ಬ್ರೇಕಿಂಗ್ ನ್ಯೂಸ್
09-04-26 07:43 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 9: ಮಧ್ಯಪ್ರಾಚ್ಯದಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ಇರಾನ್ -ಅಮೆರಿಕ ಸಮ್ಮತಿಸಿದರೂ ಹರ್ಮುಜ್ ಜಲಸಂಧಿಯ ಬಿಕ್ಕಟ್ಟು ಏಷ್ಯನ್ ದೇಶಗಳಿಗೆ ದೊಡ್ಡದಾಗಿ ತಟ್ಟುವ ಭೀತಿ ಉಂಟಾಗಿದೆ. ಜಲಸಂಧಿಯಲ್ಲಿ ಹಾದು ಹೋಗುವ ಪ್ರತಿ ನೌಕೆಗೆ 2 ದಶಲಕ್ಷ ಡಾಲರ್ (ಸುಮಾರು 18 ಕೋಟಿ ರೂ.) ಟೋಲ್ ವಿಧಿಸುವುದಾಗಿ ಇರಾನ್ ಘೋಷಿಸಿದೆ. ಇದೇ ವೇಳೆ, ಅಮೆರಿಕವೂ ಸುಂಕದಲ್ಲಿ ಪಾಲು ಕೇಳಿದ್ದು ಯುದ್ಧ ನಷ್ಟ ಭರಿಸಿಕೊಳ್ಳಲು ಮುಂದಾಗಿದೆ.
ಯುದ್ಧದ ಸಮಯದಲ್ಲಿ ಭಾರತ ಸೇರಿದಂತೆ ಕೆಲವೇ ಮಿತ್ರ ದೇಶಗಳನ್ನು ಹೊರತುಪಡಿಸಿ ಹರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿತ್ತು. ಆದರೆ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳಿಗೆ ಇದೇ ದೊಡ್ಡ ತಲೆನೋವಾಗಿತ್ತು. ಆನಂತರ, ಅಮೆರಿಕ ಮುಂದಿಟ್ಟ ಒಪ್ಪಂದದ ಷರತ್ತಿನಂತೆ ಹರ್ಮುಜ್ ಜಲಸಂಧಿಯನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸಲು ಇರಾನ್ ಒಪ್ಪಿದೆ. ಆದರೆ, ಟೋಲ್ ವಿಧಿಸುವ ಮೂಲಕ ಹಣ ಸಂಗ್ರಹಿಸಲಿದ್ದು, ಯುದ್ಧದಿಂದ ಉಂಟಾದ ನಷ್ಟ ಭರ್ತಿಗೆ ಇದು ಅನಿವಾರ್ಯ ಎಂದು ಹೇಳಿಕೊಂಡಿದೆ.
ಇರಾನ್ ಟೋಲ್ ಪ್ರಸ್ತಾಪಕ್ಕೆ ಭಾರತ, ಒಮಾನ್ ಸೇರಿದಂತೆ ಹೆಚ್ಚಿನ ದೇಶಗಳಿಂದ ವಿರೋಧವೂ ವ್ಯಕ್ತವಾಗಿದೆ. ಎಲ್ಲ ದೇಶಗಳಿಗೆ ಟೋಲ್ ವಿಧಿಸಿದರೆ ಭಾರತಕ್ಕೆ ಮಾತ್ರ ದುಬಾರಿಯಾಗಿ ಪರಿಣಮಿಸಲಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಟೋಲ್ ಪ್ರಸ್ತಾಪಕ್ಕೆ ಪರೋಕ್ಷವಾಗಿ ಒಪ್ಪಿಗೆ ಸೂಚಿಸಿದ್ದು ಜೊತೆಗೆ ತನಗೂ ಪಾಲು ನೀಡುವಂತೆ ಕೇಳಿದ್ದಾರೆ.
ದಿನಕ್ಕೆ 200 ಕೋಟಿ ಹೊರೆ
ಹರ್ಮುಜ್ ವಿಷಯದಲ್ಲಿ ಇರಾನ್ ತನ್ನ ನಿಯಮವನ್ನು ಎಲ್ಲಾ ದೇಶಗಳಿಗೂ ಅನ್ವಯಿಸಿದರೆ, ಭಾರತಕ್ಕೆ ತೈಲ ಆಮದು ದುಬಾರಿಯಾಗಲಿದೆ. ಹರ್ಮುಜ್ ಮೂಲಕ ಇತರೆ ಸರಕುಗಳ ಸಾಗಣೆ ವೆಚ್ಚವೂ ದುಪ್ಪಟ್ಟಾಗಲಿದೆ. ಅಂದಾಜು ಭಾರತಕ್ಕೆ 200 ಕೋಟಿ ರೂ. ಹೊರೆಯಾಗಲಿದೆ. ಭಾರತದ ಶೇ. 50ರಷ್ಟು ಕಚ್ಚಾತೈಲ, 80% ಎಲ್ಪಿಜಿ ಹರ್ಮುಜ್ ಮೂಲಕವೇ ಬರುತ್ತಿದೆ. ನಿತ್ಯ 10-12 ಟ್ಯಾಂಕರ್ಗಳು ಜಲಸಂಧಿಯಿಂದ ಸಾಗುವುದರಿಂದ ದಿನಕ್ಕೆ ಪ್ರತಿ ನೌಕೆಗೆ 18 ಕೋಟಿ ರೂ.ನಂತೆ 180-200 ಕೋಟಿ ರೂ.ಟೋಲ್ ಭಾರ ಬೀಳಲಿದೆ. ಸಾಗಣೆ ವೆಚ್ಚದಲ್ಲಿ ಏರಿಕೆಯಿಂದಾಗಿ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಬೆಲೆಯ ಹೊರೆಯನ್ನು ಜನರ ಮೇಲೆ ಹೊರಿಸುವ ಸಾಧ್ಯತೆಯಿದೆ.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:24 pm
HK News Staffer
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am