ಬ್ರೇಕಿಂಗ್ ನ್ಯೂಸ್
10-03-26 04:30 pm Giridhar Shetty, ಗಿರಿಧರ್ ಶೆಟ್ಟಿ ದೇಶ - ವಿದೇಶ
ನವದೆಹಲಿ, ಮಾರ್ಚ್ 10: ಯುದ್ಧ ಬಿಕ್ಕಟ್ಟಿನಿಂದಾಗಿ ತೈಲ ದರ ನಾಗಾಲೋಟದಲ್ಲಿದ್ದರೆ, ಅಮೆರಿಕ ಮತ್ತು ಇರಾನ್ ಮುಯ್ಯಿಗೆ ಮುಯ್ಯಿ, ನೀ ಕೊಡೆ ನಾ ಬಿಡೆ ಅನ್ನುವಷ್ಟರ ಮಟ್ಟಿಗೆ ಎದುರುಬದುರಾಗಿದೆ. ಅಮೆರಿಕ- ಇಸ್ರೇಲ್ ದಾಳಿ ನಿಲ್ಲಿಸದಿದ್ದರೆ ಹರ್ಮುಜ್ ಜಲಸಂಧಿಯಿಂದ ತೈಲ ಹೊತ್ತ ಹಡಗನ್ನು ಹೋಗಲು ಬಿಡುವುದಿಲ್ಲ ಎಂದು ಇರಾನ್ ರೆವೊಲ್ಯುಶನರಿ ಗಾರ್ಡ್ಸ್ ಹೇಳಿದರೆ, ಆ ರೀತಿ ಮಾಡಿದರೆ ಈಗ ಮಾಡಿದ್ದಕ್ಕಿಂತ 20 ಪಟ್ಟು ಹೆಚ್ಚಿನ ದಾಳಿಯನ್ನು ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.
ಒಂದೆಡೆ ಜಾಗತಿಕ ಮಾರುಕಟ್ಟೆಗೆ ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳ ತೈಲ ಪೂರೈಕೆ ವ್ಯತ್ಯಯ ಆಗಿರುವುದರಿಂದ ಕಚ್ಛಾ ಪೆಟ್ರೋಲಿಯಂ ಬೆಲೆಯು ಬ್ಯಾರೆಲ್ ಗೆ 110 ಡಾಲರ್ ಮುಟ್ಟಿದೆ. ಈ ಹಿಂದೆ 2022ರಲ್ಲಿ ಇದೇ ರೀತಿ ಆಗಿದ್ದರೂ, ಆನಂತರ ಅದು ಕೆಲ ತಿಂಗಳಲ್ಲಿ ಸರಿ ಹೋಗಿತ್ತು. ಇದೀಗ ಯುದ್ಧದ ಅನಿಶ್ಚಿತತೆ ಎಷ್ಟು ದಿನ ಆಗಬಹುದೆಂಬ ಅಂದಾಜಿಲ್ಲದಿರುವುದರಿಂದ ರಾಕೆಟ್ ವೇಗದಲ್ಲಿ ತೈಲ ದರವು ಏರತೊಡಗಿದೆ. ಇದರ ಪರಿಣಾಮ ಜನಸಾಮಾನ್ಯನ ಮೇಲೆ ನೇರವಾಗಿ ತಟ್ಟತೊಡಗಿದೆ.
ಪ್ರಮುಖವಾಗಿ ಏಶ್ಯನ್ ರಾಷ್ಟ್ರಗಳಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಚೀನಾವು ಯುದ್ಧದ ಸನ್ನಿವೇಶ ಎದುರಾಗಬಹುದು ಎನ್ನುವ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆಯೇ ತೈಲ ಶೇಖರಣೆ ಮಾಡಲು ತೊಡಗಿತ್ತು. ಇದರಿಂದಾಗಿ ಈಗ ದರ ಹೆಚ್ಚಿದೊಡನೆ ಜಾಗತಿಕ ಮಾರುಕಟ್ಟೆಯಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದೆ. ಭಾರತದಲ್ಲಿ ಒಂದು ತಿಂಗಳಿಗೆ ಆಗುವಷ್ಟು ತೈಲ ಶೇಖರಣೆ ಇದೆಯೆಂದು ಸರ್ಕಾರ ಹೇಳುತ್ತಿದ್ದರೂ, ಎಲ್ ಪಿಜಿ ದರವನ್ನು ಏರಿಸಿದೆ. ಇದರ ಬೆನ್ನಲ್ಲೇ ಪ್ರಮುಖ ನಗರಗಳಲ್ಲಿ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ.
ಧಾರ್ಮಿಕರ ಆಡಳಿತ ಕೊನೆ ಮಾಡ್ತೀವಿ
ಇದೇ ವೇಳೆ, ಧರ್ಮಗುರುಗಳ ಆಡಳಿತವನ್ನು ಕೊನೆಗಾಣಿಸುವುದೇ ಇಸ್ರೇಲ್ ಗುರಿ ಎಂದು ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಯುದ್ಧದ ಕೊನೆಯನ್ನು ಇರಾನ್ ಜನರೇ ನಿರ್ಧರಿಸಬೇಕು. ಅಲ್ಲಿನ ಜನರಿಗೆ ಒಳ್ಳೆಯ ಆಡಳಿತ, ಧಾರ್ಮಿಕ ಮೂಲಭೂತವಾದ ಹೊರತಾದ ಆಡಳಿತವನ್ನು ಕೊಡುವುದು ನಮ್ಮ ಗುರಿಯಾಗಿದೆ. ಅಂತಹ ಆಡಳಿತ ಬರೋ ವರೆಗೂ ಅಲ್ಲಿ ಆಡಳಿತ ವಹಿಸಿಕೊಂಡವರ ಮೂಳೆಗಳನ್ನು ಮುರಿಯುತ್ತಲೇ ಇರುತ್ತೇವೆ. ನಮ್ಮ ಕೈಗಳು ಇನ್ನಷ್ಟು ವಿಸ್ತಾರ ಆಗುತ್ತಲೇ ಇರುತ್ತವೆ. ಯುದ್ಧ ನಿಂತರೆ ಅದರಿಂದ ಇರಾನ್ ಜನರಿಗೇ ಒಳಿತಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಟ್ರುತ್ ಮೀಡಿಯಾದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿಕೆ ಪ್ರಕಟಿಸಿದ್ದು ತೈಲದ ಹಡಗುಗಳನ್ನು ಹೋಗಲು ಬಿಡದಿದ್ದರೆ ನಮ್ಮ ದಾಳಿಯು ಇನ್ನಷ್ಟು ಕಠಿಣವಾಗುತ್ತದೆ. ಅವರಿಗೆ ಜಗತ್ತಿನ ಬೇರಾವುದೇ ಶಕ್ತಿಗಳು ಬೆಂಬಲ ನೀಡಿದರೂ ಅದನ್ನು ಎದುರಿಸಲು ಅಥವಾ ತಡೆಯಲು ಸಾಧ್ಯವಾಗಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆದುರಾಗಿ ಇರಾನ್ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, ಯುದ್ಧ ನಿಲ್ಲಿಸುವುದನ್ನು ನಿರ್ಧರಿಸುವುದು ನಾವೇ ಆಗಿರುತ್ತೇವೆ. ಟ್ರಂಪ್ ಹೇಳಿಕೆಯು ಮೂರ್ಖತನದ್ದು ಎಂದು ಹೇಳಿದ್ದಾರೆ.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am