ಬ್ರೇಕಿಂಗ್ ನ್ಯೂಸ್
16-09-21 04:00 pm Headline Karnataka News Network ದೇಶ - ವಿದೇಶ
ಪಾಟ್ನಾ, ಸೆ.16: ಬ್ಯಾಂಕ್ ಸಿಬಂದಿಯ ತಪ್ಪಿನಿಂದಾಗಿ ಗ್ರಾಮಸ್ಥನೊಬ್ಬನ ಖಾತೆಗೆ 1.61 ಲಕ್ಷ ರೂಪಾಯಿ ಪಾವತಿ ಆಗಿತ್ತು. ಬ್ಯಾಂಕಿನಿಂದ ತನ್ನಿಂತಾನೇ ತನ್ನ ಖಾತೆಗೆ ಇಷ್ಟೊಂದು ಹಣ ಬಿದ್ದಿರುವುದನ್ನು ಕಂಡ ಆ ವ್ಯಕ್ತಿ ಪ್ರಧಾನಿ ಮೋದಿಯೇ ತನ್ನ ಖಾತೆಗೆ ಹಣ ಹಾಕಿದ್ದಾಗಿ ತಿಳಿದು ಖರ್ಚು ಮಾಡತೊಡಗಿದ್ದ. ಆನಂತರ ಬ್ಯಾಂಕ್ ಸಿಬಂದಿ ಎಡವಟ್ಟು ತಿಳಿದು ಆತನಲ್ಲಿ ಹಣ ಕೇಳಿದಾಗ, ಮೋದಿ ಕೊಟ್ಟ ಹಣವೆಂದು ಹೇಳಿ ಹಿಂತಿರುಗಿಸಲು ನಿರಾಕರಿಸಿದ್ದಾನೆ.
ಮಾನ್ಸಿ ಎಂಬಲ್ಲಿ ಈ ಘಟನೆ ನಡೆದಿದ್ದು ದಕ್ಷಿಣ್ ಗ್ರಾಮೀಣ ಬ್ಯಾಂಕಿನ ಭಕ್ತಿಯಾರ್ ಪುರ ಶಾಖೆಯ ಸಿಬಂದಿ ಬೇರೆಯವರ ಖಾತೆಗೆ ಹಾಕಬೇಕಿದ್ದ ಹಣವನ್ನು ತಪ್ಪಾಗಿ ರಂಜಿತ್ ಕುಮಾರ್ ದಾಸ್ ಎನ್ನುವ ವ್ಯಕ್ತಿಗೆ ಹಾಕಿದ್ದರು. ಬರೋಬ್ಬರಿ 1,60,970 ರೂಪಾಯಿ ಹಣ ಹೆಚ್ಚುವರಿಯಾಗಿ ತನ್ನ ಖಾತೆಗೆ ಬಿದ್ದಿದ್ದನ್ನು ನೋಡಿದ ರಂಜಿತ್ ಕುಮಾರ್ ದಾಸ್, ಮೋದಿ ತನ್ನ ಖಾತೆಗೆ ಹಣ ಹಾಕಿದ್ದಾರೆಂದು ತಿಳಿದು ಬೇಕಾಬಿಟ್ಟಿ ಖರ್ಚು ಮಾಡಲಾರಂಭಿಸಿದ್ದ. ಮೋದಿ ಯಾವುದೋ ಯೋಜನೆ ಹೆಸರಲ್ಲಿ, ತನ್ನ ಖಾತೆಗೆ ಹಣ ಹಾಕಿಸಿದ್ದಾರೆ ಎಂದುಕೊಂಡಿದ್ದ.


ಆನಂತರ, 85 ವರ್ಷದ ಮಹಿಳೆಯ ಖಾತೆಗೆ ಹಣ ಪಾವತಿಯಾಗದೇ ಇರುವ ಬಗ್ಗೆ ಆಕೆಯ ಕುಟುಂಬಸ್ಥರು ಬ್ಯಾಂಕ್ ಸಿಬಂದಿಯಲ್ಲಿ ವಿಚಾರಿಸಿದ್ದರು. ಬ್ಯಾಂಕ್ ಸಿಬಂದಿ ಪರಿಶೀಲನೆ ನಡೆಸಿದಾಗ ರಂಜಿತ್ ಕುಮಾರ್ ಹೆಸರಲ್ಲಿ ಹಣ ವರ್ಗಾವಣೆಯಾಗಿದ್ದು ಕಂಡುಬಂದಿತ್ತು. ರಂಜಿತ್ ಬಳಿ ಹಣ ಹಿಂತಿರುಗಿಸುವಂತೆ ಹೇಳಿದರೆ, ಆತ ನಿರಾಕರಿಸಿದ್ದಾನೆ. ಮೋದಿಯೇ ನನಗೆ ಹಣ ಹಾಕಿದ್ದಾರೆ. ಅದನ್ನು ನಾನು ಯಾಕೆ ಹಿಂತಿರುಗಿಸಬೇಕು ಎಂದು ಕೇಳಿದ್ದಾನೆ.

ರಂಜಿತ್ ಗೆ ಬ್ಯಾಂಕ್ ಮ್ಯಾನೇಜರ್ ನೋಟೀಸ್ ನೀಡಿದರೂ, ಕ್ಯಾರ್ ಮಾಡಿಲ್ಲ. ಆಬಳಿಕ, ಬ್ಯಾಂಕ್ ಮ್ಯಾನೇಜರ್ ಸತ್ಯನಾರಾಯಣ ಪ್ರಸಾದ್ ಮಾನ್ಸಿ ಠಾಣೆಯಲ್ಲಿ ರಂಜಿತ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ರಂಜಿತ್ ನನ್ನು ಬಂಧಿಸಿದ್ದಾರೆ. 85 ವರ್ಷದ ತಾರಾದೇವಿ ಎಂಬ ಮಹಿಳೆಯ ಖಾತೆಗೆ ಹಣ ಹಾಕಬೇಕಿತ್ತು. ಬ್ಯಾಂಕ್ ಸಿಬಂದಿಯ ತಪ್ಪಿನಿಂದಾಗಿ ತಾನು ದುಡಿದಿಟ್ಟ ಹಣ ಯಾರದ್ದೋ ಪಾಲಾಗಿದ್ದು ಚಿಂತೆಗೆ ಕಾರಣವಾಗಿತ್ತು. ಅಜ್ಜಿಯ ಕುಟುಂಬಸ್ಥರು ದೂರು ನೀಡಿದ ಬಳಿಕ ಬ್ಯಾಂಕ್ ಸಿಬಂದಿ ಕೊನೆಗೂ ಪೊಲೀಸ್ ಮೆಟ್ಟಿಲೇರಿದ್ದಾರೆ. ಮೋದಿ ಹಣದ ಆಸೆಯಲ್ಲಿದ್ದ ಗ್ರಾಮಸ್ಥ ಜೈಲುಪಾಲಾಗಿದ್ದಾನೆ.
A resident of Bihar’s Khagaria received Rs 1.61 lakh in his account after a bank error and has now refused to let go of the money saying it was sent by Prime Minister Narendra Modi as financial aid.
25-12-25 12:12 pm
HK News Desk
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
MLA Byrathi Basavaraj, Bikklu Shiva Murder Ca...
24-12-25 04:07 pm
ಗಾಳಿಯಲ್ಲಿ ಗುಂಡು ಹಾರಿಸಿ ಉಡಚಣ ಸ್ವಾಮೀಜಿ ರಂಪಾಟ ;...
22-12-25 11:09 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
24-12-25 10:30 pm
Mangalore Correspondent
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್...
23-12-25 10:51 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm