ಬ್ರೇಕಿಂಗ್ ನ್ಯೂಸ್
10-03-26 04:30 pm Giridhar Shetty, ಗಿರಿಧರ್ ಶೆಟ್ಟಿ ದೇಶ - ವಿದೇಶ
ನವದೆಹಲಿ, ಮಾರ್ಚ್ 10: ಯುದ್ಧ ಬಿಕ್ಕಟ್ಟಿನಿಂದಾಗಿ ತೈಲ ದರ ನಾಗಾಲೋಟದಲ್ಲಿದ್ದರೆ, ಅಮೆರಿಕ ಮತ್ತು ಇರಾನ್ ಮುಯ್ಯಿಗೆ ಮುಯ್ಯಿ, ನೀ ಕೊಡೆ ನಾ ಬಿಡೆ ಅನ್ನುವಷ್ಟರ ಮಟ್ಟಿಗೆ ಎದುರುಬದುರಾಗಿದೆ. ಅಮೆರಿಕ- ಇಸ್ರೇಲ್ ದಾಳಿ ನಿಲ್ಲಿಸದಿದ್ದರೆ ಹರ್ಮುಜ್ ಜಲಸಂಧಿಯಿಂದ ತೈಲ ಹೊತ್ತ ಹಡಗನ್ನು ಹೋಗಲು ಬಿಡುವುದಿಲ್ಲ ಎಂದು ಇರಾನ್ ರೆವೊಲ್ಯುಶನರಿ ಗಾರ್ಡ್ಸ್ ಹೇಳಿದರೆ, ಆ ರೀತಿ ಮಾಡಿದರೆ ಈಗ ಮಾಡಿದ್ದಕ್ಕಿಂತ 20 ಪಟ್ಟು ಹೆಚ್ಚಿನ ದಾಳಿಯನ್ನು ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.
ಒಂದೆಡೆ ಜಾಗತಿಕ ಮಾರುಕಟ್ಟೆಗೆ ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳ ತೈಲ ಪೂರೈಕೆ ವ್ಯತ್ಯಯ ಆಗಿರುವುದರಿಂದ ಕಚ್ಛಾ ಪೆಟ್ರೋಲಿಯಂ ಬೆಲೆಯು ಬ್ಯಾರೆಲ್ ಗೆ 110 ಡಾಲರ್ ಮುಟ್ಟಿದೆ. ಈ ಹಿಂದೆ 2022ರಲ್ಲಿ ಇದೇ ರೀತಿ ಆಗಿದ್ದರೂ, ಆನಂತರ ಅದು ಕೆಲ ತಿಂಗಳಲ್ಲಿ ಸರಿ ಹೋಗಿತ್ತು. ಇದೀಗ ಯುದ್ಧದ ಅನಿಶ್ಚಿತತೆ ಎಷ್ಟು ದಿನ ಆಗಬಹುದೆಂಬ ಅಂದಾಜಿಲ್ಲದಿರುವುದರಿಂದ ರಾಕೆಟ್ ವೇಗದಲ್ಲಿ ತೈಲ ದರವು ಏರತೊಡಗಿದೆ. ಇದರ ಪರಿಣಾಮ ಜನಸಾಮಾನ್ಯನ ಮೇಲೆ ನೇರವಾಗಿ ತಟ್ಟತೊಡಗಿದೆ.
ಪ್ರಮುಖವಾಗಿ ಏಶ್ಯನ್ ರಾಷ್ಟ್ರಗಳಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಚೀನಾವು ಯುದ್ಧದ ಸನ್ನಿವೇಶ ಎದುರಾಗಬಹುದು ಎನ್ನುವ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆಯೇ ತೈಲ ಶೇಖರಣೆ ಮಾಡಲು ತೊಡಗಿತ್ತು. ಇದರಿಂದಾಗಿ ಈಗ ದರ ಹೆಚ್ಚಿದೊಡನೆ ಜಾಗತಿಕ ಮಾರುಕಟ್ಟೆಯಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದೆ. ಭಾರತದಲ್ಲಿ ಒಂದು ತಿಂಗಳಿಗೆ ಆಗುವಷ್ಟು ತೈಲ ಶೇಖರಣೆ ಇದೆಯೆಂದು ಸರ್ಕಾರ ಹೇಳುತ್ತಿದ್ದರೂ, ಎಲ್ ಪಿಜಿ ದರವನ್ನು ಏರಿಸಿದೆ. ಇದರ ಬೆನ್ನಲ್ಲೇ ಪ್ರಮುಖ ನಗರಗಳಲ್ಲಿ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ.
ಧಾರ್ಮಿಕರ ಆಡಳಿತ ಕೊನೆ ಮಾಡ್ತೀವಿ
ಇದೇ ವೇಳೆ, ಧರ್ಮಗುರುಗಳ ಆಡಳಿತವನ್ನು ಕೊನೆಗಾಣಿಸುವುದೇ ಇಸ್ರೇಲ್ ಗುರಿ ಎಂದು ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಯುದ್ಧದ ಕೊನೆಯನ್ನು ಇರಾನ್ ಜನರೇ ನಿರ್ಧರಿಸಬೇಕು. ಅಲ್ಲಿನ ಜನರಿಗೆ ಒಳ್ಳೆಯ ಆಡಳಿತ, ಧಾರ್ಮಿಕ ಮೂಲಭೂತವಾದ ಹೊರತಾದ ಆಡಳಿತವನ್ನು ಕೊಡುವುದು ನಮ್ಮ ಗುರಿಯಾಗಿದೆ. ಅಂತಹ ಆಡಳಿತ ಬರೋ ವರೆಗೂ ಅಲ್ಲಿ ಆಡಳಿತ ವಹಿಸಿಕೊಂಡವರ ಮೂಳೆಗಳನ್ನು ಮುರಿಯುತ್ತಲೇ ಇರುತ್ತೇವೆ. ನಮ್ಮ ಕೈಗಳು ಇನ್ನಷ್ಟು ವಿಸ್ತಾರ ಆಗುತ್ತಲೇ ಇರುತ್ತವೆ. ಯುದ್ಧ ನಿಂತರೆ ಅದರಿಂದ ಇರಾನ್ ಜನರಿಗೇ ಒಳಿತಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಟ್ರುತ್ ಮೀಡಿಯಾದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿಕೆ ಪ್ರಕಟಿಸಿದ್ದು ತೈಲದ ಹಡಗುಗಳನ್ನು ಹೋಗಲು ಬಿಡದಿದ್ದರೆ ನಮ್ಮ ದಾಳಿಯು ಇನ್ನಷ್ಟು ಕಠಿಣವಾಗುತ್ತದೆ. ಅವರಿಗೆ ಜಗತ್ತಿನ ಬೇರಾವುದೇ ಶಕ್ತಿಗಳು ಬೆಂಬಲ ನೀಡಿದರೂ ಅದನ್ನು ಎದುರಿಸಲು ಅಥವಾ ತಡೆಯಲು ಸಾಧ್ಯವಾಗಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆದುರಾಗಿ ಇರಾನ್ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, ಯುದ್ಧ ನಿಲ್ಲಿಸುವುದನ್ನು ನಿರ್ಧರಿಸುವುದು ನಾವೇ ಆಗಿರುತ್ತೇವೆ. ಟ್ರಂಪ್ ಹೇಳಿಕೆಯು ಮೂರ್ಖತನದ್ದು ಎಂದು ಹೇಳಿದ್ದಾರೆ.
29-04-26 10:36 am
HK News Staffer
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
29-04-26 11:10 pm
HK News Staffer
ಬೆಂಗಳೂರಿನಲ್ಲಿ ದಿಢೀರ್ ಮಳೆ ಆರ್ಭಟ ; ಬೌರಿಂಗ್ ಆಸ್ಪ...
29-04-26 08:12 pm
ಆಧಾರ್ ಹಿಡಿದು ಹೋದವರು 8 ತಿಂಗಳಾದರೂ ಸಿಗದ ಸುಳಿವು ;...
29-04-26 07:54 pm
ತ್ರಾಸಿ ಬೀಚ್ ಬಳಿ ಭೀಕರ ಅಪಘಾತ ; ಶಿವಮೊಗ್ಗದ ಪ್ರವಾಸ...
29-04-26 03:50 pm
ಪಹಲ್ಗಾಮ್ ಮಾದರಿಯಲ್ಲೇ ಮುಂಬೈನಲ್ಲಿ ದಾಳಿ ; ಕಲ್ಮಾ ಪ...
29-04-26 02:46 pm