ಬ್ರೇಕಿಂಗ್ ನ್ಯೂಸ್
30-01-23 02:59 pm Mangalore Correspondent ಕರಾವಳಿ
ಮಂಗಳೂರು, ಜ.30 : ಸುರತ್ಕಲ್ ನಲ್ಲಿ ಇತ್ತೀಚೆಗೆ ಕೊಲೆಯಾಗಿದ್ದ ಫಾಝಿಲ್ ಹತ್ಯೆಯನ್ನು ನಮ್ಮದೇ ಹುಡುಗರು ಮಾಡಿದ್ದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ವಿಎಚ್ ಪಿ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಬಂಧಿಸಬೇಕು ಎಂದು ಫಾಜಿಲ್ ತಂದೆ ಉಮರ್ ಫಾರೂಕ್ ಮಂಗಳೂರು ನಗರ ಪೊಲೀಸ್ ಕಮೀಷನರ್ ಗೆ ದೂರು ನೀಡಿದ್ದಾರೆ.
ಕಮಿಷನರ್ ಶಶಿಕುಮಾರ್ ಅವರನ್ನು ಭೇಟಿಯಾದ ಉಮರ್ ಫಾರೂಕ್, ಶರಣ್ ಪಂಪ್ವೆಲ್ ತನ್ನ ಮಗನ ಹತ್ಯೆಯನ್ನು ಸಂಭ್ರಮಿಸಿದ್ದಾನೆ. ಆತನ ಮೇಲೆ ಮೊದಲೇ ಸಂಶಯವಿತ್ತು. ಈಗ ಬಹಿರಂಗ ಹೇಳಿಕೆ ನೀಡಿದ್ದು ಕೂಡಲೇ ಬಂಧಿಸಿ ಪ್ರಕರಣದ ಬಗ್ಗೆ ಮರು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಉಮರ್ ಫಾರೂಕ್, ಶರಣ್ ಪಂಪ್ವೆಲ್ ನನ್ನ ಮಗನ ಹತ್ಯೆಯನ್ನು ಸಂಭ್ರಮಿಸಿದ್ದಾನೆ. ಎಂಟು ಮಂದಿ ಒಬ್ಬ ಹುಡುಗನನ್ನು ಹೊಡೆದಿದ್ದನ್ನು ಶೌರ್ಯ ಎಂದಿದ್ದಾನೆ. ಇದು ನಿಜವಾದ ಶೌರ್ಯ ಅಲ್ಲ, ಅದು ಹೇಡಿತನ. ಶರಣ್ ಪಂಪ್ವೆಲ್ ಗೆ ತಾಕತ್ ಇದ್ರೆ ನಾನು ಒಬ್ಬನೇ ಬರುತ್ತೇನೆ. ನನ್ನ ಜೊತೆ ಕಾದಾಡಲಿ, ನಾನು ನೋಡಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಶರಣ್ ಹಿಂದು, ಹಿಂದುತ್ವದ ಬಗ್ಗೆ ಮಾತನಾಡುತ್ತಾನೆ. ಹಿಂದು ಬೇರೆ, ಇವರ ಹಿಂದುತ್ವ ಬೇರೆ. ಹಿಂದುತ್ವದಲ್ಲಿ ಇರುವವರು ಹಣ ತೆಗೆದುಕೊಂಡು ಕೃತ್ಯ ಮಾಡುವವರು. ಫಾಝೀಲ್ ಹತ್ಯೆಯ ರೂವಾರಿ ಶರಣ್ ಪಂಪ್ವೆಲ್ ಅನ್ನೋದು ನಿನ್ನೆಯ ಭಾಷಣದಲ್ಲಿ ಆತನೇ ಹೇಳಿದ್ದಾನೆ. ಎಡಿಜಿಪಿ ಅವರಿಗೂ ಈ ಬಗ್ಗೆ ಮನವಿ ಮಾಡಿದ್ದೇನೆ. ಪೊಲೀಸರು ಶರಣ್ ಪಂಪ್ವೆಲ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಬಹುದಿತ್ತು. ಆದರೆ ಪೊಲೀಸರಿಗೂ ಒತ್ತಡ ಇರಬಹುದು, ಸುರತ್ಕಲ್ ಠಾಣೆಗೆ ತೆರಳಿ ದೂರು ನೀಡಲು ಕಮೀಷನರ್ ಹೇಳಿದ್ದಾರೆ. ದೂರು ಕೊಡುತ್ತೇನೆ. ಕೊಲೆ ಪ್ರಕರಣವನ್ನು ಸಂಪೂರ್ಣ ಮರು ತನಿಖೆ ಮಾಡಬೇಕು. ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಿ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದರು. ಆದರೆ ಕೊಲೆಯ ಸೂತ್ರಧಾರರು ಯಾರೆಂದು ಪತ್ತೆ ಮಾಡಿರಲಿಲ್ಲ. ಶರಣ್ ಹೇಳಿಕೆಯಿಂದ ಈತನೇ ಸೂತ್ರಧಾರ ಎನ್ನುವುದು ತಿಳಿದುಬರುತ್ತಿದೆ. ಬಂಧಿಸಿ ತನಿಖೆ ನಡೆಸಿದರೆ ನೈಜಾಂಶ ಹೊರಬಹುದು ಎಂದು ಫಾಝಿಲ್ ತಂದೆ ಉಮರ್ ಫಾರೂಕ್ ಹೇಳಿದ್ದಾರೆ.
ಕರಸೇವಕರ ಜೀವಂತ ದಹನಕ್ಕಾಗಿ ಗುಜರಾತ್ ನರಮೇಧ ; ಹಿಂದುಗಳ ಪರಾಕ್ರಮ ಎಂದು ಸಮರ್ಥಿಸಿದ ಶರಣ್ ಪಂಪ್ವೆಲ್ !
Surathkal Fazil murder case, Fazil father slams Sharan Pumpwell over provocative statement stating that Fazils murder was a revenge murder for Praveen Nettaru Murder in Sullia. Speaking to Media here Fazil Father stated that Sharan Pumpwell has rejoiced over my sons death. Father alleged that Sharan is the Supari killer and master mind of Fazils killing.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm