ಬ್ರೇಕಿಂಗ್ ನ್ಯೂಸ್
11-07-21 03:55 pm Headline Karnataka News Network ದೇಶ - ವಿದೇಶ
ಮುಂಬೈ, ಜುಲೈ 11: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಅಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ಮತ್ತು ಅವರ ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಅಂತರ್ ಧರ್ಮ ವಿವಾಹದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಒಂದು ಸಮಯದಲ್ಲಿ ಪಂಜಾಬ್ನಲ್ಲಿ ಈ ರೀತಿ ಮದುವೆಗಳಾದರೆ ಒಂದು ಮಗುವನ್ನು ಹಿಂದು, ಇನ್ನೊಂದು ಮಗುವನ್ನು ಸಿಖ್ ಹೆಸರಲ್ಲಿ ಗುರುತಿಸಿ ಬೆಳೆಸುತ್ತಿದ್ದರು. ಆದರೆ ಹಿಂದು - ಮುಸ್ಲಿಮರ ಮಧ್ಯೆ ಈ ಟ್ರೆಂಡ್ ಯಾವತ್ತೂ ಕಂಡುಬಂದಿಲ್ಲ. ಅಥವಾ ಮುಸ್ಲಿಮರನ್ನು ಮದಯವೆಯಾದ ಬೇರೆ ಯಾವುದೆ ಧರ್ಮದ ಫ್ಯಾಮಿಯಲ್ಲೂ ಈ ಟ್ರೆಂಡ್ ಇಲ್ಲ. ಅಮೀರ್ ಖಾನ್ ಎರಡನೇ ವಿಚ್ಛೇದನದ ನಂತರ ನನಗೆ ಅಚ್ಚರಿಯಾಗಿ ಕಂಡುಬರುತ್ತಿರುವ ವಿಚಾರವಿದು. ಅಂತರ್ ಧರ್ಮ ವಿವಾಹದಲ್ಲಿ ಮಕ್ಕಳು ಮಾತ್ರ ಮುಸ್ಲಿಂ ಆಗಿ ಮಾತ್ರ ಗುರುತಿಸಲ್ಪಡೋದ್ಯಾಕೆ ಎಂದು ಪ್ರಶ್ನಿಸಿದ್ದಾರೆ.
ಮಕ್ಕಳು ಹಿಂದೂಗಳಾಗಿರಲು ಏಕೆ ಸಾಧ್ಯವಿಲ್ಲ? ಬದಲಾಗುತ್ತಿರುವ ಸಮಯದೊಂದಿಗೆ ನಾವು ಇದನ್ನು ಕೂಡ ಬದಲಾಯಿಸಬೇಕಲ್ಲ. ಈ ಪದ್ಧತಿ ಹಳೆಯದಾಗಿದೆ. ಒಂದು ಕುಟುಂಬದಲ್ಲಿ ಹಿಂದೂ, ಜೈನ, ಬೌದ್ಧ, ಸಿಖ್ ಮತ್ತು ನಾಸ್ತಿಕರು ಒಟ್ಟಿಗೆ ಬದುಕಲು ಸಾಧ್ಯವಾದರೆ ಮುಸ್ಲಿಮರನ್ನು ಮದುವೆಯಾಗಲು ಒಬ್ಬರ ಧರ್ಮವನ್ನು ಏಕೆ ಬದಲಾಯಿಸಬೇಕು ಎಂದು ಕಂಗನಾ ಪ್ರಶ್ನಿಸಿದ್ದಾರೆ.
ಅಮೀರ್ ಮತ್ತು ಕಿರಣ್ ರಾವ್ ಮದುವೆಯಾದ 15 ವರ್ಷಗಳ ನಂತರ ಪತ್ರಿಕಾಗೋಷ್ಠಿಯಲ್ಲಿ ವಿಚ್ಛೇದನೆ ಪ್ರಕಟಿಸಿದ್ದಾರೆ. “ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ. ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಇರುವುದಿಲ್ಲ. ಆದರೆ ಮಗುವಿಗೆ ಪೋಷಕರಾಗಿ ಮುಂದುವರಿಯಲಿದ್ದೇವೆ. ನಮ್ಮ ಮಗ ಆಜಾದ್ಗೆ ಪೋಷಕರಾಗಿ ಉಳಿದಿದ್ದೇವೆ. ಅವನನ್ನು ನಾವು ಒಟ್ಟಿಗೆ ಬೆಳೆಸುತ್ತೇವೆ ಎಂದಿದ್ದರು.
ಅಮಿರ್ ಖಾನ್ ಮೊದಲ ಪತ್ನಿಯಾಗಿ ಹಿಂದು ಯುವತಿಯನ್ನು ಮದುವೆಯಾಗಿದ್ದರು. ಅದರಲ್ಲಿ ಇಬ್ಬರು ಮಕ್ಕಳಿದ್ದು ಇಬ್ಬರ ಹೆಸರು ಕೂಡ ಖಾನ್ ಆಗಿಯೇ ಇದೆ. 2001ರ ಲಗಾನ್ ಚಿತ್ರ ಹಿಟ್ ಆಗುತ್ತಿದ್ದಂತೆ ಅದರಲ್ಲಿ ಸಣ್ಣ ಪಾತ್ರ ಮಾಡಿದ್ದ ಕಿರಣ್ ರಾವ್ ಅವರನ್ನು ಪ್ರೀತಿಸಿ 2002ರಲ್ಲಿ ಮದುವೆಯಾಗಿದ್ದರು. ಅವರಿಗೆ ಹುಟ್ಟಿದ ಮಗುವಿಗೆ ಆಜಾದ್ ಖಾನ್ ಎಂದು ಹೆಸರಿಡಲಾಗಿತ್ತು. ಈಗ ಎರಡನೇ ಪತ್ನಿಗೂ ಅಮೀರ್ ವಿಚ್ಚೇದನ ನೀಡಿದ್ದಾರೆ. ಈ ವಿಚಾರದಲ್ಲಿ ಕಂಗನಾ ಪ್ರಶ್ನೆ ಮಾಡಿದ್ದು ಬಾಲಿವುಡ್ ನಲ್ಲಿ ಬಹಳಷ್ಟು ಹಿಂದು - ಮುಸ್ಲಿಂ ಮದುವೆಗಳು ನಡೆದಿವೆ. ಆದರೆ ಮಕ್ಕಳ ಹೆಸರು ಮಾತ್ರ ಮುಸ್ಲಿಂ ಆಗಿಯೇ ಇರುವುದೇಕೆ. ಮದುವೆಯಾದ ಮಾತ್ರಕ್ಕೆ ಪತ್ನಿ ಮುಸ್ಲಿಂ ಆಗಿ ಮತಾಂತರ ಆಗುವುದೇಕೆ ಎಂದು ಮಾರ್ಮಿಕ ಪ್ರಶ್ನೆ ಪ್ರಶ್ನೆ ಎತ್ತಿದ್ದಾರೆ.
Bollywood actress Kangana Ranaut is known for speaking her mind, and more often than not it has landed her in trouble. On Aamir Khan and Kiran Rao's recent divorce announcement, the Queen actress shared her thoughts.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm