ಬ್ರೇಕಿಂಗ್ ನ್ಯೂಸ್
30-07-21 07:31 pm Headline Karnataka News Network ದೇಶ - ವಿದೇಶ
ಕೊಲಂಬೋ, ಜುಲೈ 30: ಪ್ರಪಂಚದಲ್ಲಿಯೇ ಅತಿ ದೊಡ್ಡದು ಎನ್ನಲಾಗಿರುವ ನಕ್ಷತ್ರ ನೀಲಮಣಿ ಶ್ರೀಲಂಕಾದಲ್ಲಿ ಪತ್ತೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಉತ್ತರ ಶ್ರೀಲಂಕಾದ ರತ್ನಪುರ ಎಂಬಲ್ಲಿ ವ್ಯಕ್ತಿಯೊಬ್ಬರು ಬಾವಿ ತೋಡುತ್ತಿದ್ದಾಗ ಭಾರೀ ಗಾತ್ರದ ನೀಲಿ ಶಿಲೆ ಪತ್ತೆಯಾಗಿದ್ದು ಅದನ್ನು ಸರಕಾರದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನೀಲಮಣಿ 510 ಕೇಜಿ ಭಾರ ಹೊಂದಿದ್ದು, 2.5 ಲಕ್ಷ ಕ್ಯಾರೆಟ್ ಅಪ್ಪಟವಾಗಿದೆ. ಶ್ರೀಲಂಕಾದಲ್ಲಿ ರತ್ನಪುರ ಎಂಬುದು ರತ್ನಗಳ ರಾಜಧಾನಿ ಎಂದೇ ಹೆಸರು ಪಡೆದಿರುವ ಪ್ರದೇಶ. ಬೇರೆ ಬೇರೆ ರೀತಿಯ ಹವಳಗಳು, ಶಿಲೆಗಳು ಇಲ್ಲಿ ದೊರಕುವುದರಿಂದ ಅತ್ಯಂತ ವಿಶೇಷತೆಯನ್ನು ಹೊಂದಿದೆ. ಈ ಜಾಗದಲ್ಲಿ ಹವಳಗಳ ವ್ಯಾಪಾರಿಯೇ ಆಗಿರುವ ವ್ಯಕ್ತಿಯೊಬ್ಬರು ಬಾವಿ ತೋಡುತ್ತಿದ್ದಾಗ ಭಾರೀ ಗಾತ್ರದ ಶಿಲೆ ಪತ್ತೆಯಾಗಿತ್ತು. ಕಾರ್ಮಿಕರು ಅಪರೂಪದ ನೀಲಮಣಿ ಎಂದು ಇದರ ಬಗ್ಗೆ ಮಾಹಿತಿ ನೀಡಿದ್ದರು.
ವರ್ಷದ ಹಿಂದೆಯೇ ನೀಲಮಣಿ ಪತ್ತೆಯಾಗಿದ್ದು, ಅದನ್ನು ಕ್ಲೀನ್ ಮಾಡಲು ಒಂದು ವರ್ಷ ಬೇಕಾಯಿತು. ಹೊರಭಾಗದಲ್ಲಿ ಅಂಟಿದ್ದ ಮಣ್ಣು, ಅನಗತ್ಯ ಚೂರುಗಳನ್ನು ತೆರವುಗೊಳಿಸಿದಾಗ ನಕ್ಷತ್ರದ ರೀತಿ ಹೊಳೆಯುವ ಅಪರೂಪದ ನೀಲಮಣಿಯಾಗಿ ಗೋಚರಿಸಿದೆ. 510 ಕೇಜಿ ಭಾರದ ನೀಲಮಣಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೂರು ಮಿಲಿಯನ್ ಡಾಲರ್ (ಬರೋಬ್ಬರಿ 744 ಕೋಟಿ ರೂಪಾಯಿ) ದರ ಇರಲಿದೆ ಎಂದು ಅಂದಾಜಿದೆ.
ಅತ್ಯಂತ ಅಪರೂಪದ ಮತ್ತು ಜಗತ್ತಿನಲ್ಲೇ ಅತಿ ದೊಡ್ಡದಾಗಿರುವ ಸ್ಫಟಿಕದ ಮಾದರಿಯ ನೀಲಮಣಿಯಿದು. ಇದನ್ನು ಜಗತ್ತಿನ ಮುಂಚೂಣಿ ಖಾಸಗಿ ಮ್ಯೂಸಿಯಂಗಳು ಗಮನಿಸಿದರೆ, ಖರೀದಿಸಬಹುದು ಎಂದು ಶ್ರೀಲಂಕಾದ ರಾಷ್ಟ್ರೀಯ ಹವಳ ಮತ್ತು ಜುವೆಲ್ಲರಿ ಅಥಾರಿಟಿಯ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಚಿದ್ದಾಗಿ ಬಿಬಿಸಿ ವರದಿ ಮಾಡಿದೆ.
A gem trader said the stone was found by workmen digging a well in his home in the gem-rich Ratnapura area. Experts say the stone, which is pale blue in colour, has an estimated value of up to $100 million in the international market. The cluster weighs around 510 kilograms or 2.5 million carats and has been named the "Serendipity Sapphire".
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 11:26 pm
HK News Staffer
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
Sandesh PG, Inspector: ಮೂಡುಬಿದ್ರೆ ಇನ್ಸ್ ಪೆಕ್ಟ...
20-03-26 06:56 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm