ಬ್ರೇಕಿಂಗ್ ನ್ಯೂಸ್
25-02-26 01:48 pm Supritha Jain | ಸುಪ್ರೀತಾ ಜೈನ್ ಕರ್ನಾಟಕ
ತಿರುವನಂತಪುರಂ, ಫೆ. 24: ಕೇರಳ ಮೂಲದವರಿಗೆ ಅಧಿಕೃತ ಗುರುತಿನ ದಾಖಲೆಯಾಗಿ ‘ನೇಟಿವಿಟಿ ಕಾರ್ಡ್’ ನೀಡುವ ಮಸೂದೆಗೆ ರಾಜ್ಯ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಮೂಲಕ ತನ್ನ ಮೂಲ ನಿವಾಸಿಗಳಿಗೆ ಪ್ರತ್ಯೇಕ ಫೋಟೋ ಆಧಾರಿತ ಕಾರ್ಡ್ ನೀಡಲು ಮುಂದಾದ ದೇಶದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ ಎಂದು ಸರ್ಕಾರ ಹೇಳಿದೆ.
ಡಿಸೆಂಬರ್ನಲ್ಲಿ ಈ ಯೋಜನೆ ಘೋಷಿಸಲಾಗಿದ್ದು, ಇದೀಗ ಕ್ಯಾಬಿನೆಟ್ ಅನುಮೋದನೆ ಹಾಗೂ ಆದಾಯ ಇಲಾಖೆ ಆದೇಶದ ಮೂಲಕ ಅಧಿಕೃತಗೊಳಿಸಲಾಗಿದೆ. ಸರ್ಕಾರದ ಸೇವೆಗಳನ್ನು ಪಡೆಯಲು ತಮ್ಮ ಮೂಲಸ್ಥಳವನ್ನು ಮರುಮರು ಸಾಬೀತುಪಡಿಸಬೇಕಾದ ನಾಗರಿಕರ ಸಂಕಷ್ಟ ನಿವಾರಣೆಯೇ ಇದರ ಉದ್ದೇಶ ಎಂದು ತಿಳಿಸಲಾಗಿದೆ.
ನೇಟಿವಿಟಿ ಕಾರ್ಡ್ ಎಂದರೇನು?
ಅರ್ಜಿ ಪ್ರಕ್ರಿಯೆ ಮತ್ತು ಅರ್ಹತೆ
ಪ್ರಸ್ತುತ ನೇಟಿವಿಟಿ ಪ್ರಮಾಣಪತ್ರಕ್ಕೆ ಅನ್ವಯವಾಗುವ ಅರ್ಹತಾ ಮಾನದಂಡಗಳನ್ನೇ ಹೊಸ ಕಾರ್ಡ್ಗೂ ಅನ್ವಯಿಸಲಾಗುತ್ತದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಜನರು ಕಷ್ಟಪಡುವ ಪರಿಸ್ಥಿತಿಯನ್ನು ನಿವಾರಿಸಲು ಕಾನೂನು ಬೆಂಬಲ ಹೊಂದಿದ ದಾಖಲೆ ಅಗತ್ಯ,” ಎಂದು ತಿಳಿಸಿದ್ದಾರೆ.
ಶಿಕ್ಷಣ, ವಿದ್ಯಾರ್ಥಿವೇತನ, ಕಲ್ಯಾಣ ಯೋಜನೆಗಳು, ಸ್ಥಳೀಯ ಸಂಸ್ಥೆಗಳ ಸೌಲಭ್ಯಗಳು ಸೇರಿದಂತೆ ವಿವಿಧ ಉದ್ದೇಶಗಳಿಗೆ ಪುನಃಪುನಃ ನಾಟಿವಿಟಿ ಪ್ರಮಾಣಪತ್ರ ಪಡೆಯಬೇಕಾದ ತೊಂದರೆಯನ್ನು ಈ ಕಾರ್ಡ್ ಕಡಿಮೆ ಮಾಡಲಿದೆ ಎಂದು ಸರ್ಕಾರ ಹೇಳಿದೆ.
ಸರ್ಕಾರದ ಆದೇಶದಲ್ಲಿ ಪ್ರಸ್ತುತ ನೇಟಿವಿಟಿ ಪ್ರಮಾಣಪತ್ರಕ್ಕೂ ಹಾಗೂ ಹೊಸ ಕಾರ್ಡ್ಗೂ ಸ್ಪಷ್ಟ ಕಾನೂನು ಬೆಂಬಲ ಇಲ್ಲವೆಂದು ಒಪ್ಪಿಕೊಂಡಿದೆ.
ಒಟ್ಟಾರೆ, ನೇಟಿವಿಟಿ ಕಾರ್ಡ್ ಕೇರಳದ ದಾಖಲೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವಾಗಿ ಪರಿಚಯವಾಗಿದ್ದರೂ, ಇದರ ಕಾನೂನುಬದ್ಧತೆ ಮತ್ತು ಕೇಂದ್ರ-ರಾಜ್ಯ ಅಧಿಕಾರಗಳ ಗಡಿ ಕುರಿತ ಚರ್ಚೆ ಮುಂದುವರಿದಿದೆ.
13-04-26 09:49 pm
HK News Staffer
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
ಪಿಗ್ಮಿ ಏಜೆಂಟರು ಮಧ್ಯವರ್ತಿಗಳಲ್ಲ, ಬ್ಯಾಂಕುಗಳ ನೌಕರ...
12-04-26 07:58 pm
ಪಿಯುಸಿ ಫಸ್ಟ್ ಕ್ಲಾಸ್ ಪಾಸಾದ ಜೀವಾವಧಿ ಶಿಕ್ಷೆಗೀಡಾದ...
10-04-26 06:53 pm
13-04-26 10:35 pm
HK News Staffer
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
ಅಮೆರಿಕ- ಇರಾನ್ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯ...
13-04-26 01:27 pm
ಹೊರ್ಮುಜ್ ಜಲಸಂಧಿಯನ್ನು ನಾವೇ ತಡೆಯುತ್ತೇವೆ, ಅಣ್ವಸ್...
12-04-26 10:59 pm
ಕೇರಳ ಪಾಲಿಟಿಕ್ಸ್ : ಅಧಿಕಾರ ಪಲ್ಲಟಕ್ಕೆ ಮುಸ್ಲಿಂ -...
11-04-26 09:05 pm
13-04-26 12:53 pm
HK News Staffer
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
ಭರತನಾಟ್ಯ ಗುರು ಶ್ರಾವಣ್ ಉಳ್ಳಾಲ್ ಹಳದಿ ಕಾಮಾಲೆ ರೋಗ...
10-04-26 09:49 pm
11-04-26 11:14 pm
HK News Desk
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm
ಕುಂಭಮೇಳದ ಮೊನಾಲಿಸಾ ಅಂತರ್ಧರ್ಮೀಯ ವಿವಾಹಕ್ಕೆ ಕುತ್ತ...
10-04-26 11:06 pm
Red Corner Notice, Mangalore crime: ದೇರಳಕಟ್ಟೆ...
09-04-26 09:16 pm