ಬ್ರೇಕಿಂಗ್ ನ್ಯೂಸ್
09-09-21 02:52 pm Headline Karnataka News Network ದೇಶ - ವಿದೇಶ
Photo credits : indiatoday
ಕಾಬೂಲ್, ಸೆ.9: ಇತ್ತೀಚೆಗೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರದಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದ್ದನ್ನು ವಿಡಿಯೋ ಮಾಡಿ ಹೊರ ಜಗತ್ತಿಗೆ ತಿಳಿಸಿದ್ದ ಪತ್ರಕರ್ತರನ್ನು ತಾಲಿಬಾನ್ ಪಡೆಗಳು ಬಂಧಿಸಿದ್ದು, ಕ್ರೂರವಾಗಿ ಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಇಬ್ಬರು ಪತ್ರಕರ್ತರನ್ನು ಕ್ರೂರವಾಗಿ ಹಿಂಸಿಸಿ, ಮೈಯಲ್ಲಿಡೀ ರಕ್ತ ಬರುವಂತೆ ಹೊಡೆದು ಕಟ್ಟಿ ಹಾಕಿರುವ ಫೋಟೋ ವೈರಲ್ ಆಗಿದ್ದು, ಅಮೆರಿಕದ ಪತ್ರಿಕೆಗಳು ಘಟನೆಯನ್ನು ಖಂಡಿಸಿ ವರದಿ ಮಾಡಿವೆ. ಅಮೆರಿಕದ ಪತ್ರಕರ್ತ ಮಾರ್ಕಸ್ ಯೂಮ್ ಎಂಬವರು ಈ ಫೋಟೋವನ್ನು ಟ್ವೀಟ್ ಮಾಡಿ, ನೇಮಕ್ ನಕ್ದಿ ಮತ್ತು ತಕೀ ದರ್ಯಾಬಿ ಎಂಬ ಇಬ್ಬರು ಅಫ್ಘನ್ ಪತ್ರಕರ್ತರನ್ನು ಬಂಧಿಸಿ ಕ್ರೂರವಾಗಿ ಹಿಂಸಿಸಿರುವ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಡೆದಿದ್ದ ಮಹಿಳೆಯರ ಪ್ರತಿಭಟನೆಯನ್ನು ವಿಡಿಯೋ ಮಾಡಿ, ಹೊರಜಗತ್ತಿಗೆ ತಿಳಿಸಿದ್ದ ಹಲವಾರು ಪತ್ರಕರ್ತರು, ಟೀವಿ ಕ್ಯಾಮರಾ ಮನ್ ಗಳನ್ನು ಬಂಧಿಸಲಾಗಿತ್ತು. ಕಾಬೂಲಿನ ಸ್ಥಳೀಯ ವಾಹಿನಿ ತೋಲೊ ಟಿವಿಯವರು ತಮ್ಮ ಕ್ಯಾಮರಾ ಮನ್ ವಾಹಿದ್ ಅಹ್ಮದಿ ಎಂಬವರನ್ನು ಬಂಧಿಸಿರುವ ಬಗ್ಗೆ ಸುದ್ದಿ ಪ್ರಕಟಿಸಿದ್ದರು.
Painful. Afghan journalists from @Etilaatroz, Nemat Naqdi & Taqi Daryabi, display wounds sustained from Taliban torture & beating while in custody after they were arrested for reporting on a women’s rally in #Kabul, #Afghanistan.#JournalismIsNotACrime https://t.co/jt631nRB69 pic.twitter.com/CcIuCy6GVw
— Marcus Yam 文火 (@yamphoto) September 8, 2021
ಮಾನವ ಹಕ್ಕುಗಳ ಬಗ್ಗೆ ಹೋರಾಡುವ ಅಮ್ನೆಸ್ಟಿ ಇಂಟರ್ನ್ಯಾಶನಲ್ ಸಂಸ್ಥೆ ಘಟನೆಯನ್ನು ಖಂಡಿಸಿದ್ದು, ಶಾಂತಿಯುತ ಪ್ರತಿಭಟನೆ ನಡೆಸಿದ್ದನ್ನು ವರದಿ ಮಾಡಿದ್ದಕ್ಕಾಗಿ ಪತ್ರಕರ್ತರನ್ನು ಹಿಂಸಿಸಿದ್ದು ಕ್ರೂರ ನಡೆ ಎಂದು ಹೇಳಿದೆ. ಕಳೆದ ಮಂಗಳವಾರ ತಾಲಿಬಾನ್ ಮತ್ತು ಪಾಕಿಸ್ಥಾನ ಪಡೆಗಳು ಪಂಜ್ ಶೀರ್ ಮೇಲೆ ದಾಳಿ ನಡೆಸಿರುವ ಕ್ರಮವನ್ನು ಖಂಡಿಸಿ ನೂರಾರು ಮಹಿಳೆಯರು ಬೀದಿಯಲ್ಲಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದರು.
Protests rocked the streets of Kabul on Tuesday when a large group of women raised slogans against Pakistan. The Taliban fired in the air and also arrested several journalists who were covering the protest. Days later, photographs have emerged showing two Afghan journalists, who were reporting on the Kabul protests, covered in injuries from being thrashed by the Taliban.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm