ಬ್ರೇಕಿಂಗ್ ನ್ಯೂಸ್
11-10-21 11:43 am Headline Karnataka News Network ದೇಶ - ವಿದೇಶ
ಮಾಸ್ಕೋ, ಅಕ್ಟೋಬರ್ 11: ರಷ್ಯಾದ ವಿಮಾನವೊಂದು ಪತನವಾಗಿದ್ದು ಈ ವಿಮಾನ ಅಪಘಾತದಿಂದ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸುಮಾರು 23 ಮಂದಿ ಈ ರಷ್ಯಾದ ವಿಮಾನದಲ್ಲಿ ಇದ್ದರು ಎಂದು ಹೇಳಲಾಗಿದೆ. ಈ ಪೈಕಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಏಳು ಮಂದಿಗೆ ಗಾಯವಾಗಿದೆ ಎಂದು ಕೂಡಾ ವರದಿಯು ಹೇಳಿದೆ.
ರಷ್ಯಾದ ಮೆನ್ಜೆಲಿನ್ಸ್ಕ್ ನಗರದ ಟಾಟರ್ಜ್ತಾನ್ ಎಂಬಲ್ಲಿ 23 ಮಂದಿ ಪ್ರಯಾಣಿಕರು ಇದ್ದ ಲೆಟ್ ಎಲ್-410 ಟರ್ಬೋಲೆಟ್ ವಿಮಾನ ಪತನಗೊಂಡಿದೆ ಎಂದು ತಿಳಿದು ಬಂದಿದೆ. ಇಂದು ಮುಂಜಾನೆ ಸುಮಾರು 9:11 (ಮಾಸ್ಕೋ ಸಮಯ) ಕ್ಕೆ ಈ ಲೆಟ್ ಎಲ್-410 ಟರ್ಬೋಲೆಟ್ ವಿಮಾನ ಪತನಗೊಂಡಿದೆ ಎಂದು ವರದಿಯು ಮಾಹಿತಿ ನೀಡಿದೆ.
ರಷ್ಯಾದ ಲೆಟ್ ಎಲ್-410 ಟರ್ಬೋಲೆಟ್ ವಿಮಾನದಲ್ಲಿದ್ದ 23 ಮಂದಿ ಪ್ರಯಾಣಿಕರ ಪೈಕಿ 21 ಮಂದಿ ಡೈವರ್ಗಳಾಗಿದ್ದರು ಎಂದು ಹೇಳಲಾಗಿದೆ. ಈ ವಿಮಾನ ದುರಂತದಲ್ಲಿ ಏಳು ಮಂದಿಗೆ ಗಾಯವಾಗಿದೆ.
ಈ ವಿಮಾನ ಪತನಗೊಂಡ ಚಿತ್ರವನ್ನು ರಷ್ಯಾದ ತುರ್ತು ಪರಿಸ್ಥಿತಿ ಸಚಿವಾಲಯವು ಬಿಡುಗಡೆ ಮಾಡಿದ್ದು, ಬದುಕುಳಿದ ಏಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವಿವರಿಸಿದೆ.
"ರಷ್ಯಾದ ಮೆನ್ಜೆಲಿನ್ಸ್ಕ್ ನಗರದ ಟಾಟರ್ಜ್ತಾನ್ ಎಂಬಲ್ಲಿ ಪತನಗೊಂಡ ಈ ರಷ್ಯಾದ ವಿಮಾನವು ಸಂಪೂರ್ಣವಾಗಿ ಜಖಂ ಆಗಿದೆ. ಬದುಕುಳಿದ ಏಳು ಮಂದಿಯನ್ನು ಕೂಡಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಓರ್ವ ಗಾಯಾಳುವಿನ ಸ್ಥಿತಿಯು ಚಿಂತಾಜನಕವಾಗಿದೆ," ಎಂದು ರಷ್ಯಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಇನ್ನು ಈ ಬಗ್ಗೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ಮಾಡಿದ ವರದಿಗಳ ಪ್ರಕಾರ ಈ ವಿಡಿಯೋವು ರಷ್ಯಾದ ಸೇನೆ, ನಾಗರಿಕ ಯಾನ ಮತ್ತು ನೌಕಾಪಡೆಗೆ ಸಹಾಯ ಮಾಡಲು ಇರುವ ಒಂದು ಸ್ವಯಂ ಸೇವಕ ಸಂಸ್ಥೆಗೆ ಸೇರಿದ್ದು ಆಗಿದೆ. ಹಾಗೆಯೇ ಇದು ಕ್ರೀಡಾ ಮತ್ತು ರಕ್ಷಣಾ ಸಂಸ್ಥೆಯಾಗಿದೆ ಎಂದು ಕೂಡಾ ರಷ್ಯಾದ ಸ್ಥಳೀಯ ಮಾಧ್ಯಮಗಳು ವಿವರಿಸಿದೆ.
ಈ ವರ್ಷದ ಆರಂಭದಲ್ಲಿ ರಷ್ಯಾದಲ್ಲಿ ಎರಡು ಎಲ್-410 ವಿಮಾನಗಳು ಪತನವಾಗಿದೆ.
Sixteen people were killed after an aircraft carrying parachutists crashed in central Russia on Sunday, the emergencies ministry said. The L-410 plane carrying 22 people crashed around 9:23 a.m. local time (0623 GMT) during a flight over the republic of Tatarstan, the ministry said on its Telegram channel.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 11:32 am
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm