ಬ್ರೇಕಿಂಗ್ ನ್ಯೂಸ್
26-03-26 09:31 am HK News Staffer ದೇಶ - ವಿದೇಶ
ಮಂಗಳೂರು, ಮಾರ್ಚ್ 26: ನವ ಮಂಗಳೂರು ಬಂದರಿಗೆ ಶೀಘ್ರದಲ್ಲೇ 2.62 ಲಕ್ಷ ಟನ್ ಕಚ್ಚಾ ತೈಲ ಹೊತ್ತ ಮತ್ತೆರಡು ಹಡಗು ಆಗಮಿಸಲಿದೆ. ಪಶ್ಚಿಮ ಆಫ್ರಿಕಾ ಮತ್ತು ಸೌದಿ ಅರೇಬಿಯಾದಿಂದ ಎರಡು ಬೃಹತ್ ತೈಲ ಹೊತ್ತ ಹಡಗು ಆಗಮಿಸಲಿದ್ದು ಎಂಆರ್ ಪಿಎಲ್ ತೈಲಾಗಾರಕ್ಕೆ ಪೂರೈಸಲಿದೆ.
ಎರಡು ದಿನಗಳ ಹಿಂದಷ್ಟೇ ರಷ್ಯಾದಿಂದ ಒಂದು ಲಕ್ಷ ಟನ್ ತೈಲ ಹೊಂದಿದ್ದ ಹಡಗು ಮಂಗಳೂರಿಗೆ ಆಗಮಿಸಿತ್ತು. ಮಾಹಿತಿ ಪ್ರಕಾರ, ಈಗಾಗಲೇ 1.53 ಲಕ್ಷ ಟನ್ ತೈಲವನ್ನು ಮಂಗಳೂರಿನ ತೈಲಾಗಾರಕ್ಕೆ ಪೂರೈಸಲಾಗಿತ್ತು. ಇದೀಗ ಮತ್ತೆರಡು ಹಡಗು ಇನ್ನೆರಡು ದಿನದಲ್ಲಿ ಬರಲಿದೆ ಎಂಬ ಮಾಹಿತಿ ಲಭಿಸಿದೆ. ಪೋಪಿ ಪಿ ಹೆಸರಿನ ಸೌದಿ ಅರೇಬಿಯಾ ಹಡಗು ಮಾರ್ಚ್ 27ರಂದು ಮಂಗಳೂರು ತಲುಪಲಿದೆ. 1.41 ಲಕ್ಷ ಟನ್ ತೈಲದೊಂದಿಗೆ ಸೌದಿಯ ಅಲ್ ಮುಜೈಝ್ ಬಂದರಿನಿಂದ ಈ ಹಡಗು ಮಾರ್ಚ್ 17ರಂದು ಹೊರಟಿತ್ತು. ಇನ್ನೊಂದು ಹಡಗು ಸನ್ ರೈಸ್ ವೇಯಲ್ಲಿ 1.21 ಲಕ್ಷ ಟನ್ ಕಚ್ಚಾ ತೈಲ ಇರಲಿದ್ದು ಅದು ಮಾರ್ಚ್ 29ರಂದು ಮಂಗಳೂರು ತಲುಪಲಿದೆ. ಈ ಹಡಗು ಪಶ್ಚಿಮ ಆಫ್ರಿಕಾದ ಕೇಪ್ ಲೋಪೆಜ್ ನಿಂದ ಮಾ.6ರಂದು ಹೊರಟಿತ್ತು. ಇವೆರಡರಿಂದಲೂ ಎನ್ಎಂಪಿಎ ಒಳಗಿನಿಂದ ಮಂಗಳೂರು ತೈಲಾಗಾರಕ್ಕೆ ಕಚ್ಚಾ ತೈಲ ಪೂರೈಕೆಯಾಗಲಿದೆ.
ಇದೇ ವೇಳೆ, ಮಾರ್ಚ್ 26ರಂದು 17600 ಟನ್ ಎಲ್ಪಿಜಿ ಇರುವ ಅಪೋಲೊ ಓಶಿಯನ್ ಟ್ಯಾಂಕರ್ ಹಡಗು ಮಂಗಳೂರು ಬಂದರಿಗೆ ಬರಲಿದ್ದು ನೇರವಾಗಿ ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿ ಮತ್ತು ಇಂಡಿಯನ್ ಆಯಿಲ್ ಕಂಪನಿಗಳಿಗೆ ಗ್ಯಾಸ್ ಪೂರೈಕೆ ಮಾಡಲಿದೆ. ಮೂಲಗಳ ಪ್ರಕಾರ, ಶಿವಾಲಿಕ್ ಹಡಗು ಮೂಲಕ ಗುಜರಾತ್ ಬಂದರಿಗೆ ತರಲಾಗಿದ್ದ ಎಲ್ಪಿಜಿಯನ್ನು ಅಪೊಲೊ ಓಶಿಯನ್ ನಲ್ಲಿ ಮಂಗಳೂರಿಗೆ ತಂದು ಸ್ಥಳೀಯವಾಗಿ ಪೂರೈಸಲಾಗುತ್ತಿದೆ.
ಇದಲ್ಲದೆ, ದೇಶ್ ರಕ್ಷಕ್ ಹೆಸರಿನ ಮತ್ತೊಂದು ತೈಲ ಹಡಗು ಮಾರ್ಚ್ 25ರಂದು ಮಂಗಳೂರು ಬಂದರಿಗೆ ಬಂದಿದ್ದು 53486 ಟನ್ ಕಚ್ಚಾ ತೈಲವನ್ನು ಅನ್ ಲೋಡ್ ಮಾಡುತ್ತಿದೆ. ಸದ್ಯದಲ್ಲೇ ರಷ್ಯಾದಿಂದ ಮತ್ತೊಂದು ತೈಲ ಹಡಗು ಓಯಸಿಸ್ ಬರಲಿದ್ದು ಅದರ ಮೂಲಕ 99,900 ಮೆಟ್ರಿಕ್ ಟನ್ ತೈಲವನ್ನು ಮಂಗಳೂರು ಬಂದರಿನಿಂದ ತೈಲಾಗಾರಕ್ಕೆ ಒದಗಿಸಲಿದೆ. (ಮಾಹಿತಿ- ಬಿಸ್ನೆಸ್ ಲೈನ್)
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am