ಬ್ರೇಕಿಂಗ್ ನ್ಯೂಸ್
            
                        09-09-21 03:57 pm SOURCE: News 18 Kannada ದೇಶ - ವಿದೇಶ
            ಗಣೇಶನನ್ನು ವಿಘ್ನ ವಿನಾಯಕ ಎಂದು ಕರೆಯುತ್ತಾರೆ. ರಿದ್ಧಿ, ಸಿದ್ಧಿ, ಸಂಪತ್ತನ್ನು ನೀಡುವ ದೇವರು. ಹಾಗಾಗಿ ಗಣಪನಿಗೆ ಇಷ್ಟವಾದ ಗರಿಕೆ, ಹಣ್ಣು ಹಂಪಲುಗಳನ್ನು, ಸಿಹಿ ತಿಂಡಿ, ಮೋದಕ ಅರ್ಪಿಸಿ ತಮ್ಮ ಇಷ್ಟಗಳನ್ನು ಬೇಡಿಕೊಳ್ಳುತ್ತಾರೆ. ಆದರೆ ಗಣೇಶನ ವಿಗ್ರಹವನ್ನು ಮನೆಗೆ ತರುವಾಗ ಮತ್ತು ವಿಗ್ರಹವನ್ನು ಮನೆಯಲ್ಲಿ ಇರಿಸುವಾಗ ಕೆಲವು ನಿಯಮಾವಳಿಗಳಿವೆ ಈ ಬಗ್ಗೆ ಮಾಹಿತಿ ಇಲ್ಲಿದೆ.

ಗಣೇಶ ಚತುರ್ಥಿ ಹಿಂದೂ ಹಬ್ಬಗಳಲ್ಲಿ ಒಂದು. ದೇಶದಾದ್ಯಂತ ಪ್ರತಿಯೊಬ್ಬರ ಮನೆಯಲ್ಲಿ ಗಣೇಶನ ಮೂರ್ತಿಯನ್ನಿಟ್ಟು ಆರಾಧನೆ ಮಾಡುತ್ತಾರೆ. ಹಿಂದೆ 10 ದಿನಗಳ ಕಾಲ ಆಚರಣೆ ಮಾಡುತ್ತಿದ್ದರು. ಪ್ರಸ್ತುತ ಕೆಲವು ದಿನಗಳವರೆಗೆ ಆಚರಣೆ ಮಾಡುತ್ತಾರೆ. ಉತ್ತರ ಪ್ರದೇಶ, ಮುಂಬೈನಲ್ಲಿ ತಿಂಗಳುಗಳ ಕಾಲ ಭರ್ಜರಿಯಾಗಿ ಆಚರಣೆ ಮಾಡುತ್ತಾರೆ.

ವಾಸ್ತು ನಿಯಮದ ಪ್ರಕಾರ ಕೆಲವು ಗಣೇಶನ ವಿಗ್ರಹಗಳು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹಸುವಿನ ಸೆಗಣಿ ಮತ್ತು ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶನ ವಿಗ್ರಹವನ್ನು ಮನೆಗೆ ತಂದರೆ ಉತ್ತಮ.

ಹಳದಿ ಬಣ್ಣದ ಮತ್ತು ಬಿಳಿಯ ಬಣ್ಣದ ವಿಗ್ರಹ ಅದೃಷ್ಠವನ್ನು ನೀಡುತ್ತದೆ. ಬೆಳ್ಳಿಯ ಗಣೇಶನ ವಿಗ್ರಹ ಮನೆಯ ಮಾಲೀಕನ ಖ್ಯಾತಿಯನ್ನು ಹೆಚ್ಚಿಸುತ್ತದೆ.

ಹಿತ್ತಾಳೆಯ ವಿಗ್ರಹ ಉತ್ತಮ ಆರೋಗ್ಯವನ್ನು ನೀಡುತ್ತದೆ. ಮರದ ಗಣೇಶನ ವಿಗ್ರಹ ಸಂತೋಷವನ್ನು ನೀಡುತ್ತದೆ.

ವಿಗ್ರಹವನ್ನು ಇಡಲು ಸರಿಯಾದ ಸ್ಥಳ: ಗಣೇಶನ ವಿಗ್ರಹವನ್ನು ಪೂರ್ವ, ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ದಕ್ಷಿಣ ದಿಕ್ಕಿನಲ್ಲಿ ಅಥವಾ ಶೌಚಾಲಯಕ್ಕೆ ನೇರವಾಗಿ ಜೋಡಿಸಿರುವ ಅಥವಾ ವಾಶ್ ರೂಂ ಗೋಡೆಯಗಳಿಗೆ ತಾಗಿರುವ ಗೋಡೆಗಳ ಬದಿಯಲ್ಲಿ ಇಡಬಾರದು. ಮೆಟ್ಟಿಲಿನ ಕೆಲಗೆ ಇಡುವುದು ಸೂಕ್ತವಲ್ಲ. ಗಣೇಶನ ವಿಗ್ರಹವನ್ನು ಮನೆಯ ಬಾಗಿಲಿಗೆ ಮುಖ ಮಾಡಿದಂತೆ ಇರಿಸಿದರೆ ಉತ್ತಮ.
            
            
            
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm