ಬ್ರೇಕಿಂಗ್ ನ್ಯೂಸ್
22-04-26 09:10 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 22: ಭಾರತಕ್ಕೆ ತೈಲ ಹೊತ್ತು ಬರುತ್ತಿದ್ದ ಮತ್ತೆ ಮೂರು ಹಡಗುಗಳನ್ನು ಇರಾನ್ ವಶಕ್ಕೆ ಪಡೆದಿದೆ. ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (ಐಆರ್ ಜಿಸಿ) ಹಾರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಬರುತ್ತಿದ್ದ ಹಡಗಿನ ಮೇಲೆ ದಾಳಿ ಮಾಡಿ ವಶಪಡಿಸಿದೆ. ಐಆರ್ ಜಿಸಿ ಅವುಗಳನ್ನು ಇರಾನ್ ಜಲಗಡಿಯೊಳಕ್ಕೆ ಕರೆದೊಯ್ದಿದೆ ಎಂದು ಇರಾನ್ ಟಿವಿ ಮಾಧ್ಯಮಗಳು ವರದಿ ಮಾಡಿವೆ.
ಎರಡು ಹಡಗುಗಳು ಭಾರತದ ಗುಜರಾತಿನ ಮುಂದ್ರಾ ಬಂದರಿಗೆ ಬರುತ್ತಿತ್ತು. ಪನಾಮಾ ಧ್ವಜ ಹೊತ್ತಿದ್ದ ಎಂಎಸ್ ಸಿ ಫ್ರಾನ್ಸೆಸ್ಕಾ ಮತ್ತು ಲೈಬೀರಿಯಾ ಧ್ವಜ ಹೊಂದಿದ್ದ ಎಪಾಮಿನೋಡ್ಸ್ ಎಂಬ ಹೆಸರಿನ ಹಡಗುಗಳನ್ನು ಐಆರ್ ಜಿಸಿ ವಶಕ್ಕೆ ಪಡೆದಿದೆ. ಭಾರತದತ್ತ ಬರುತ್ತಿದ್ದ ಮತ್ತೊಂದು ಗ್ರೀಕ್ ಮೂಲದ ಯುಫೋರಿಯಾ ಹೆಸರಿನ ಹಡಗನ್ನೂ ಇರಾನ್ ವಶಕ್ಕೆ ಪಡೆದಿದೆ.
ಹಡಗಿನ ಮೇಲೆ ಐಆರ್ಜಿಸಿ ಗನ್ಬೋಟ್ ನಿಂದ ದಾಳಿ ನಡೆಸಿತ್ತು. ಗುಂಡು ಹಾರಿಸುವ ಮೊದಲು IRGC ಯಾವುದೇ ಎಚ್ಚರಿಕೆ ನೀಡಲಿಲ್ಲ. ಯುಕೆ ಏಜೆನ್ಸಿಯ ಪ್ರಕಾರ, ಯಾವುದೇ ಸಾವು- ನೋವು ಸಂಭವಿಸಿಲ್ಲ. ಏತನ್ಮಧ್ಯೆ, ಹಡಗು ಇರಾನಿನ ಸಶಸ್ತ್ರ ಪಡೆಗಳ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ನಂತರ ಗುಂಡು ಹಾರಿಸಲಾಗಿದೆ ಎಂದು ಇರಾನಿನ ಸುದ್ದಿ ಸಂಸ್ಥೆ ನೂರ್ ನ್ಯೂಸ್ ಹೇಳಿಕೊಂಡಿದೆ. ಫಾಸ್ಕ್ ನ್ಯೂಸ್ ಏಜೆನ್ಸಿ ಇದನ್ನು ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ನಿಯಂತ್ರಣವನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಇರಾನ್ನ ಪ್ರಯತ್ನ ಎಂದು ಬಣ್ಣಿಸಿದೆ.
ಕಳೆದ ವಾರ ಭಾರತದ ಜಗ್ ಆರ್ನವ್ ಮತ್ತು ಸನ್ಮಾರ್ ಹೆರಾಲ್ಡ್ ಎಂಬೆರಡು ಹಡಗುಗಳ ಮೇಲೆ ಇರಾನ್ ದಾಳಿ ಮಾಡಿತ್ತು. ಜಗ್ ಆರ್ನವ್ ಹಡಗು ಸೌದಿ ಅರೇಬಿಯಾದಿಂದ ಮತ್ತು ಸನ್ಮಾರ್ ಹೆರಾಲ್ಡ್ ಹಡಗು ಇರಾಕಿನಿಂದ ತೈಲ ಹೊತ್ತು ಬರುತ್ತಿತ್ತು. ಸ್ನೇಹಿತ ರಾಷ್ಟ್ರಗಳ ಮೇಲೆ ತಡೆ ಹೇರಲ್ಲ ಎಂಬ ಇರಾನ್ ಹೇಳಿಕೆಯ ನಡುವೆಯೂ ಭಾರತದ ಹಡಗುಗಳ ಮೇಲೆ ದಾಳಿ ನಡೆಸಿರುವುದು ಪರಿಸ್ಥಿತಿ ಗಂಭೀರತೆ ಸೃಷ್ಟಿಸಿದೆ.
ಇದೇ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆರಡು ವಾರಗಳ ಕಾಲ ಕದನ ವಿರಾಮ ಘೋಷಣೆ ಮಾಡಿದೆ. ಆದರೆ ಹೊರ್ಮುಜ್ ಜಲಸಂಧಿಯ ಮೇಲಿನ ಹಿಡಿತವನ್ನು ಸಡಿಲಿಸುವುದಿಲ್ಲ ಎಂದು ಹೇಳಿದೆ. ಟ್ರಂಪ್ ಕದನ ವಿರಾಮ ಘೋಷಣೆ ಬೆನ್ನಲ್ಲೇ ಭಾರತದತ್ತ ತೆರಳುತ್ತಿದ್ದ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿ ವಶಕ್ಕೆ ಪಡೆದಿದೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm