ಬ್ರೇಕಿಂಗ್ ನ್ಯೂಸ್
07-02-21 04:35 pm Headline Karnataka News Network ದೇಶ - ವಿದೇಶ
ಚೆನ್ನೈ, ಫೆ.7: ನೇವಿಯಲ್ಲಿ ಅಧಿಕಾರಿ ಆಗಿದ್ದ ರಾಂಚಿ ಮೂಲದ ಯುವಕನ ಯುವಕನನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ, ಕಾಡಿನ ಮಧ್ಯೆ ಕರೆದೊಯ್ದು ಪೆಟ್ರೋಲ್ ಸುರಿದು ಜೀವಂತ ಸುಟ್ಟು ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಛತ್ತೀಸ್ಗಢ ರಾಜ್ಯದ ರಾಂಚಿ ಮೂಲದ ನಿವಾಸಿಯಾಗಿರುವ ಸೂರಜ್ ಕುಮಾರ್ ದುಬೆ (26) ಶನಿವಾರ ಚೆನ್ನೈನಿಂದ 1500 ಕಿಮೀ ದೂರದ ಮಹಾರಾಷ್ಟ್ರದ ಪಾಲ್ಘಾರ್ ಎನ್ನುವ ಜಿಲ್ಲೆಯ ಕಾಡಿನ ಮಧ್ಯೆ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಐಎನ್ಎಸ್ ಅಗ್ರಣಿ ಎಂಬ ನೌಕೆಯಲ್ಲಿ ಸೀಮನ್ ಆಗಿದ್ದ ಸೂರಜ್ ದುಬೆ ರಜೆಯಲ್ಲಿ ತನ್ನೂರು ರಾಂಚಿಗೆ ತೆರಳಿದ್ದರು. ರಜೆ ಮುಗಿಸಿ, ಜ.30ರಂದು ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ರಾತ್ರಿ 9 ಗಂಟೆಗೆ ಮೂರು ಮಂದಿ ಆಗಂತುಕರು ಪಿಸ್ತೂಲ್ ತೋರಿಸಿ, ಎಸ್ ಯುವಿ ಮಹೀಂದ್ರಾ ವಾಹನದಲ್ಲಿ ದುಬೆಯನ್ನು ಅಪಹರಿಸಿದ್ದಾರೆ. ಚೆನ್ನೈನಲ್ಲಿ ಮೂರು ದಿನ ಕೂಡಿಹಾಕಿದ್ದ ತಂಡ, 10 ಲಕ್ಷ ರೂ. ನೀಡುವಂತೆ ಡಿಮಾಂಡ್ ಮಾಡಿದ್ದಾರೆ. ಆದರೆ, ಫೆ.5ರಂದು ಸೂರಜ್ ದುಬೆಯನ್ನು ಪಾಲ್ಘಾರ್ ಜಿಲ್ಲೆಯ ಘೋಲ್ವಾಡ್ ಎಂಬಲ್ಲಿಗೆ ಕೊಂಡೊಯ್ದು ಕಾಡಿನ ಮಧ್ಯೆ ಒಯ್ದಿದ್ದಾರೆ. ಅಲ್ಲಿ 90 ಶೇ. ಸುಟ್ಟ ಸ್ಥಿತಿಯಲ್ಲಿ ಸೂರಜ್ ದೇಹ ಪತ್ತೆಯಾಗಿದೆ.
ಪಾಲ್ಘಾರ್ ಜಿಲ್ಲೆಯ ಎಸ್ಪಿ ದತ್ತಾ ಶಿಂಧೆ ಪ್ರಕಾರ, ಸೂರಜ್ ಪತ್ತೆಯಾದ ಸಂದರ್ಭದಲ್ಲಿ ಜೀವಂತ ಇದ್ದರು. ಸ್ವತಃ ಈ ಬಗ್ಗೆ ಹೇಳಿಕೆಯನ್ನೂ ದುಬೆ ನೀಡಿದ್ದರು. ಕಿಡ್ನಾಪ್ ಮಾಡಿ, ಪಾಲ್ಘಾರ್ ಜಿಲ್ಲೆಗೆ ತಂದಿದ್ದಲ್ಲದೆ, ಶುಕ್ರವಾರ ತನಗೆ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟಿದ್ದರ ಬಗ್ಗೆ ಹೇಳಿಕೆ ನೀಡಿದ್ದರು. ತಾನು ಕೊಯಂಬತ್ತೂರಿನ ನೌಕಾದಳದ ಟ್ರೇನಿಂಗ್ ಸ್ಕೂಲಿನಲ್ಲಿ ಸೀಮನ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಸೇನಾಧಿಕಾರಿ ಎಂದು ಗೊತ್ತಾದ ಬಳಿಕ ನೌಕಾ ಪಡೆಯ ಹಾಸ್ಪಿಟಲ್ ಗೆ ದಾಖಲಿಸಿದ್ದೆವು ಎಂದಿದ್ದಾರೆ.
ಇದೇ ವೇಳೆ, ನೌಕಾಪಡೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದ್ದು ರಜೆಯಲ್ಲಿ ತೆರಳಿದ್ದ ದುಬೆಯನ್ನು ಫೆ.5ರಂದು ಪಾಲ್ಘಾರ್ ಜಿಲ್ಲೆಯಲ್ಲಿ 90 ಶೇ. ಸುಟ್ಟ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿತ್ತು. ಸೇನಾ ಆಸ್ಪತ್ರೆಗೆ ತರಲಾಗಿದ್ದು ಅಲ್ಲಿನ ವೈದ್ಯರು ಸೂರಜ್ ದುಬೆ ಮೃತರಾಗಿರುವ ಬಗ್ಗೆ ಘೋಷಿಸಿದ್ದಾರೆ ಎಂದಿದೆ.
ಚೆನ್ನೈ ಏರ್ಪೋರ್ಟ್ ನಲ್ಲಿ ಇಳಿದಿದ್ದ ದುಬೆಯನ್ನು ಅಪಹರಣಕಾರರು 1500 ಕಿಮೀ ದೂರದ ಮಹಾರಾಷ್ಟ್ರದ ಥಾಣೆ ಬಳಿಯ ಪಾಲ್ಘಾರ್ ಜಿಲ್ಲೆಗೆ ಒಯ್ಯಲಾಗಿತ್ತು. ಹತ್ತು ಲಕ್ಷ ನೀಡಲು ಒಪ್ಪದ ಕಾರಣಕ್ಕೆ ಕಾಡಿನ ಮಧ್ಯೆ ಒಯ್ದು ಜೀವಂತವಾಗಿ ಪೆಟ್ರೋಲ್ ಸುರಿದು ದಹಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ಸಂಬಂಧಿಸಿ ಕಿಡ್ನಾಪ್, ಕೊಲೆ, ದರೋಡೆ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. ದುಬೆಯನ್ನು ಅಷ್ಟು ದೂರಕ್ಕೆ ಯಾಕೆ ಒಯ್ದಿದ್ದಾರೆ ಎನ್ನುವುದೇ ಪೊಲೀಸರ ಕುತೂಹಲಕ್ಕೆ ಕಾರಣವಾಗಿದೆ. ಚೆನ್ನೈನಿಂದ ಘೋಲ್ವಾಡ್ ವರೆಗಿನ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಪಹರಣಕಾರರು ದುಬೆಗೆ ಮೊದಲೇ ಪರಿಚಿತರಾಗಿದ್ದರೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
A 26-year-old Navy sailor who had been abducted in Chennai on January 30 was set on fire by the kidnappers in jungles of Maharashtra's Palghar district. The Navy officer succumed to his burn injuries while he was rushed to a hospital, the police said on Saturday.
23-04-25 02:51 pm
Bangalore Correspondent
Harish Poonja, Speaker U T Khader: ಸ್ಪೀಕರ್ ಧರ...
23-04-25 01:06 pm
ಒಂದೇ ಸಮುದಾಯವನ್ನು ಶಿಕ್ಷಣ, ಉದ್ಯೋಗ ಕಾರಣಕ್ಕೆ ಪ್ರತ...
22-04-25 10:15 pm
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm