ಬ್ರೇಕಿಂಗ್ ನ್ಯೂಸ್
26-03-26 09:31 am HK News Staffer ದೇಶ - ವಿದೇಶ
ಮಂಗಳೂರು, ಮಾರ್ಚ್ 26: ನವ ಮಂಗಳೂರು ಬಂದರಿಗೆ ಶೀಘ್ರದಲ್ಲೇ 2.62 ಲಕ್ಷ ಟನ್ ಕಚ್ಚಾ ತೈಲ ಹೊತ್ತ ಮತ್ತೆರಡು ಹಡಗು ಆಗಮಿಸಲಿದೆ. ಪಶ್ಚಿಮ ಆಫ್ರಿಕಾ ಮತ್ತು ಸೌದಿ ಅರೇಬಿಯಾದಿಂದ ಎರಡು ಬೃಹತ್ ತೈಲ ಹೊತ್ತ ಹಡಗು ಆಗಮಿಸಲಿದ್ದು ಎಂಆರ್ ಪಿಎಲ್ ತೈಲಾಗಾರಕ್ಕೆ ಪೂರೈಸಲಿದೆ.
ಎರಡು ದಿನಗಳ ಹಿಂದಷ್ಟೇ ರಷ್ಯಾದಿಂದ ಒಂದು ಲಕ್ಷ ಟನ್ ತೈಲ ಹೊಂದಿದ್ದ ಹಡಗು ಮಂಗಳೂರಿಗೆ ಆಗಮಿಸಿತ್ತು. ಮಾಹಿತಿ ಪ್ರಕಾರ, ಈಗಾಗಲೇ 1.53 ಲಕ್ಷ ಟನ್ ತೈಲವನ್ನು ಮಂಗಳೂರಿನ ತೈಲಾಗಾರಕ್ಕೆ ಪೂರೈಸಲಾಗಿತ್ತು. ಇದೀಗ ಮತ್ತೆರಡು ಹಡಗು ಇನ್ನೆರಡು ದಿನದಲ್ಲಿ ಬರಲಿದೆ ಎಂಬ ಮಾಹಿತಿ ಲಭಿಸಿದೆ. ಪೋಪಿ ಪಿ ಹೆಸರಿನ ಸೌದಿ ಅರೇಬಿಯಾ ಹಡಗು ಮಾರ್ಚ್ 27ರಂದು ಮಂಗಳೂರು ತಲುಪಲಿದೆ. 1.41 ಲಕ್ಷ ಟನ್ ತೈಲದೊಂದಿಗೆ ಸೌದಿಯ ಅಲ್ ಮುಜೈಝ್ ಬಂದರಿನಿಂದ ಈ ಹಡಗು ಮಾರ್ಚ್ 17ರಂದು ಹೊರಟಿತ್ತು. ಇನ್ನೊಂದು ಹಡಗು ಸನ್ ರೈಸ್ ವೇಯಲ್ಲಿ 1.21 ಲಕ್ಷ ಟನ್ ಕಚ್ಚಾ ತೈಲ ಇರಲಿದ್ದು ಅದು ಮಾರ್ಚ್ 29ರಂದು ಮಂಗಳೂರು ತಲುಪಲಿದೆ. ಈ ಹಡಗು ಪಶ್ಚಿಮ ಆಫ್ರಿಕಾದ ಕೇಪ್ ಲೋಪೆಜ್ ನಿಂದ ಮಾ.6ರಂದು ಹೊರಟಿತ್ತು. ಇವೆರಡರಿಂದಲೂ ಎನ್ಎಂಪಿಎ ಒಳಗಿನಿಂದ ಮಂಗಳೂರು ತೈಲಾಗಾರಕ್ಕೆ ಕಚ್ಚಾ ತೈಲ ಪೂರೈಕೆಯಾಗಲಿದೆ.
ಇದೇ ವೇಳೆ, ಮಾರ್ಚ್ 26ರಂದು 17600 ಟನ್ ಎಲ್ಪಿಜಿ ಇರುವ ಅಪೋಲೊ ಓಶಿಯನ್ ಟ್ಯಾಂಕರ್ ಹಡಗು ಮಂಗಳೂರು ಬಂದರಿಗೆ ಬರಲಿದ್ದು ನೇರವಾಗಿ ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿ ಮತ್ತು ಇಂಡಿಯನ್ ಆಯಿಲ್ ಕಂಪನಿಗಳಿಗೆ ಗ್ಯಾಸ್ ಪೂರೈಕೆ ಮಾಡಲಿದೆ. ಮೂಲಗಳ ಪ್ರಕಾರ, ಶಿವಾಲಿಕ್ ಹಡಗು ಮೂಲಕ ಗುಜರಾತ್ ಬಂದರಿಗೆ ತರಲಾಗಿದ್ದ ಎಲ್ಪಿಜಿಯನ್ನು ಅಪೊಲೊ ಓಶಿಯನ್ ನಲ್ಲಿ ಮಂಗಳೂರಿಗೆ ತಂದು ಸ್ಥಳೀಯವಾಗಿ ಪೂರೈಸಲಾಗುತ್ತಿದೆ.
ಇದಲ್ಲದೆ, ದೇಶ್ ರಕ್ಷಕ್ ಹೆಸರಿನ ಮತ್ತೊಂದು ತೈಲ ಹಡಗು ಮಾರ್ಚ್ 25ರಂದು ಮಂಗಳೂರು ಬಂದರಿಗೆ ಬಂದಿದ್ದು 53486 ಟನ್ ಕಚ್ಚಾ ತೈಲವನ್ನು ಅನ್ ಲೋಡ್ ಮಾಡುತ್ತಿದೆ. ಸದ್ಯದಲ್ಲೇ ರಷ್ಯಾದಿಂದ ಮತ್ತೊಂದು ತೈಲ ಹಡಗು ಓಯಸಿಸ್ ಬರಲಿದ್ದು ಅದರ ಮೂಲಕ 99,900 ಮೆಟ್ರಿಕ್ ಟನ್ ತೈಲವನ್ನು ಮಂಗಳೂರು ಬಂದರಿನಿಂದ ತೈಲಾಗಾರಕ್ಕೆ ಒದಗಿಸಲಿದೆ. (ಮಾಹಿತಿ- ಬಿಸ್ನೆಸ್ ಲೈನ್)
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am