ಬ್ರೇಕಿಂಗ್ ನ್ಯೂಸ್
06-09-21 02:36 pm Headline Karnataka News Network ದೇಶ - ವಿದೇಶ
ಲಕ್ನೋ, ಸೆ.6: ಯೋಗಿ ಆದಿತ್ಯನಾಥ್ ಸರಕಾರದ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿ ನಾಯಕ ಆಕಾಶ್ ಕುಮಾರ್ ಸಕ್ಸೇನಾ ನೀಡಿರುವ ದೂರಿನ ಪ್ರಕಾರ ರಾಮಪುರ ಜಿಲ್ಲೆಯ ಸಿವಿಲ್ ಲೈನ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಜನರ ರಕ್ತ ಹೀರುವ ಸರಕಾರ ಎಂದು ಅಜೀಜ್ ಖುರೇಷಿ ಹೇಳಿಕೆ ನೀಡಿದ್ದಾರೆ ಎಂದು ಸಕ್ಸೇನಾ ದೂರಿನಲ್ಲಿ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮನೆಗೆ ಭೇಟಿ ನೀಡಿದ ವೇಳೆ ಅಜೀಜ್ ಖುರೇಷಿ ಈ ಹೇಳಿಕೆ ನೀಡಿದ್ದಾರೆಂದು ಸಕ್ಸೇನಾ ತಿಳಿಸಿದ್ದಾರೆ. ಖುರೇಷಿ ಹೇಳಿಕೆಯಿಂದ ಎರಡು ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಯಾಗಲಿದೆ. ಅಶಾಂತಿಗೆ ಕಾರಣವಾಗಲಿದೆ ಎಂದು ಸಕ್ಸೇನಾ ತಿಳಿಸಿದ್ದು, ಇದರ ಸಾಕ್ಷ್ಯಕ್ಕಾಗಿ ಪೊಲೀಸರಿಗೆ ಹೇಳಿಕೆಯುಳ್ಳ ದಾಖಲೆಯನ್ನು ನೀಡಿದ್ದಾರೆ.

ಖುರೇಷಿ ಅವರ ವಿರುದ್ಧ 153 ಎ( ಧರ್ಮಗಳ ನಡುವೆ ವಿಷಬೀಜ ಬಿತ್ತುವುದು), 153 ಬಿ (ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವುದು), 124 ಎ (ದೇಶದ್ರೋಹ), 505(1) ಬಿ (ಸಮಾಜದಲ್ಲಿ ಭಯ ಸೃಷ್ಟಿಸುವುದು) ಸೆಕ್ಷನ್ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಅಜೀಜ್ ಖುರೇಷಿ 2014ರಿಂದ 2015ರ ವರೆಗೆ ಮಿಜೋರಾಂ ರಾಜ್ಯಪಾಲರಾಗಿದ್ದರು. ಕೆಲ ಕಾಲ ಉತ್ತರ ಪ್ರದೇಶದ ರಾಜ್ಯಪಾಲರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
Former Uttar Pradesh Governor Aziz Qureshi has been booked for sedition over his alleged derogatory remarks against the Yogi Adityanath government in the state, police said on Monday.
25-02-26 07:54 pm
HK News Staffer
ಕಾಮಗಾರಿ ಮುಗಿದರೂ ಮುಗಿಯದ 'ನಮ್ಮ ಮೆಟ್ರೋ' ಕಿರಿಕಿರಿ...
25-02-26 04:30 pm
ದೇಶದಲ್ಲೇ ಮೊದಲು ; ಕೇರಳ ನಾಗರಿಕರಿಗೆ ನೇಟಿವಿಟಿ ಕಾರ...
25-02-26 01:48 pm
ಕೊಪ್ಪಳ ; ಅಲ್ಪಸಂಖ್ಯಾತ ಇಲಾಖೆಯ ವಸತಿ ನಿಲಯದ ಶೌಚಾಲಯ...
25-02-26 12:30 pm
ಧಾರವಾಡದಲ್ಲಿ ಬೀದಿಗಿಳಿದ ಸಾವಿರಾರು ಉದ್ಯೋಗಾಕಾಂಕ್ಷಿ...
24-02-26 08:06 pm
25-02-26 10:10 pm
HK News Desk
ಮಧ್ಯಪ್ರದೇಶದಲ್ಲಿ ಹೊಸ ರೀತಿಯ ಮತಾಂತರ ಜಾಲ ; ಹಿಂದು...
25-02-26 03:38 pm
ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ; ಮತ್ತೆ ಭುಗಿಲೆ...
24-02-26 01:21 pm
ನೀವು ಮೋದಿಯನ್ನು ನಿಂದಿಸುತ್ತೀರಿ, ಕಂಬಳಿ ಪಡೆಯಲು ಹಕ...
23-02-26 06:57 pm
ಕಠ್ಮಂಡು ಬಳಿ ಭೀಕರ ಬಸ್ ದುರಂತ ; ತ್ರಿಶೂಲಿ ನದಿಗೆ ಬ...
23-02-26 04:45 pm
25-02-26 05:41 pm
HK News Staffer
ಮಂಗಳೂರಿನ ಕದ್ರಿಯಲ್ಲಿ ಚಿರತೆ ಪ್ರತ್ಯಕ್ಷ: ಸಿಸಿಟಿವಿ...
25-02-26 11:21 am
ಬೆಂಗಳೂರು ಬಿಟ್ಟು ಮಂಗಳೂರಿನತ್ತ ಐಟಿ ಉದ್ಯೋಗಿಗಳ ಚಿತ...
25-02-26 09:42 am
ಆನ್ಲೈನ್ ಹೂಡಿಕೆ ಹೆಸ್ರಲ್ಲಿ 19.06 ಲಕ್ಷ ರೂ. ವಂಚನ...
24-02-26 10:39 pm
Mangalore Ullal, Ratnagiri Accident: ಮಹಾರಾಷ್ಟ...
24-02-26 09:50 pm
24-02-26 10:07 pm
Mangaluru Staffer
ಕ್ರಿಕೆಟ್ ಆಟದ ದ್ವೇಷದಲ್ಲಿ ಸಹಪಾಠಿಗೆ ಹಲ್ಲೆ ; ಎಸ್ಸ...
24-02-26 06:01 pm
ನೀಟ್ ಪರೀಕ್ಷೆಗೆ ಒತ್ತಡ ಹೇರಿದ್ದಕ್ಕೆ ತಂದೆಯನ್ನೇ ಕೊ...
24-02-26 01:50 pm
ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಮರ್ಡರ್ ; ಗಾಂಜ...
24-02-26 01:34 pm
ಐಡಿಎಫ್ಸಿ ಫಸ್ಟ್ ಬ್ಯಾಂಕಿನಲ್ಲಿ 590 ಕೋಟಿ ಹಗರಣ ;...
23-02-26 10:44 pm