ಬ್ರೇಕಿಂಗ್ ನ್ಯೂಸ್
27-04-26 02:48 pm HK News Staffer ದೇಶ - ವಿದೇಶ
ವಾಷಿಂಗ್ಟನ್, ಎಪ್ರಿಲ್ 27: ಅಮೆರಿಕದ ಶಕ್ತಿಕೇಂದ್ರ ವೈಟ್ ಹೌಸ್ ವರದಿಗಾರರ ಒಕ್ಕೂಟದ ಔತಣಕೂಟ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ ಆರೋಪದಲ್ಲಿ ಬಂಧನಕ್ಕೀಡಾದ ಕೋಲ್ ಅಲೆನ್ ಎಂಬ ವ್ಯಕ್ತಿ ಘಟನೆಗೂ ಮುನ್ನ ತನ್ನ ಕುಟುಂಬ ಸದಸ್ಯರಿಗೆ ದಾಳಿಯ ಬಗ್ಗೆ ಪತ್ರವನ್ನು ಕಳುಹಿಸಿದ್ದಾನೆ ಎಂಬುದು ಬಯಲಾಗಿದೆ. ಈ ಬಗ್ಗೆ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಸಂದೇಶದಲ್ಲಿ ಅಲೆನ್ ತನ್ನ ಕೃತ್ಯವನ್ನು “ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್” ಎಂದು ಕರೆದುಕೊಂಡಿದ್ದು, ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿರುವ ತನ್ನ ಯೋಜನೆಯನ್ನು ವಿವರಿಸಿದ್ದಾನೆ. ಆಡಳಿತಾಂಗದ ಪ್ರಮುಖ ಅಧಿಕಾರಿಗಳು (ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಹೊರತುಪಡಿಸಿ) ತನ್ನ ಗುರಿಗಳಾಗಿದ್ದಾರೆ. ಉನ್ನತ ಹುದ್ದೆಯಿಂದ ಕೆಳಗಿನ ವರೆಗೆ ಆದ್ಯತೆಯಲ್ಲಿ ದಾಳಿ ಮಾಡಲು ಯೋಜಿಸಿದ್ದೇನೆ ಎಂದು ಬರೆದಿದ್ದಾನೆ. ಗುಂಡಿನ ದಾಳಿ ನಡೆಯುವ ಸುಮಾರು 10 ನಿಮಿಷಗಳ ಮೊದಲು ತನ್ನ ಕುಟುಂಬಕ್ಕೆ ಈ ಮೆಸೇಜ್ ಕಳುಹಿಸಿದ್ದಾನೆ ಎಂದು ಹೇಳಲಾಗಿದೆ.
ಅಲೆನ್ ಬರೆದಿರುವುದರಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ವಿರುದ್ಧ ಸ್ಪಷ್ಟ ಮತ್ತು ಹಿಂಸಾತ್ಮಕ ಉದ್ದೇಶ ವ್ಯಕ್ತವಾಗಿದೆ. ಪೀಡೋಫೈಲ್ ಒಬ್ಬ ಅತ್ಯಾಚಾರಿ ಮತ್ತು ದೇಶದ್ರೋಹಿ. ನನ್ನ ಕೈಗಳನ್ನು ಅವನ ಅಪರಾಧಗಳಿಂದ ಕಲುಷಿತಗೊಳಿಸಲು ನಾನು ಸಮ್ಮತಿಸುವುದಿಲ್ಲ ಎಂದು ಅಧ್ಯಕ್ಷ ಟ್ರಂಪ್ ಉಲ್ಲೇಖಿಸಿ ಅವನು ಬರೆದಿದ್ದಾನೆ.
ತಾನು ಆಯ್ಕೆ ಮಾಡಿಕೊಂಡ ತಂತ್ರಗಳನ್ನೂ ವಿವರಿಸಿದ್ದು, ಹಾನಿಯನ್ನು ಕಡಿಮೆ ಮಾಡಲು, ಸ್ಲಗ್ಗಳ ಬದಲು ಬಕ್ಶಾಟ್ ಬಳಸುತ್ತೇನೆ (ಗೋಡೆಗಳ ಮೂಲಕ ಸೀಮಿತ ಪ್ರವೇಶ) ಎಂದು ಹೇಳಿದ್ದಾನೆ. ಜೊತೆಗೆ, ಅಗತ್ಯವಿದ್ದರೆ ಹೆಚ್ಚಿನ ಹಿಂಸಾಚಾರದ ಸಾಧ್ಯತೆಯನ್ನೂ ಹೇಳಿಕೊಂಡಿದ್ದಾನೆ.
“ಅವಶ್ಯಕವೆನಿಸಿದರೆ ಗುರಿಗಳನ್ನು ತಲುಪಲು ಇಲ್ಲಿರುವ ಬಹುತೇಕ ಎಲ್ಲರನ್ನೂ ಎದುರಿಸುತ್ತೇನೆ. ಯಾಕೆಂದರೆ ಅವರು ಪೀಡೋಫೈಲ್, ಅತ್ಯಾಚಾರಿ ಮತ್ತು ದೇಶದ್ರೋಹಿಯ ಭಾಷಣಕ್ಕೆ ಸಹಭಾಗಿಗಳಾಗಿದ್ದಾರೆ. ಆದರೆ ಅದು ಅಷ್ಟರ ಮಟ್ಟಿಗೆ ಹೋಗಬಾರದು ಎಂದು ನಾನು ಆಶಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ.
ಘೋಷಣಾ ಪತ್ರದಲ್ಲಿ ಅಲೆನ್ ತನ್ನ ಕ್ರೈಸ್ತ ನಂಬಿಕೆಗಳ ಬಗ್ಗೆ ಹಲವಾರು ಉಲ್ಲೇಖಗಳನ್ನು ಮಾಡಿದ್ದಾನೆ ಮತ್ತು ಅವುಗಳನ್ನು ವಿಮರ್ಶೆಗೆ ಪ್ರತಿಯಾಗಿ ವಿವರಿಸಿದ್ದಾನೆ. ಅವನು ಅಮೆರಿಕದ ವೆನಿಜುವೆಲಾದ ಮದ್ದಿನ ವ್ಯವಹಾರಗಳ ವಿರುದ್ಧದ ಕ್ರಮಗಳು ಮತ್ತು ವಲಸೆ ನಿಯಂತ್ರಣ ನೀತಿಗಳಂತಹ ವಿವಾದಾತ್ಮಕ ರಾಜಕೀಯ ವಿಷಯಗಳನ್ನೂ ಉಲ್ಲೇಖಿಸಿದ್ದಾನೆ. ಆರೋಪಿ ಅಲೆನ್ ಕ್ಯಾಲಿಫೋರ್ನಿಯಾದಿಂದ ರೈಲಿನಲ್ಲಿ ಪ್ರಯಾಣಿಸಿ, ಕಾರ್ಯಕ್ರಮ ನಡೆದ ವಾಷಿಂಗ್ಟನ್ ಹೊಟೇಲ್ ನಲ್ಲಿ ಕೆಲವು ದಿನಗಳ ಹಿಂದೆ ಅತಿಥಿಯಾಗಿ ಉಳಿದುಕೊಂಡಿದ್ದ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm