ಬ್ರೇಕಿಂಗ್ ನ್ಯೂಸ್
22-04-21 08:39 pm Source: FILMIBEAT ಸಿನಿಮಾ
ಕೊರೊನಾ ಪಾಸಿಟಿವ್ ಆಗಿರುವ ನಟಿ ಅನು ಪ್ರಭಾಕರ್ ಮುಖರ್ಜಿ ಅವರು ಸರ್ಕಾರವು ಕೊರೊನಾ ಪ್ರಕರಣಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.
ನಟಿ ಅನು ಪ್ರಭಾಕರ್ ಅವರಿಗೆ ಏಪ್ರಿಲ್ 17 ರಂದು ಕೊರೊನಾ ಪಾಸಿಟಿವ್ ಆಗಿತ್ತು. ಅವರಿಗೆ ಸ್ಯಾಂಪಲ್ ರೆಫರಸ್ ಫಾರ್ಮ್ ನಂಬರ್ ಸಹ ದೊರಕಿತ್ತು. ಆದರೆ ಅದಾಗಿ ನಾಲ್ಕು ದಿನವಾದರೂ ಅನು ಪ್ರಭಾಕರ್ ಅವರ ದಾಖಲೆಗಳು ಕೋವಿಡ್ ವಾರ್ ವೆಬ್ಸೈಟ್ಗೆ ಅಪ್ಲೋಡ್ ಆಗಿರಲಿಲ್ಲ. ಈ ಬಗ್ಗೆ ಸಚಿವ ಸುಧಾಕರ್ ಅವರಿಗೆ ಟ್ವೀಟ್ ಮಾಡಿದ್ದ ಅನು ಪ್ರಭಾಕರ್, ನನಗೆ ಈ ವರೆಗೆ ಬಿಯು ನಂಬರ್ ಸಹ ದೊರೆತಿಲ್ಲ ಹಾಗೂ ಬಿಬಿಎಂಪಿಯಿಂದ ಕರೆ ಸಹ ಬಂದಿಲ್ಲ' ಎಂದಿದ್ದರು.
ಇದೀಗ ಅನುಪ್ರಭಾಕರ್ ಅವರು ಅವರ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿರು ವಿಡಿಯೋಗಳನ್ನು ಪ್ರಕಟಿಸುವ ಮೂಲಕ ಜನರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಅನು ಪ್ರಭಾಕರ್ ಅವರಿಗೆ ಪಾಸಿಟಿವ್ ಬಂದಿದೆಯಾದರೂ ಅವರ ಕುಟುಂಬದವರಿಗೆ ನೆಗೆಟಿವ್ ಬಂದಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ವಿಡಿಯೋದಲ್ಲಿ ಮಾಹಿತಿ ನೀಡಿರುವ ಅನು ಪ್ರಭಾಕರ್, 'ನನಗೆ ಕಳೆದ ವಾರವೇ ರುಚಿ ಮತ್ತು ವಾಸನೆ ಗ್ರಹಿಕೆ ನಿಧಾನಕ್ಕೆ ಕಡಿಮೆಯಾಗುತ್ತಾ ಬಂತು. ಕೂಡಲೇ ನಾನು ವೈದ್ಯೆ ಆಗಿರುವ ನನ್ನ ಸಹೋದರಿಗೆ ಕರೆ ಮಾಡಿದೆ, ಆಕೆಯ ಸಲಹೆಯಂತೆ ಪರೀಕ್ಷೆಗೆ ಒಳಪಟ್ಟೆ ಹಾಗೂ ವರದಿಗಾಗಿ ಕಾಯದೆ ನನ್ನ ಕುಟುಂಬದವರಿಂದ ಪ್ರತ್ಯೇಕವಾಗಿ ಇದ್ದು ಐಸೋಲೇಶನ್ಗೆ ಒಳಪಟ್ಟೆ.
ಬಹುಷಃ ಹಾಗಾಗಿ ನನ್ನ ಕುಟುಂಬದವರಿಗೆ ನೆಗೆಟಿವ್ ಬಂತು' ಎಂದಿದ್ದಾರೆ. 'ಯಾರಿಗೇ ಆಗಲಿ ರೋಗ ಲಕ್ಷಣಗಳು ಬಂದ ಕೂಡಲೇ ಪರೀಕ್ಷೆಗೆ ಒಳಪಡಿ ಮತ್ತು ವರದಿಗಾಗಿ ಕಾಯದೆ ಮೊದಲು ಐಸೋಲೇಷನ್ ಆಗಿ' ಎಂದು ಮನವಿ ಮಾಡಿದ್ದಾರೆ ಅನು ಪ್ರಭಾಕರ್. ನಟಿಯ ಈ ಜಾಗೃತಿ ವಿಡಿಯೋವನ್ನು ಕರ್ನಾಟಕ ಆರೋಗ್ಯ ಇಲಾಖೆ ಸಹ ರೀಟ್ವೀಟ್ ಮಾಡಿದೆ.
This News Article Is A Copy Of FILMIBEAT
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
24-10-25 05:43 pm
HK News Desk
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
24-10-25 07:57 pm
Mangalore Correspondent
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
24-10-25 08:20 pm
Mangalore Correspondent
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am