ಬ್ರೇಕಿಂಗ್ ನ್ಯೂಸ್
28-03-26 04:06 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 28: ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದು ಇದೇ ವೇಳೆ ಟೋಲ್ ಬೂತ್ ಮೂಲಕ ಸುಂಕ ಕಟ್ಟಿ ಮುಂದೆ ಹೋಗುವಂತೆ ವ್ಯವಸ್ಥೆ ಮಾಡಿದೆ. ಸುಂಕ ಕಟ್ಟದೆ ಹಡಗುಗಳಿಗೆ ತೆರಳಲು ಅವಕಾಶ ನೀಡುತ್ತಿಲ್ಲ. ಇರಾನ್ ಈ ನಡೆಗೆ ಹಲವು ದೇಶಗಳ ನಾಯಕರಿಂದ ವಿರೋಧ ವ್ಯಕ್ತವಾಗಿದೆ.
ಐಆರ್ ಜಿಸಿ ಹಾರ್ಮುಜ್ ಜಲಸಂಧಿಯ ಮೂಲಕ ಎಲ್ಲ ರೀತಿಯ ಹಡಗುಗಳಿಗೂ ಹೊಸತಾಗಿ ಸುಂಕವನ್ನು ವಿಧಿಸಿದ್ದು ಮಾರ್ಚ್ 27ರ ಸಂಜೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ 138 ಹಡಗುಗಳು ಸುಂಕ ತೆತ್ತು ಪಾಸ್ ಆಗಿವೆ. ಲಾರಕ್ ಮತ್ತು ಜತಿನ್ ದುವಾ ದ್ವೀಪಗಳನ್ನು ಸುತ್ತು ಹಾಕಿ ಇರಾನ್ ಕರಾವಳಿಯಿಂದ ಹಡಗು ಚಲಿಸಲು ಅವಕಾಶ ನೀಡಲಾಗಿದೆ. ಯುದ್ಧ ಆರಂಭಗೊಂಡ ಮಾರ್ಚ್ 1ರಿಂದ 25ರ ವರೆಗಿನ ಮಾಹಿತಿ ಪ್ರಕಾರ, 142 ಹಡಗುಗಳು ಹರ್ಮುಜ್ ಸಂಧಿಯ ಮೂಲಕ ಪಾಸ್ ಆಗಿವೆ. ಆದರೆ 2025ರ ಮಾರ್ಚ್ ತಿಂಗಳ ಇದೇ ಅವಧಿಯಲ್ಲಿ 2652 ಹಡಗುಗಳು ಪಾಸ್ ಆಗಿದ್ದವು. ಹೀಗಾಗಿ ಬಹುತೇಕ ಹಡಗುಗಳು ಅಲ್ಲಿ ಸಿಕ್ಕಿಬಿದ್ದು ಮುಂದೆ ಹೋಗಲಾಗದ ಸ್ಥಿತಿಗೆ ಸಿಲುಕಿವೆ.
ಹಡಗಿನ ದಾಖಲೆಗಳು, ಮಾಲೀಕತ್ವದ ಕುರಿತ ಮಾಹಿತಿಗಳನ್ನು ಟೋಲ್ ಬೂತ್ ನಲ್ಲಿ ನೀಡಬೇಕಾಗುತ್ತದೆ. ಅಲ್ಲಿ ಐ ಆರ್ ಜಿಸಿ ಅಧಿಕಾರಿಗಳು ಹಡಗಿಗೆ ಪಾಸ್ ನೀಡುವುದೋ, ಬಿಡುವುದೋ ಎಂದು ನಿರ್ಧರಿಸುತ್ತಾರೆ. ಶುಕ್ರವಾರ ಎರಡು ಚೀನಾ ಮೂಲದ ಹಡಗುಗಳಿಗೆ ಪಾಸ್ ನಿರಾಕರಣೆ ಮಾಡಿದೆ.
ಇದೇ ವೇಳೆ, ಇರಾನ್ ಟೋಲ್ ಬೂತ್ ಮಾಡಿದ್ದನ್ನು ಜಿ-7 ರಾಷ್ಟ್ರಗಳು ವಿರೋಧಿಸಿ ಒಕ್ಕೂಟ ರೂಪಿಸಬೇಕೆಂದು ಅಮೆರಿಕ ಕಾರ್ಯದರ್ಶಿ ಮಾರ್ಕೋ ರುಬಿಯೋ ಕರೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದ್ದು ಜಗತ್ತಿನ ಒಟ್ಟು ತೈಲ ಸಾಗಣೆಯ ಸುಮಾರು 20% ಇಲ್ಲಿಂದ ಸಾಗುತ್ತದೆ. ಆದ್ದರಿಂದ ಇಲ್ಲಿ ಯಾವುದೇ ಅಡಚಣೆ ಉಂಟಾದರೆ ಜಾಗತಿಕ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ಇದೀಗ ಇರಾನ್ ಯುದ್ಧದ ಪರಿಸ್ಥಿತಿಯನ್ನು ಬಳಸಿಕೊಂಡು ಹಡಗುಗಳಿಗೆ “ಟೋಲ್” (ಶುಲ್ಕ) ವಿಧಿಸುವ ವ್ಯವಸ್ಥೆ ತರಲು ಯತ್ನಿಸುತ್ತಿದೆ ಎಂದು ಅಮೆರಿಕಾ ಆರೋಪಿಸಿದೆ.
ಫ್ರಾನ್ಸ್ನಲ್ಲಿ ನಡೆದ ಜಿ7 ರಾಷ್ಟ್ರಗಳ ಮಹತ್ವದ ಸಭೆಯಲ್ಲಿ ಭಾಗವಹಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೋ, ಹಾರ್ಮುಜ್ ಜಲಸಂಧಿಯಿಂದ ಹಾದುಹೋಗುವ ಅಂತರಾಷ್ಟ್ರೀಯ ಹಡಗುಗಳ ಮೇಲೆ ಇರಾನ್ ಅಕ್ರಮವಾಗಿ ತೆರಿಗೆ ವಿಧಿಸಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದರು.
ರೂಬಿಯೊ ಅವರ ಪ್ರಕಾರ, ಇದು ಕೇವಲ ಕಾನೂನುಬಾಹಿರ ಮಾತ್ರವಲ್ಲ, ಜಗತ್ತಿನ ವ್ಯಾಪಾರ ಮತ್ತು ತೈಲ ಸರಬರಾಜಿಗೆ ದೊಡ್ಡ ಅಪಾಯ. ಆದ್ದರಿಂದ ಇದನ್ನು ತಡೆಯಲು ಅಮೆರಿಕಾ ಮಾತ್ರವಲ್ಲ, ಇತರೆ ಬಲಿಷ್ಠ ರಾಷ್ಟ್ರಗಳು, ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ಮತ್ತು ಜಿ7 ಮಿತ್ರರಾಷ್ಟ್ರಗಳು ಒಗ್ಗೂಡಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು. ಇದಕ್ಕಾಗಿ ರೂಬಿಯೋ, ಚೀನಾ ನೆರವನ್ನೂ ಪಡೆದಿದ್ದಾರೆ.
ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ಏಪ್ರಿಲ್ 6ರ ವರೆಗೆ ಅಂತಿಮ ಗಡುವು ನೀಡಿದ್ದು, ಅಷ್ಟರೊಳಗೆ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ ಇರಾನ್ನ ಪ್ರಮುಖ ವಿದ್ಯುತ್ ಕೇಂದ್ರಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದಾರೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm