ಬ್ರೇಕಿಂಗ್ ನ್ಯೂಸ್
26-05-21 08:57 pm Headline Karnataka News Network ದೇಶ - ವಿದೇಶ
ನವದೆಹಲಿ, ಮೇ 26: ಅಲೋಪತಿ ವೈದ್ಯಕೀಯವೇ ಸುಳ್ಳು, ಮೂರ್ಖ ವಿಜ್ಞಾನ ಎಂದು ಹೇಳಿಕೆ ನೀಡಿದ್ದ ಪತಂಜಲಿ ಗುರು ಬಾಬಾ ರಾಮದೇವ್ ವಿರುದ್ಧ ಐಎಂಎ ಒಂದು ಸಾವಿರ ಕೋಟಿ ರೂ. ಪರಿಹಾರ ಕೇಳಿ ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದೆ. ತಮ್ಮ ಹೇಳಿಕೆಯ ಬಗ್ಗೆ 15 ದಿನಗಳಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಈ ಬಗ್ಗೆ ಸಾವಿರ ಕೋಟಿ ಪರಿಹಾರಕ್ಕಾಗಿ ಪ್ರಕರಣ ದಾಖಲಿಸುತ್ತೇವೆ ಎಂದು ಉತ್ತರಾಖಂಡ ರಾಜ್ಯ ಐಎಂಎ ಘಟಕ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಬಾಬಾ ರಾಮದೇವ್ ವಿರುದ್ಧ ಆರು ಪುಟಗಳ ನೋಟೀಸ್ ನೀಡಿರುವ ಉತ್ತರಾಖಂಡ ಐಎಂಎ ಘಟಕದ ಕಾರ್ಯದರ್ಶಿ ಅಜಯ್ ಖನ್ನಾ, ರಾಮದೇವ್ ಅಲೋಪತಿ ವೈದ್ಯರನ್ನು ಅವಮಾನಿಸಿದ್ದಾರೆ. ನಮ್ಮ ಘಟಕದ ಎರಡು ಸಾವಿರ ಮಂದಿ ಸದಸ್ಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.

15 ದಿನಗಳಲ್ಲಿ ಲಿಖಿತ ರೂಪದಲ್ಲಿ ಕ್ಷಮೆ ಯಾಚಿಸದಿದ್ದರೆ ಯೋಗಗುರು ವಿರುದ್ಧ ಸೆಕ್ಷನ್ 499 ಪ್ರಕಾರ ಕ್ರಿಮಿನಲ್ ಕೇಸು ದಾಖಲು ಮಾಡುತ್ತೇವೆ. ಪ್ರತೀ ಸದಸ್ಯನಿಗೆ 50 ಲಕ್ಷ ರೂ.ನಂತೆ ಒಂದು ಸಾವಿರ ಕೋಟಿ ರೂಪಾಯಿ ಪರಿಹಾರ ಕೇಳಿ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇವೆ ಎಂದು ವಕೀಲರ ಮೂಲಕ ಹೇಳಿದ್ದಾರೆ.
ಇದೇ ವೇಳೆ, ಪತಂಜಲಿಯಿಂದ ನೀಡಲಾಗುತ್ತಿರುವ ಕೊರೊನಿಲ್ ಕಿಟ್ ಬಗ್ಗೆಯೂ ಐಎಂಎ ಆಕ್ಷೇಪ ಎತ್ತಿದೆ. ಕೊರೊನಾಗೆ ಔಷಧಿ ಎನ್ನುವ ರೀತಿ ಬಿಂಬಿಸಿ ಜಾಹೀರಾತು ನೀಡಲಾಗಿದೆ. ಅದನ್ನೂ ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದರ ವಿರುದ್ಧವೂ ಎಫ್ಐಆರ್ ದಾಖಲು ಮಾಡುತ್ತೀವಿ ಎಂದು ಎಚ್ಚರಿಸಲಾಗಿದೆ.
ಅಲೋಪತಿ ವೈದ್ಯರು ಮತ್ತು ಫಾರ್ಮಾ ಕಂಪನಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಾಬಾ ರಾಮದೇವ್, 25 ಪ್ರಶ್ನೆಗಳನ್ನು ಮುಂದಿಟ್ಟು ಅಲೋಪತಿ ವೈದ್ಯಕೀಯ ವಿಜ್ಞಾನವನ್ನೇ ಅಣಕಿಸಿದ್ದಾರೆ. ಅಲೋಪತಿಯಲ್ಲಿ ಮಧುಮೇಹ, ಬಿಪಿಗಳಿಗೆ ಶಾಶ್ವತ ಪರಿಹಾರ ಇದೆಯೇ, ಸಂಧಿವಾತ, ಥೈರಾಯ್ಡ್, ಅಸ್ತಮಾಗೆ ಶಾಶ್ವತ ಚಿಕಿತ್ಸೆ ಇದೆಯೇ, ಹೆಪಟೈಟಿಸ್, ಪಿತ್ತ ಜನಕಾಂಗದ ಸಿರೋಸಿಸ್ ಗುಣಪಡಿಸುವ ಚಿಕಿತ್ಸೆ ಇದೆಯೇ, ತಲೆನೋವು, ಮೈಗ್ರೇನ್ ಗೆ ಶಾಶ್ವತ ಪರಿಹಾರ ಇದೆಯೇ, ಪಾರ್ಕಿನ್ಸನ್ ಕಾಯಿಲೆಗೆ ಶಾಶ್ವತ ಚಿಕಿತ್ಸೆ ಇದೆಯೇ ಇತ್ಯಾದಿ 25 ಪ್ರಶ್ನೆಗಳನ್ನು ಕೇಳಿ ಫಾರ್ಮಾ ಸಂಸ್ಥೆಗಳನ್ನೇ ದಂಗು ಬಡಿಸಿದ್ದಾರೆ.
Yoga guru Ramdev has been served a defamation notice by the Indian Medical Association’s (IMA’s) Uttarakhand division for his recent statements questioning the efficacy of allopathy medicines.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 06:56 pm
HK News Staffer
ಪುತ್ತೂರು ; ಪತಿ - ಪತ್ನಿ ಜಗಳ ಕೊಲೆಯಲ್ಲಿ ಅವಸಾನ, ಪ...
20-03-26 03:39 pm
ದ.ಕ. ಜಿಲ್ಲೆಯಲ್ಲಿ ಮಾರ್ಚ್ 20ರಂದೇ ಈದುಲ್ ಫಿತರ್ ಹಬ...
19-03-26 11:30 pm
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣಕ್ಕೆ ಟ್ವಿಸ್ಟ್!...
19-03-26 05:27 pm
ಗ್ಯಾಸ್ ಬಿಲ್ ನಲ್ಲಿ 20 ರು. ಬಾಕಿ ಇದೆಯೆಂದು ಸೈಬರ್...
19-03-26 02:51 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm