ಬ್ರೇಕಿಂಗ್ ನ್ಯೂಸ್
21-04-21 02:24 pm Headline Karnataka News Network ದೇಶ - ವಿದೇಶ
ನವದೆಹಲಿ, ಎ.21: ಬಾನಾಡಿಯಾಗಿ ಹಾರಿಹೋಗುವ ಪಾರಿವಾಳದ ವಿರುದ್ಧ ಎಫ್ಐಆರ್ ಆಗಿರುವುದನ್ನು ಕೇಳಿದ್ದೀರಾ.. ಸಾಮಾನ್ಯವಾಗಿ ಮನುಷ್ಯರು ಅಪರಾಧ ಕೃತ್ಯ ಎಸಗಿದರೆ ಅವರನ್ನು ಶಿಕ್ಷಿಸಲು ಕೇಸ್, ಎಫ್ಐಆರ್ ಮಾಡಲಾಗುತ್ತದೆ. ಆದರೆ, ಇಲ್ಲೊಂದು ಸಾಮಾನ್ಯ ಪಾರಿವಾಳದ ವಿರುದ್ಧವೇ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.
ಹೌದು.. ಪಾಕಿಸ್ಥಾನದ ಗಡಿಭಾಗ ಪಂಜಾಬ್ ನಲ್ಲಿ ಪಾರಿವಾಳದ ವಿರುದ್ಧವೇ ಸ್ಥಳೀಯ ಪೊಲೀಸರು ಎಫ್ಐಆರ್ ರಿಜಿಸ್ಟರ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಗಡಿರೇಖೆಯಿಂದ 500 ಮೀಟರ್ ಒಳಭಾಗದಲ್ಲಿ ಹಾರಿಬಂದ ಪಾರಿವಾಳವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು, ಅದರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಎ.17ರಂದು ಸಂಜೆ ಗಡಿಭಾಗದಲ್ಲಿ ಕರ್ತವ್ಯದಲ್ಲಿದ್ದ ನೀರಜ್ ಕುಮಾರ್ ಎಂಬ ಯೋಧನ ಹೆಗಲಲ್ಲಿ ಕುಳಿತ ಪಾರಿವಾಳವನ್ನು ಆತ ಕೂಡಲೇ ಹಿಡಿದುಕೊಂಡಿದ್ದರು. ಕಾಲಿನಲ್ಲಿ ಸಿಕ್ಕಿಸಿಕೊಂಡಿದ್ದ ಕಾಗದ ಚೂರಿನಲ್ಲಿ ಏನೋ ಗೂಢ ಸಂಖ್ಯೆ ಇರುವುದನ್ನು ಗಮನಿಸಿದ ಯೋಧ ಕೂಡಲೇ, ತಮ್ಮ ವಿಭಾಗದ ಕಮಾಂಡರಿಗೆ ಸುದ್ದಿ ಮುಟ್ಟಿಸಿದರು. ಬಳಿಕ ಕಮಾಂಡರ್ ಓಂಪಾಲ್ ಸಿಂಗ್ ಸೂಚನೆಯಂತೆ, ಪಾರಿವಾಳವನ್ನು ವಶಕ್ಕೆ ಪಡೆದಿದ್ದು ಅದರಲ್ಲಿ ಕಾಲಿನಲ್ಲಿ ಸಿಕ್ಕಿಸಿಕೊಂಡಿದ್ದ ಕಾಗದದ ಚೂರನ್ನು ಗಮನಿಸಿದ್ದಾರೆ.

ಪಾರಿವಾಳದ ಕಾಲಿಗೆ ಗಮ್ ಟೇಪಲ್ಲಿ ಸುತ್ತಿಟ್ಟ ರೀತಿಯಲ್ಲಿ ಕಾಗದದ ಚೂರನ್ನು ಅಂಟಿಸಲಾಗಿತ್ತು. ಅದರಲ್ಲಿ ಏನೋ ಕೋಡ್ ನಂಬರ್ ಬರೆಯಲಾಗಿತ್ತು. ಹೀಗಾಗಿ ಇದೊಂದು ಗೂಢಚಾರಿಕೆ ಕೆಲಸಕ್ಕಾಗಿ ಹಾರಿಬಿಟ್ಟ ಪಾರಿವಾಳ ಎನ್ನುವುದನ್ನು ಅರಿತ ಕಮಾಂಡರ್ ಓಂಪಾಲ್ ಸಿಂಗ್, ಅದರ ವಿರುದ್ಧ ಸ್ಥಳೀಯ ಅಮೃತಸರ ಸಮೀಪದ ಕಹಾಗರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ಬಿಳಿ ಬಣ್ಣದ ದೇಹ ಮತ್ತು ಕಪ್ಪು ಬಣ್ಣದ ತಲೆ ಹೊಂದಿರುವ ಪಾರಿವಾಳ ಮತ್ತು ಬಿಳಿ ಬಣ್ಣದ ಪೇಪರ್ ವಶಕ್ಕೆ ಪಡೆದಿರುವುದಾಗಿ ಉಲ್ಲೇಖ ಮಾಡಲಾಗಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿಯೂ ಇದೇ ರೀತಿಯ ಗೂಢಚಾರಿಕೆ ವೃತ್ತಿಯ ಪಾರಿವಾಳ ಒಂದನ್ನು ಜಮ್ಮು ಗಡಿಭಾಗದಲ್ಲಿ ಯೋಧರು ಪತ್ತೆ ಮಾಡಿದ್ದರು. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಗಡಿಭಾಗದಲ್ಲಿ ಗೂಢಚಾರಿಕೆಯ ತರಬೇತಾಗಿದ್ದ ಪಾರಿವಾಳವನ್ನು ವಶಕ್ಕೆ ಪಡೆಯಲಾಗಿತ್ತು. ಸೇನಾ ಮೂಲಗಳ ಪ್ರಕಾರ, ಪಾರಿವಾಳದ ಮೂಲಕ ಕೋಡೆಡ್ ಸಂದೇಶವನ್ನು ಕಳಿಸುತ್ತಿದ್ದು ಅದೆಲ್ಲೋ ದಾರಿತಪ್ಪಿ ಯೋಧರ ಕೈಗೆ ಸಿಕ್ಕಿದೆಯಂತೆ.
The auspicious pigeon was caught near the International Border at Punjab when the bird came flying near a constable who was on duty at BOP Roranwala. An FIR has been lodged against the pigeon which was carrying a piece of paper tied to its legs.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm