ಬ್ರೇಕಿಂಗ್ ನ್ಯೂಸ್
17-04-26 11:27 am HK News Staffer ದೇಶ - ವಿದೇಶ
ಬೀಜಿಂಗ್ ಏ.17: ಚೀನಾದಲ್ಲಿ ಬಾಲ್ಯದಲ್ಲಿ ನಡೆದ ಒಂದು ಸಣ್ಣ ಘಟನೆ, ಎರಡು ದಶಕಗಳ ಬಳಿಕ ಜೀವಕ್ಕೆ ಅಪಾಯ ತಂದುಕೊಟ್ಟ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ವೆನ್ಝ್ ನಗರದ 32 ವರ್ಷದ ವಾಂಗ್ ಎಂಬುವರ ಹೊಟ್ಟೆಯಲ್ಲಿ 20 ವರ್ಷಗಳ ಹಿಂದೆ ನುಂಗಿದ ಪಾದರಸದ ಥರ್ಮಾಮೀಟರ್ ಪತ್ತೆಯಾಗಿದ್ದು, ವೈದ್ಯರು ಬೆಚ್ಚಿಬಿದ್ದಿದ್ದಾರೆ.
ಇತ್ತೀಚೆಗೆ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ವಾಂಗ್ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದರು. ಪ್ರಾಥಮಿಕ ಪರೀಕ್ಷೆಗಳ ಬಳಿಕ ವೈದ್ಯರು ಸ್ಕ್ಯಾನಿಂಗ್ ನಡೆಸಿದಾಗ, ಸಣ್ಣ ಕರುಳಿನ ಆರಂಭಿಕ ಭಾಗವಾದ ಡ್ಯುವೋಡೆನಮ್ನಲ್ಲಿ ಲೋಹದ ವಸ್ತು ಸಿಲುಕಿಕೊಂಡಿರುವುದು ಪತ್ತೆಯಾಯಿತು. ಹೆಚ್ಚಿನ ಪರಿಶೀಲನೆಯಲ್ಲಿ ಅದು ಜ್ವರ ಅಳೆಯುವ ಥರ್ಮಾಮೀಟರ್ ಎಂಬುದು ಸ್ಪಷ್ಟವಾಯಿತು.
ವೈದ್ಯರ ಪ್ರಶ್ನೆಗೆ ಉತ್ತರಿಸಿದ ವಾಂಗ್, 12ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಥರ್ಮಾಮೀಟರ್ ನುಂಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಂದು ಭಯದಿಂದ ಪೋಷಕರಿಗೆ ಈ ವಿಷಯ ತಿಳಿಸದೇ ಮೌನವಾಗಿದ್ದರು. ಯಾವುದೇ ತಕ್ಷಣದ ತೊಂದರೆ ಕಾಣಿಸದ ಕಾರಣ, ಈ ಘಟನೆ ಕಾಲಕ್ರಮೇಣ ಮರೆತು ಹೋಗಿತ್ತು.
ಆದರೆ ಇತ್ತೀಚೆಗೆ ಥರ್ಮಾಮೀಟರ್ನ ತುದಿ ಕರುಳಿಗೆ ಚುಚ್ಚಲು ಆರಂಭಿಸಿದ್ದರಿಂದ ತೀವ್ರ ನೋವು ಕಾಣಿಸಿಕೊಂಡಿದೆ. ಇದರ ಪರಿಣಾಮವಾಗಿ ಕರುಳಿನಲ್ಲಿ ತೂತು ಉಂಟಾಗುವ ಹಾಗೂ ಥರ್ಮಾಮೀಟರ್ ಒಡೆದು ಅದರಲ್ಲಿರುವ ವಿಷಕಾರಿ ಪಾದರಸ ದೇಹಕ್ಕೆ ಹರಡುವ ಅಪಾಯ ಉಂಟಾಗಿತ್ತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆಗೆ ಮುಂದಾಗಿ, ಸುಮಾರು 20 ನಿಮಿಷಗಳ ಯಶಸ್ವಿ ಕಾರ್ಯಾಚರಣೆಯಲ್ಲಿ ಥರ್ಮಾಮೀಟರ್ ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಅಚ್ಚರಿಯ ಸಂಗತಿ ಎಂದರೆ, ಎರಡು ದಶಕಗಳ ಬಳಿಕವೂ ಥರ್ಮಾಮೀಟರ್ ಒಡೆಯದೆ ಅಚ್ಚುಕಟ್ಟಾಗಿ ಉಳಿದಿದ್ದು, ಕೇವಲ ಅದರ ಮೇಲಿನ ಅಂಕಿಗಳು ಮಾತ್ರ ಅಳಿಸಿ ಹೋಗಿದ್ದವು.
ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವ ವಾಂಗ್, “ಇಷ್ಟು ವರ್ಷಗಳ ಕಾಲ ನನ್ನ ದೇಹದೊಳಗೆ ಬಾಂಬ್ ಹೊತ್ತುಕೊಂಡಿದ್ದೆ” ಎಂದು ಹೇಳಿ ನಿಟ್ಟುಸಿರು ಬಿಟ್ಟಿದ್ದಾರೆ.
ಬಾಲ್ಯದಲ್ಲಿ ನಡೆದ ಒಂದು ಸಣ್ಣ ತಪ್ಪು, ಕಾಲ ಕಳೆದಂತೆ ಜೀವಕ್ಕೆ ಯಾವ ರೀತಿ ಕಂಟಕವಾಗುತ್ತದೆ ಎಂಬುದಕ್ಕೆ ಈ ಘಟನೆ ನಿಖರ ಉದಾಹರಣೆ. ಅಂದಿನ ಅಜಾಗರೂಕತೆ ವರ್ಷಗಳ ಬಳಿಕ ದೊಡ್ಡ ಅಪಾಯವಾಗಿ ಎದುರಾಗಿದ್ದು, ಸಣ್ಣ ವಿಷಯಗಳನ್ನೂ ನಿರ್ಲಕ್ಷಿಸಿದರೆ ಅದರ ಪರಿಣಾಮ ಎಷ್ಟು ಭೀಕರವಾಗಬಹುದು ಎಂಬುದಕ್ಕೆ ಇದು ನೈಜ ಉದಾಹರಣೆಯಾಗಿದೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm