ಬ್ರೇಕಿಂಗ್ ನ್ಯೂಸ್
17-03-22 05:42 pm HK Desk news ದೇಶ - ವಿದೇಶ
ನವದೆಹಲಿ, ಮಾ.17: ರೈಲ್ವೇ ಬಜೆಟ್ ನಲ್ಲಿ ಕೇಂದ್ರ ಸರಕಾರವು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ತಾರತಮ್ಯ ನಡೆ ತೋರಿದೆ ಎಂದು ಡಿಎಂಕೆ ಸಂಸದೆ ಕನಿಮೋಳಿ ಆಕ್ಷೇಪಿಸಿದ್ದಾರೆ. ಪ್ರಸಕ್ತ ಸಾಲಿನ ರೈಲ್ವೇ ಬಜೆಟ್ ನಲ್ಲಿ ಹೊಸ ರೈಲ್ವೇ ಮಾರ್ಗಗಳನ್ನು ನಿರ್ಮಿಸಲು ದಕ್ಷಿಣ ರೈಲ್ವೇಗೆ ಕೇವಲ 59 ಕೋಟಿ ಮೀಸಲಿರಿಸಿದ್ದರೆ, ಉತ್ತರ ರೈಲ್ವೇಗೆ 13 ಸಾವಿರ ಕೋಟಿ ಕೊಟ್ಟಿದ್ದಾರೆ. ಈ ಮೂಲಕ ನೀವು ತಾರತಮ್ಯ ಧೋರಣೆ ತೋರುತ್ತಿದ್ದೀರಿ ಎಂದು ರೈಲ್ವೇ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರ ಸರಕಾರದ ಬಜೆಟ್ ನಲ್ಲಿ ಈ ರೀತಿಯ ತಾರತಮ್ಯ ಏಕೆ ಎಂದು ರೈಲ್ವೇ ಸಚಿವರನ್ನು ಸಂಸದೆ ಕನಿಮೋಳಿ ಪ್ರಶ್ನೆ ಮಾಡಿದ್ದಾರೆ. ಏಕ್ ಭಾರತ್ ಅನ್ನುವುದನ್ನು ನೀವು ಭಾಷಣದಲ್ಲಿ ಆಗಾಗ ಪ್ರಸ್ತಾಪಿಸುವುದನ್ನು ಕೇಳಿದ್ದೇನೆ. ಏಕ್ ಭಾರತ್ ಅನ್ನೋದರಲ್ಲಿ ದಕ್ಷಿಣ ಭಾರತ ಬರೋದಿಲ್ಲವೇ.. ಹಾಗಿದ್ದರೆ ಈ ರೀತಿಯ ತಾರತಮ್ಯ ಏಕೆ ಎಂದು ಸಚಿವರನ್ನು ಪ್ರಶ್ನೆ ಮಾಡಿದ್ದಾರೆ.
ರೈಲ್ವೇ ಇಲಾಖೆಯಲ್ಲಿ ಸಾವಿರಾರು ಉದ್ಯೋಗ ಭರ್ತಿ ಆಗಿಲ್ಲ. ಅದನ್ನು ಭರ್ತಿಗೊಳಿಸುವಲ್ಲಿಯೂ ದಕ್ಷಿಣ ಭಾರತೀಯರಿಗೆ ಕೆಲಸ ಲಭಿಸುತ್ತಿಲ್ಲ. ನೀವು ದಕ್ಷಿಣ ಭಾರತೀಯರನ್ನು ಉದ್ಯೋಗದಿಂದ ದೂರವಿಡಲು ಬಯಸುತ್ತಿದ್ದೀರಾ.. ಮುಂದಿನ ವರ್ಷದಲ್ಲಿ ನೂರು ಶೇಕಡಾ ವಿದ್ಯುದೀಕರಣ ಈಡೇರಿಸುವ ವಾಗ್ದಾನ ನೀಡಿದ್ದೀರಿ. ಇದು ಹೇಗೆ ಸಾಧ್ಯ ಎನ್ನುವುದನ್ನು ಮನವರಿಕೆ ಮಾಡಬೇಕು ಎಂದು ಕನಿಮೋಳಿ ಆಗ್ರಹ ಮಾಡಿದ್ದಾರೆ.
ಕೇಂದ್ರ ಸರಕಾರವು ದಕ್ಷಿಣವನ್ನು ಹೇಗೆ ನಡೆಸಿಕೊಳ್ಳುತ್ತಿದೆ ಅನ್ನುವುದಕ್ಕೆ ಇದು ಉದಾಹರಣೆ ಎಂದು ಆಕ್ಷೇಪಿಸಿರುವ ಕನಿಮೋಳಿ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಲೋಕಸಭೆಯಲ್ಲಿ ರೈಲ್ವೇ ಸಚಿವ ಪಿಯೂಷ್ ಗೋಯಲ್ ಹಿಂದಿಯಲ್ಲಿ ಉತ್ತರಿಸಲು ಯತ್ನಿಸಿದಾಗ, ಇಂಗ್ಲಿಷ್ ನಲ್ಲಿಯೇ ಉತ್ತರಿಸುವಂತೆ ಕನಿಮೋಳಿ ಕೇಳಿಕೊಂಡಿರುವ ವಿಡಿಯೋ ಕೂಡ ವೈರಲ್ ಆಗಿದೆ.
ஒன்றிய ரயில்வே துறை நிதி ஒதுக்கீட்டில், தெற்குப் பகுதிக்கும், வடக்குப் பகுதிக்கும் காட்டும் பாரபட்சத்தை சுட்டிக்காட்டி, ரயில்வே பட்ஜெட்டில் இருக்கும் குறைகள் குறித்தும், ரயில்வே துறையின் செயல்பாடுகள் குறித்தும் இன்று நாடாளுமன்றத்தில் பேசிய போது (1/2) pic.twitter.com/yAp68sZT7k
— Kanimozhi (கனிமொழி) (@KanimozhiDMK) March 15, 2022
A video of Tamil Nadu MP Kanimozhi criticising the union government for 'meagre' allocation of funds for South India has gone viral. During the debate on Budget 2022, Kanimozhi said only Rs 59 crore is earmarked for building new railway lines for the Southern Railway in the Union Budget 2022.
16-05-24 10:37 pm
HK News Desk
Hassan News, Drowning: ಹಾಸನ ; ಕೆರೆಯಲ್ಲಿ ಈಜಲು...
16-05-24 07:17 pm
Anjali Murder, Hubballi Neha father donates 1...
16-05-24 06:02 pm
Gym trainer, suicide, Crime: ವಿಡಿಯೋ ಕಾಲ್ ನಲ್ಲ...
16-05-24 12:22 pm
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ಸಿ...
16-05-24 12:11 am
16-05-24 04:30 pm
HK News Desk
PM Modi, Hindu-Muslim: ನಾನೆಂದಿಗೂ ಹಿಂದು- ಮುಸ್ಲ...
15-05-24 02:05 pm
Dog kills 5 Month Old Baby in Hyderabad: ಐದು...
14-05-24 07:21 pm
PM narendra modi in varanasi: ಮೋದಿಯಿಂದ ಗಂಗೆಗೆ...
14-05-24 05:40 pm
Couple Caught Kissing in Odisha: ಕಿಕ್ಕಿರಿದು ತ...
14-05-24 04:09 pm
16-05-24 09:59 pm
Mangalore Correspondent
Mangalore NIA, Terror, Ammar Abdul Rahiman, I...
16-05-24 05:38 pm
Mangalore accident, Kallapu: ಹೆದ್ದಾರಿ ಕ್ರಾಸ್...
16-05-24 02:48 pm
Puttur News, Hospital: ಜ್ವರ ಎಂದು ದಾಖಲಾಗಿದ್ದ ವ...
16-05-24 12:37 pm
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ; ತೋಟಕ್ಕೆ ತೆ...
16-05-24 12:02 am
16-05-24 10:23 pm
Mangalore Correspondent
Mangalore News, Harekala sand mining, crime:...
16-05-24 09:50 pm
ನಾಯಿ ಜೊತೆ ವಾಕಿಂಗ್ ತೆರಳಿದ್ದಾಗ ದೊಣ್ಣೆಯಲ್ಲಿ ಯದ್ವ...
16-05-24 09:31 pm
International espionage case, NIA : ಇಸ್ರೇಲ್ ದ...
16-05-24 06:32 pm
Hubballi Anjali Murder, police inspector Chik...
16-05-24 01:42 pm