ಬ್ರೇಕಿಂಗ್ ನ್ಯೂಸ್
20-08-21 01:06 pm Headline Karnataka News Network ದೇಶ - ವಿದೇಶ
ಕಾಬೂಲ್, ಆಗಸ್ಟ್ 20: ಅಮೆರಿಕದ ವಿಮಾನದ ಟೈರ್ ಹತ್ತಿ ಕುಳಿತು ವಿದೇಶಕ್ಕೆ ಪಾರಾಗಲು ಯತ್ನಿಸಿ, ಕೆಳಕ್ಕೆ ಬಿದ್ದು ದುರಂತ ಸಾವು ಕಂಡಿದ್ದ ಯುವಕ ಅಫ್ಘಾನಿಸ್ತಾನ ಯುವ ಫುಟ್ಬಾಲ್ ತಂಡದ ಉದಯೋನ್ಮುಖ ಆಟಗಾರ ಎನ್ನುವ ಅಚ್ಚರಿಯನ್ನು ಮಾಹಿತಿ ಹೊರಬಿದ್ದಿದೆ.
ಕಾಬೂಲನ್ನು ತಾಲಿಬಾನ್ ವಶಕ್ಕೆ ಪಡೆಯುತ್ತಿದ್ದಂತೆ ಅಲ್ಲಿನ ಜನರು ದಿಕ್ಕೆಟ್ಟಿದ್ದಾರೆ. ಸಿಕ್ಕ ಸಿಕ್ಕ ವಿಮಾನಗಳಲ್ಲಿ ಹತ್ತಲು ಪ್ರಯತ್ನಿಸುತ್ತಿದ್ದಾರೆ. ಮೊನ್ನೆ ಅಮೆರಿಕದ ವಾಯುಪಡೆಯ ವಿಮಾನದ ರೆಕ್ಕೆ, ಟೈರ್ ಗಳಲ್ಲಿ ಹತ್ತಿ ಕುಳಿತಿದ್ದವರ ವಿಡಿಯೋ ವೈರಲ್ ಆಗಿತ್ತು. ಆನಂತರ ವಿಮಾನ ತುಸು ದೂರ ತೆರಳುವಷ್ಟರಲ್ಲಿ ಅದರಲ್ಲಿದ್ದ ಇಬ್ಬರು ಮೇಲಿನಿಂದ ಕೆಳಕ್ಕೆ ಬಿದ್ದಿರುವ ದೃಶ್ಯಗಳ ಫೋಟೋಗಳೂ ಕಂಡುಬಂದಿದ್ದವು.
ಇದೀಗ ಅಫ್ಘಾನಿಸ್ತಾನ ಸರಕಾರದ ಅಧಿಕೃತ ಸಂಸ್ಥೆ ಡೈರಕ್ಟರೇಟ್ ಆಫ್ ಫಿಸಿಕಲ್ ಎಜುಕೇಶನ್ ಅಂಡ್ ಸ್ಪೋರ್ಟ್ಸ್ ಕಮಿಟಿ, ಹೀಗೆ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಯುವಕ ಯುವ ಫುಟ್ಬಾಲ್ ಆಟಗಾರ ಝಾಕಿ ಅನ್ವಾರಿ ಎಂದು ದೃಢಪಡಿಸಿದೆ. ಝಾಕಿ ಸೇರಿದಂತೆ ಅಫ್ಘಾನಿಸ್ತಾನದ ಸಾವಿರಾರು ಯುವಕರು ಬೇರೆ ದೇಶಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಪೋರ್ಟ್ಸ್ ಗ್ರೂಪ್ ತನ್ನ ಫೇಸ್ಬುಕ್ ಹೇಳಿಕೆಯಲ್ಲಿ ತಿಳಿಸಿದೆ.
ಆಗಸ್ಟ್ 16ರಂದು ಅಮೆರಿಕದ ವಾಯುಪಡೆಯ ಸಿ 17 ಸೇನಾ ವಿಮಾನ ಕಾಬೂಲ್ ಏರ್ಪೋರ್ಟ್ ನಿಂದ ತೆರಳುತ್ತಿದ್ದಾಗ ಸಾವಿರಾರು ಟರ್ಮಿನಲ್ ನಲ್ಲಿ ಓಡಿ ಬರುವುದು, ವಿಮಾನವನ್ನು ಮುತ್ತಿಕೊಳ್ಳುವುದು, ರೆಕ್ಕೆಗಳ ವಿಮಾನ ಹತ್ತಿ ಕುಳಿತಿದ್ದ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಅದೇ ವಿಮಾನ ಬಳಿಕ ಮೇಲಕ್ಕೇರುತ್ತಿದ್ದಂತೆ, ಅದರಿಂದ ಇಬ್ಬರು ತರಗೆಲೆಗಳ ರೀತಿ ಕೆಳಕ್ಕೆ ಬಿದ್ದಿದ್ದರು.
19 ವರ್ಷದ ಝಾಕಿ ಅನ್ವಾರಿ, ಅಫ್ಘಾನಿಸ್ತಾನದ ಪ್ರತಿಷ್ಠಿತ ಇಸ್ತೆಕ್ ಲಾಲ್ ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿದ್ದ. ಇದರ ಜೊತೆಗೇ ರಾಷ್ಟ್ರೀಯ ಯುವ ಫುಟ್ಬಾಲ್ ತಂಡದಲ್ಲಿ ಗುರುತಿಸಿಕೊಂಡಿದ್ದ. ಹಮೀದ್ ಕರ್ಝಾಯಿ ಮತ್ತು ಅಶ್ರಫ್ ಘನಿ ನೇತೃತ್ವದಲ್ಲಿ ಕ್ರೀಡೆಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಹಲವಾರು ಕ್ರೀಡಾಪಟುಗಳು ಹೊರಹೊಮ್ಮಿದ್ದರು. ಯುವತಿಯರು ಕೂಡ ಕ್ರೀಡಾ ಚಟುವಟಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಝಾಕಿ ಅನ್ವಾರಿ ರಾಷ್ಟ್ರೀಯ ಯುವ ಫುಟ್ಬಾಲ್ ತಂಡದಲ್ಲಿ ಭರವಸೆಯ ಆಟಗಾರನಾಗಿದ್ದ. ಆತನ ಆಪ್ತರು ಹೇಳುವ ಪ್ರಕಾರ, ಝಾಕಿ ಅಮೆರಿಕಕ್ಕೆ ತೆರಳಿ ಫುಟ್ಬಾಲ್ ಆಟಗಾರನಾಗುವ ಕನಸು ಕಂಡಿದ್ದ. ಆದರೆ ದುರದೃಷ್ಟ ಅಂದರೆ, ಕಾಬೂಲ್ ಏರ್ ಫೀಲ್ಡ್ ನಲ್ಲಿ ದುರಂತ ಸಾವು ಕಂಡಿದ್ದಾನೆ ಎಂದು ಅಫ್ಘಾನಿಸ್ತಾನದ ಕ್ರೀಡಾ ಪತ್ರಕರ್ತ ಎಲಿಯಾಸ್ ನಿಯಾಝಿ ಬರೆದುಕೊಂಡಿದ್ದಾರೆ.
Afghan national team football player Zaki Anwari fell to his death as he tried to escape Kabul by clinging onto a US plane leaving the capital city, according to the General Directorate of Physical Education and Sports of Afghanistan.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm