ನಾಟಕದ ಅತಿ ಹೆಚ್ಚು ಜನರಿದ್ದಾರೆ. ಯುಎಇ ರಾಜಧಾನಿ ಅಬುಧಾಬಿಯಲ್ಲಿ ಸ್ಫೋಟದ ಸದ್ದು ಕೇಳಿದ್ದು ಹೊಗೆ ಎದ್ದಿರುವ ದೃಶ್ಯವನ್ನು ಸಿಎನ್ಎನ್ ಟಿವಿ ವರದಿ ಮಾಡಿದೆ.
ಅಬುಧಾಬಿಯ ವಸತಿ ಪ್ರದೇಶಕ್ಕೂ ಇರಾನ್ ಕ್ಷಿಪಣಿ ದಾಳಿಯಾಗಿದ್ದರಿಂದ ಅಲ್ಲಿನ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ. ಇದರ ನಂತರ, ದುಬೈನಲ್ಲಿ ವಿಮಾನ ಸಂಚಾರ ರದ್ದುಪಡಿಸಿದ್ದು ಏರ್ ಡಿಫೆನ್ಸ್ ಸಿಸ್ಟಮ್ ಸಿದ್ಧವಾಗಿಸಲಾಗಿದೆ. ಇರಾನ್ ದಾಳಿಯನ್ನು ಯುಎಇ ಸಚಿವಾಲಯ, ಹೇಡಿತನದ್ದು ಮತ್ತು ಅಪಾಯಕಾರಿ ನಡೆ ಎಂದು ಹೇಳಿದೆ. ದುಬೈ ಬಳಿಯ ಪ್ರಸಿದ್ಧ ಪ್ರವಾಸಿ ತಾಣ ಪಾಮ್ ಐಲ್ಯಾಂಡ್ ಬಳಿಯೂ ಬೆಂಕಿ ಮತ್ತು ಹೊಗೆ ಎದ್ದಿದ್ದು ಕ್ಷಿಪಣಿ ದಾಳಿಯಾದ ಬಗ್ಗೆ ಹೇಳಲಾಗುತ್ತಿದೆ.
ಅಮೆರಿಕ ಮತ್ತು ಇಸ್ರೇಲಿ ಪಡೆಗಳ ದಾಳಿಯು ಇರಾನ್ ನಾಯಕ ಅಲಿ ಖಮೇನಿ ಮತ್ತು ಅಧ್ಯಕ್ಷ ಮಸೂದ್ ಪಜೆಶ್ಕಿಯಾನ್ ಅವರನ್ನು ಗುರಿಯಾಗಿಸಿದ್ದು ಇರಾನ್ ದೇಶದ ಉತ್ತರ ದಕ್ಷಿಣವೆಂದು ಎಲ್ಲ ಕಡೆಯೂ ದಾಳಿಯಾಗಿದೆ. ಬಾಲಕಿಯರ ಶಾಲೆಗೂ ಬಾಂಬ್ ದಾಳಿಯಾಗಿದ್ದು, ಅಲ್ಲಿ 57 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಒಟ್ಟು 85 ಮಂದಿ ಇರಾನ್ ಕಡೆಯಲ್ಲಿ ಸಾವು ಸಂಭವಿಸಿದೆ ಎನ್ನಲಾಗುತ್ತಿದೆ. ಶನಿವಾರದ ಇಸ್ರೇಲ್ ದಾಳಿಯಿಂದ ಅಲಿ ಖಮೇನಿ ಸಾವಾಗಿದೆ ಎಂದು ಹೇಳಲಾಗುತ್ತಿದ್ದರೂ ಇರಾನ್ ಇದನ್ನು ದೃಢಪಡಿಸಿಲ್ಲ. ಇರಾನ್ ವಿದೇಶ ಮಂತ್ರಿ ಅಬ್ಬಾಸ್ ಅರಾಗ್ಚಿ, ಖಮೇನಿ ಇನ್ನೂ ಜೀವಂತ ಇದ್ದಾರೆ ಎಂದಿದ್ದಾರೆ. ಇರಾನ್ ಮೇಲಿನ ದಾಳಿಯನ್ನು ರಷ್ಯಾ ಮತ್ತು ಚೀನಾ ಖಂಡಿಸಿವೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm