ಬ್ರೇಕಿಂಗ್ ನ್ಯೂಸ್
26-03-26 09:31 am HK News Staffer ದೇಶ - ವಿದೇಶ
ಮಂಗಳೂರು, ಮಾರ್ಚ್ 26: ನವ ಮಂಗಳೂರು ಬಂದರಿಗೆ ಶೀಘ್ರದಲ್ಲೇ 2.62 ಲಕ್ಷ ಟನ್ ಕಚ್ಚಾ ತೈಲ ಹೊತ್ತ ಮತ್ತೆರಡು ಹಡಗು ಆಗಮಿಸಲಿದೆ. ಪಶ್ಚಿಮ ಆಫ್ರಿಕಾ ಮತ್ತು ಸೌದಿ ಅರೇಬಿಯಾದಿಂದ ಎರಡು ಬೃಹತ್ ತೈಲ ಹೊತ್ತ ಹಡಗು ಆಗಮಿಸಲಿದ್ದು ಎಂಆರ್ ಪಿಎಲ್ ತೈಲಾಗಾರಕ್ಕೆ ಪೂರೈಸಲಿದೆ.
ಎರಡು ದಿನಗಳ ಹಿಂದಷ್ಟೇ ರಷ್ಯಾದಿಂದ ಒಂದು ಲಕ್ಷ ಟನ್ ತೈಲ ಹೊಂದಿದ್ದ ಹಡಗು ಮಂಗಳೂರಿಗೆ ಆಗಮಿಸಿತ್ತು. ಮಾಹಿತಿ ಪ್ರಕಾರ, ಈಗಾಗಲೇ 1.53 ಲಕ್ಷ ಟನ್ ತೈಲವನ್ನು ಮಂಗಳೂರಿನ ತೈಲಾಗಾರಕ್ಕೆ ಪೂರೈಸಲಾಗಿತ್ತು. ಇದೀಗ ಮತ್ತೆರಡು ಹಡಗು ಇನ್ನೆರಡು ದಿನದಲ್ಲಿ ಬರಲಿದೆ ಎಂಬ ಮಾಹಿತಿ ಲಭಿಸಿದೆ. ಪೋಪಿ ಪಿ ಹೆಸರಿನ ಸೌದಿ ಅರೇಬಿಯಾ ಹಡಗು ಮಾರ್ಚ್ 27ರಂದು ಮಂಗಳೂರು ತಲುಪಲಿದೆ. 1.41 ಲಕ್ಷ ಟನ್ ತೈಲದೊಂದಿಗೆ ಸೌದಿಯ ಅಲ್ ಮುಜೈಝ್ ಬಂದರಿನಿಂದ ಈ ಹಡಗು ಮಾರ್ಚ್ 17ರಂದು ಹೊರಟಿತ್ತು. ಇನ್ನೊಂದು ಹಡಗು ಸನ್ ರೈಸ್ ವೇಯಲ್ಲಿ 1.21 ಲಕ್ಷ ಟನ್ ಕಚ್ಚಾ ತೈಲ ಇರಲಿದ್ದು ಅದು ಮಾರ್ಚ್ 29ರಂದು ಮಂಗಳೂರು ತಲುಪಲಿದೆ. ಈ ಹಡಗು ಪಶ್ಚಿಮ ಆಫ್ರಿಕಾದ ಕೇಪ್ ಲೋಪೆಜ್ ನಿಂದ ಮಾ.6ರಂದು ಹೊರಟಿತ್ತು. ಇವೆರಡರಿಂದಲೂ ಎನ್ಎಂಪಿಎ ಒಳಗಿನಿಂದ ಮಂಗಳೂರು ತೈಲಾಗಾರಕ್ಕೆ ಕಚ್ಚಾ ತೈಲ ಪೂರೈಕೆಯಾಗಲಿದೆ.
ಇದೇ ವೇಳೆ, ಮಾರ್ಚ್ 26ರಂದು 17600 ಟನ್ ಎಲ್ಪಿಜಿ ಇರುವ ಅಪೋಲೊ ಓಶಿಯನ್ ಟ್ಯಾಂಕರ್ ಹಡಗು ಮಂಗಳೂರು ಬಂದರಿಗೆ ಬರಲಿದ್ದು ನೇರವಾಗಿ ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿ ಮತ್ತು ಇಂಡಿಯನ್ ಆಯಿಲ್ ಕಂಪನಿಗಳಿಗೆ ಗ್ಯಾಸ್ ಪೂರೈಕೆ ಮಾಡಲಿದೆ. ಮೂಲಗಳ ಪ್ರಕಾರ, ಶಿವಾಲಿಕ್ ಹಡಗು ಮೂಲಕ ಗುಜರಾತ್ ಬಂದರಿಗೆ ತರಲಾಗಿದ್ದ ಎಲ್ಪಿಜಿಯನ್ನು ಅಪೊಲೊ ಓಶಿಯನ್ ನಲ್ಲಿ ಮಂಗಳೂರಿಗೆ ತಂದು ಸ್ಥಳೀಯವಾಗಿ ಪೂರೈಸಲಾಗುತ್ತಿದೆ.
ಇದಲ್ಲದೆ, ದೇಶ್ ರಕ್ಷಕ್ ಹೆಸರಿನ ಮತ್ತೊಂದು ತೈಲ ಹಡಗು ಮಾರ್ಚ್ 25ರಂದು ಮಂಗಳೂರು ಬಂದರಿಗೆ ಬಂದಿದ್ದು 53486 ಟನ್ ಕಚ್ಚಾ ತೈಲವನ್ನು ಅನ್ ಲೋಡ್ ಮಾಡುತ್ತಿದೆ. ಸದ್ಯದಲ್ಲೇ ರಷ್ಯಾದಿಂದ ಮತ್ತೊಂದು ತೈಲ ಹಡಗು ಓಯಸಿಸ್ ಬರಲಿದ್ದು ಅದರ ಮೂಲಕ 99,900 ಮೆಟ್ರಿಕ್ ಟನ್ ತೈಲವನ್ನು ಮಂಗಳೂರು ಬಂದರಿನಿಂದ ತೈಲಾಗಾರಕ್ಕೆ ಒದಗಿಸಲಿದೆ. (ಮಾಹಿತಿ- ಬಿಸ್ನೆಸ್ ಲೈನ್)
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm