ಬ್ರೇಕಿಂಗ್ ನ್ಯೂಸ್
24-03-26 12:10 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 24: ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ನಿಂದ ಕಠಿಣ ಬೆದರಿಕೆಗಳು ಹೊರಬಂದಿವೆ. ‘ನಮ್ಮ ವಿದ್ಯುತ್ ಘಟಕಗಳಿಗೆ ದಾಳಿ ಮಾಡಿದರೆ, ನಾವು ಸಹ ಅದನ್ನೇ ಮಾಡುತ್ತೇವೆ. ಕರಾವಳಿ ಮತ್ತು ದ್ವೀಪಗಳನ್ನು ಗುರಿಯಾಗಿಸಿದರೆ, ಪರ್ಶಿಯನ್ ಕೊಲ್ಲಿಯಲ್ಲಿ ಸಮುದ್ರ ಸ್ಫೋಟಕಗಳನ್ನು ಅಳವಡಿಸುತ್ತೇವೆ’ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ ಸ್ಪಷ್ಟಪಡಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 48 ಗಂಟೆಯೊಳಗೆ ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವಂತೆ ಬೆದರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಇರಾನ್, “ನಮ್ಮ ವಿದ್ಯುತ್ ಘಟಕಗಳಿಗೆ ಹಾನಿ ಮಾಡಿದರೆ ಪ್ರತಿದಾಳಿ ಖಚಿತ” ಎಂದು ತಿಳಿಸಿದೆ. ಇರಾನ್ ರಕ್ಷಣಾ ಮಂಡಳಿಯು ಕರಾವಳಿ ಮತ್ತು ದ್ವೀಪಗಳ ಮೇಲೆ ದಾಳಿ ಮಾಡಲು ಯತ್ನಿಸಿದರೆ, ಎಲ್ಲಾ ಪ್ರವೇಶ ಮಾರ್ಗಗಳಲ್ಲಿ ಸ್ಫೋಟಕಗಳ ಹಾನಿ ಸಂಭವಿಸಲಿದೆ ಎಂದು ಎಚ್ಚರಿಸಿದೆ.
ಇರಾನ್ ವಿದೇಶಾಂಗ ಇಲಾಖೆ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘೇರ್ ಈ ಸಂದರ್ಭ ಯಾವುದೇ ಅಮೆರಿಕ–ಇರಾನ್ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದು, ಅಮೆರಿಕದ ಹೇಳಿಕೆ ‘ಇಂಧನ ಬೆಲೆ ನಿಯಂತ್ರಣ ತಂತ್ರ’ ಮಾತ್ರ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ 5 ದಿನದ ಕದನವಿರಾಮ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವಾಲಯ, ‘ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಯಾವುದೇ ಮಾತುಕತೆಗಳು ನಡೆದಿಲ್ಲ. ಟ್ರಂಪ್ ಅವರ ಹೇಳಿಕೆಯು, ಏರುತ್ತಿರುವ ಇಂಧನ ಬೆಲೆಗಳನ್ನು ಕಡಿಮೆ ಮಾಡುವ ತಂತ್ರವಾಗಿದೆ’ ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ, ’ಇರಾನ್ನ ಪ್ರತಿದಾಳಿ ಬೆದರಿಕೆಗೆ ಬಗ್ಗಿ ಟ್ರಂಪ್ ಕದನವಿರಾಮದ ಮಾತು ಆಡಿದ್ದಾರೆ’ ಎಂದು ಇರಾನ್ ಸರ್ಕಾರಿ ಟಿವಿ ವರದಿ ಮಾಡಿತ್ತು.
ಈ ನಡುವೆ ಭಾರತೀಯ ಧ್ವಜ ಹೊತ್ತ ಎಲ್ಪಿಜಿ ಹಡಗುಗಳು ಪರ್ಶಿಯನ್ ಕೊಲ್ಲಿಯಿಂದ ಭಾರತಕ್ಕೆ ಪ್ರಯಾಣ ಆರಂಭಿಸಿವೆ. ಲಾರ್ಕ್ ಮತ್ತು ಕೆಶ್ಮ್ ದ್ವೀಪಗಳ ಹತ್ತಿರ ಹಡಗುಗಳು ಸಾಗುತ್ತಿದ್ದು, ಹೋರ್ಮುಜ್ ದಾಟುವ ಮೊದಲು ಇರಾನಿನ ಅಧಿಕಾರಿಗಳಿಗೆ ಗುರುತಿನ ಮಾಹಿತಿ ನೀಡಲು ನಿಧಾನಿಸಬಹುದೆಂದು ತಿಳಿಯುತ್ತಿದೆ. ಶಿವಾಲಿಕ್, ನಂದಾದೇವಿ, ಜಗ್ ಲಾಡ್ಕಿ ಮತ್ತು ಜಗ್ ಪ್ರಕಾಶ್ ಹಡಗುಗಳು ಈಗಾಗಲೇ ಭಾರತದತ್ತ ಸಾಗಿವೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm