ಬ್ರೇಕಿಂಗ್ ನ್ಯೂಸ್
30-01-23 06:26 pm Mangalore Correspondent ಕರಾವಳಿ
ಮಂಗಳೂರು, ಜ.30: ಯಾರದ್ದೋ ಲಾಭಕ್ಕಾಗಿ, ರಾಜಕೀಯಕ್ಕೋಸ್ಕರ, ಚುನಾವಣೆಗೋಸ್ಕರ ಕೊಲೆ ಪ್ರಕರಣವನ್ನು ಸಮರ್ಥಿಸಿ ನೀಡುವ ಹೇಳಿಕೆಗಳು ಸಮಾಜಕ್ಕೆ ಅಪಾಯಕಾರಿ. ಇಂತಹ ಹೇಳಿಕೆ ನೀಡುವವರೇ ನಿಜವಾದ ದೇಶದ್ರೋಹಿಗಳು. ಈ ರೀತಿ ಹೇಳಿಕೆ ನೀಡುವವರನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಮಾಜಿ ಸಚಿವ, ಶಾಸಕ ಯುಟಿ ಖಾದರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಎಚ್ ಪಿ ಮುಖಂಡ ಶರಣ್ ಪಂಪ್ವೆಲ್ ನೀಡಿರುವ ಹೇಳಿಕೆಯ ಬಗ್ಗೆ ಕಿಡಿಕಾರಿದರು. ಯಾರದ್ದೇ ಆಗಲಿ, ಕೊಲೆಯಾಗುವುದನ್ನು ಬಯಸಬಾರದು. ಇಷ್ಟಕ್ಕೂ ಬಿಜೆಪಿಯವರು ಹಿಂದು ಅಥವಾ ಮುಸ್ಲಿಮರ ಕೊಲೆಯಾಗುವುದನ್ನು ಕಾಯುತ್ತಿರುವುದು ಯಾಕೆ.. ಜೀವ ಕಳಕೊಂಡವರ ಕುಟುಂಬದ ನೋವು, ಅವರ ಅಕ್ಕ, ತಂಗಿಯರ, ಹೆತ್ತವರ ನೋವು ಇವರಿಗೆ ಅರ್ಥ ಆಗಿದೆಯೇ.. ಫಾಜಿಲ್ ಕೊಲೆಗೆ ನಾವೇ ಪ್ರೇರಣೆ, ನಮ್ಮದೇ ಹುಡುಗರು ಅಂತ ಹೇಳಿದ್ದಾರೆ. ಹೀಗಾಗಿ ಫಾಜಿಲ್ ಕೊಲೆ ಪ್ರಕರಣವನ್ನು ಸಂಪೂರ್ಣ ಮರು ತನಿಖೆ ಮಾಡಬೇಕು. ಚುನಾವಣೆಗೋಸ್ಕರ, ಮಾಧ್ಯಮದಲ್ಲಿ ಬಿಲ್ಡಪ್ ಕೊಡುವುದಕ್ಕಾಗಿ ಹೇಳಿಕೆ ಕೊಟ್ಟು ಸಮಾಜದಲ್ಲಿ ಭಯ ಮೂಡಿಸುವ ಇಂಥವರನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕು.

ಇವರ ಈ ರೀತಿಯ ಹೇಳಿಕೆಯಿಂದ ಜನರು ಭಯಭೀತರಾಗಿದ್ದಾರೆ, ಇನ್ನೇನಾಗುತ್ತೋ ಅಂತ ಭಯದಲ್ಲಿದ್ದಾರೆ. ಇಂಥವರು ಸಮಾಜಕ್ಕೆ ಭಾರ, ಈ ಜಿಲ್ಲೆಗೂ ಭಾರವಾಗಿದ್ದಾರೆ. ಯಾಕೆ ಇವರನ್ನು ನಮ್ಮ ಸಮಾಜ ಹೊತ್ತುಕೊಳ್ಳಬೇಕು ಎಂದು ಖಾದರ್ ಪ್ರಶ್ನೆ ಮಾಡಿದರು. ಪ್ರವೀಣ್ ನೆಟ್ಟಾರು, ಫಾಜಿಲ್, ಮಸೂದ್ ಸೇರಿದಂತೆ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಅನುಮಾನಾಸ್ಪದ ನೆಲೆಯಲ್ಲಿ ಆಗಿರುವ ಕೊಲೆ ಪ್ರಕರಣಗಳನ್ನು ಮರು ತನಿಖೆ ನಡೆಸ್ತೀವಿ ಎಂದು ಹೇಳಿದರು.

ಉಳ್ಳಾಲ ಉಗ್ರರ ಸ್ಲೀಪರ್ ಸೆಲ್ ಆಗಿದೆ ಎಂಬ ಆರೋಪದ ಬಗ್ಗೆ, ಆ ಬಗ್ಗೆ ತನಿಖೆ ನಡೆಸಲು ಪೊಲೀಸರಿದ್ದಾರೆ. ಉಗ್ರರು ಇದ್ದಲ್ಲಿ ಪೊಲೀಸರು ಬಂಧನ ಮಾಡುತ್ತಾರೆ, ಅದನ್ನು ಹೇಳೋಕೆ ಇವರು ಯಾರು. ಪೊಲೀಸ್ ಅಧಿಕಾರಿಗಳಿದ್ದಾರೆ, ಕ್ರಮ ಕೈಗೊಳ್ತಾರೆ. ಉಳ್ಳಾಲದ ಜನ ಶಾಂತಿ, ಸೌಹಾರ್ದದಲ್ಲಿ ಇದ್ದಾರೆ. ಅದನ್ನು ಕದಡಿಸುವ ಯತ್ನ ಮಾಡುತ್ತಿದ್ದಾರೆ. ಅಲ್ಲಿನ ಜನ ಕೋಮುವಾದಿ ಶಕ್ತಿಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.

ಕೋವಿಡ್ ಬಂದಾಗ ನೆರವು ನೀಡಿದ್ದಾರೆಯೇ ?
ಉಳ್ಳಾಲದಲ್ಲಿ ಹಿಂದು ಶಾಸಕರಾಗಬೇಕು ಎಂಬ ಶರಣ್ ಪಂಪ್ವೆಲ್ ಆಗ್ರಹದ ಬಗ್ಗೆ ಕೇಳಿದ ಪ್ರಶ್ನೆಗೆ, ಉಳ್ಳಾಲದಲ್ಲಿ ಹಿಂದೆ ಐಎಂ ಜಯರಾಮ ಶೆಟ್ಟಿ ಸೇರಿದಂತೆ ಹಲವರು ಶಾಸಕರಾಗಿದ್ದಾರೆ. ಅಲ್ಲಿನ ಜನರಿಗೆ ಯಾರು ಬೇಕೋ, ಅವರನ್ನು ಆಯ್ಕೆ ಮಾಡುತ್ತಾರೆ. ಇಂಥವರೇ ಆಗಬೇಕೆಂದು ಹೇರಲು ಬರುವುದಿಲ್ಲ. ಇವರು ಯಾರಾದರೂ ಕೋವಿಡ್ ಬಂದಾಗ, ಜನರ ಬಳಿಗೆ ಹೋಗಿದ್ದಾರೆಯೇ.. ಬಡ ಹಿಂದು, ಕ್ರಿಸ್ತಿಯನ್ನರಿಗೆ ನೆರವು ನೀಡಿದ್ದಾರೆಯೇ.. ಅವರ ಮಕ್ಕಳ ಶಿಕ್ಷಣದ ಫೀಸ್ ಕಟ್ಟುವುದು, ಆಸ್ಪತ್ರೆಗೆ ಹೋದವರಿಗೆ ಸಹಾಯ ಮಾಡುವ ಕೆಲಸ ಮಾಡಿದ್ದಾರೆಯೇ.. ಕಷ್ಟದಲ್ಲಿದ್ದಾಗ ಸಹಾಯ ನೀಡಿದವರನ್ನು ಜನರು ಗೆಲ್ಲಿಸುತ್ತಾರೆ. ಜನರು ಮತ ಭೇದ ಮರೆತು ಗೆಲ್ಲಿಸುವುದು ಉಳ್ಳಾಲದ ಜನರ ದೊಡ್ಡ ಗುಣ, ಅದು ಉಳ್ಳಾಲದ ಪಾಲಿನ ಗೌರವ ಎಂದು ಯುಟಿ ಖಾದರ್ ತಿರುಗೇಟು ನೀಡಿದರು
BJP party waits only for murders slams UT Khader in Mangalore after Vhp Sharan Pumpwell made provocative speech.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm