ಬ್ರೇಕಿಂಗ್ ನ್ಯೂಸ್
13-02-23 09:39 pm Mangalore Correspondent ಕರಾವಳಿ
ಮಂಗಳೂರು, ಫೆ.13: ಬಾವಿಗೆ ಬಿದ್ದ ಚಿರತೆ ಮರಿಯನ್ನು ಮಹಿಳಾ ಪಶು ವೈದ್ಯೆಯೊಬ್ಬರು ಬೋನಿನಲ್ಲಿಯೇ ಕುಳಿತು ಬಾವಿಗಿಳಿದು ಚಿರತೆಯನ್ನು ಸೆರೆಹಿಡಿದು ತಂದಿರುವ ಘಟನೆ ಮೂಡುಬಿದ್ರೆ ಬಳಿಯ ನಿಡ್ಡೋಡಿಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದ ಚಿರತೆ ಮರಿಯನ್ನು ಸೆರೆಹಿಡಿದು ಮೇಲಕ್ಕೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ಬಹಳಷ್ಟು ಪ್ರಯತ್ನ ಪಟ್ಟಿದ್ದರು. ಮೂವತ್ತು ಅಡಿಗಿಂತಲೂ ಆಳವಾಗಿದ್ದ ಬಾವಿಯ ಒಳಗಿನ ಗುಹೆಯಲ್ಲಿ ಚಿರತೆ ಮರಿ ಅಡಗಿಕೊಂಡಿತ್ತು. ಬೋನು ಇಳಿಸಿದರೂ, ಅದರೊಳಕ್ಕೆ ಬಾರದೆ ತಪ್ಪಿಸುತ್ತಿತ್ತು. ಈ ವೇಳೆ, ಸ್ವಯಂಸೇವಾ ಸಂಸ್ಥೆ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್ಕ್ಯೂ ಸೆಂಟರ್ನ ತಜ್ಞ ವೈದ್ಯರು ಸ್ಥಳಕ್ಕೆ ಬಂದಿದ್ದು ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.
ಚಿರತೆ ಮರಿಯನ್ನು ರಕ್ಷಿಸಲು ಅಪಾಯ ಲೆಕ್ಕಿಸದೆ ಬಾವಿಗೆ ಇಳಿಯಲೇಬೇಕಿತ್ತು. ಆದರೆ ಒಂದು ವರ್ಷ ಪ್ರಾಯದ ಚಿರತೆ ಬಾವಿಯಲ್ಲಿದ್ದಾಗ ಅದರೊಳಗೆ ಇಳಿಯಲು ಯಾರೂ ಮುಂದಾಗಲಿಲ್ಲ. ಕೊನೆಗೆ, ಸಂರಕ್ಷಣಾ ತಂಡದ ಡಾ. ಮೇಘನಾ ಪೆಮ್ಮಯ್ಯ ಅವರು ಅರಿವಳಿಕೆ ಮದ್ದು ತುಂಬಿದ ಗನ್ ಹಿಡಿದು ಬೋನಿನಲ್ಲಿ ಕುಳಿತು ಬಾವಿಗೆ ಇಳಿದಿದ್ದಾರೆ.
ಡಾ. ಮೇಘನಾ ಬಾವಿಗೆ ಇಳಿಯುತ್ತಲೇ ಗುಹೆಯಲ್ಲಿ ಅಡಗಿ ಕುಳಿತ ಚಿರತೆ ಮರಿಯತ್ತ ಅರಿವಳಿಕೆ ಚುಚ್ಚು ಮದ್ದು ಪ್ರಯೋಗಿಸಿದ್ದಾರೆ. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಅರಣ್ಯ ಇಲಾಖೆಯ ಸಿಬಂದಿ ಹಗ್ಗದ ಮೂಲಕ ಕೆಳಗಿಳಿದು ಹೆಣ್ಣು ಚಿರತೆ ಮರಿಯನ್ನು ಮೇಲಕ್ಕೆ ತಂದಿದ್ದಾರೆ. ಜೊತೆಗೆ, ಅಮೋಘ ಕಾರ್ಯಾಚರಣೆ ನಡೆಸಿದ ಡಾ. ಮೇಘನಾ ಕೂಡ ಬಾವಿಯಿಂದ ಮೇಲಕ್ಕೆ ಬಂದಿದ್ದಾರೆ. ಬಳಿಕ ಚಿರತೆ ಚೇತರಿಸುತ್ತಿದ್ದಂತೆಯೇ ಅದನ್ನು ಅರಣ್ಯ ಇಲಾಖೆಯವರು ದಟ್ಟ ಕಾಡಿಗೆ ಒಯ್ದು ಬಿಟ್ಟು ಬಂದಿದ್ದಾರೆ.
A one-year-old leopard which fell into a well at Niddodi was rescued and later released into the wild on Sunday February 12. The forest department officials tried luring it inside a cage and were unsuccessful. A rescue team led by wild life specialist Dr Yashasvi Naravi with Dr Meghana, Dr Prithvi and Dr Nafisa decided to immobilise the leopard and bring it up from the well which was too deep and also which had caved inside where the leopard was hiding.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm