ಬ್ರೇಕಿಂಗ್ ನ್ಯೂಸ್
13-02-23 09:39 pm Mangalore Correspondent ಕರಾವಳಿ
ಮಂಗಳೂರು, ಫೆ.13: ಬಾವಿಗೆ ಬಿದ್ದ ಚಿರತೆ ಮರಿಯನ್ನು ಮಹಿಳಾ ಪಶು ವೈದ್ಯೆಯೊಬ್ಬರು ಬೋನಿನಲ್ಲಿಯೇ ಕುಳಿತು ಬಾವಿಗಿಳಿದು ಚಿರತೆಯನ್ನು ಸೆರೆಹಿಡಿದು ತಂದಿರುವ ಘಟನೆ ಮೂಡುಬಿದ್ರೆ ಬಳಿಯ ನಿಡ್ಡೋಡಿಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದ ಚಿರತೆ ಮರಿಯನ್ನು ಸೆರೆಹಿಡಿದು ಮೇಲಕ್ಕೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ಬಹಳಷ್ಟು ಪ್ರಯತ್ನ ಪಟ್ಟಿದ್ದರು. ಮೂವತ್ತು ಅಡಿಗಿಂತಲೂ ಆಳವಾಗಿದ್ದ ಬಾವಿಯ ಒಳಗಿನ ಗುಹೆಯಲ್ಲಿ ಚಿರತೆ ಮರಿ ಅಡಗಿಕೊಂಡಿತ್ತು. ಬೋನು ಇಳಿಸಿದರೂ, ಅದರೊಳಕ್ಕೆ ಬಾರದೆ ತಪ್ಪಿಸುತ್ತಿತ್ತು. ಈ ವೇಳೆ, ಸ್ವಯಂಸೇವಾ ಸಂಸ್ಥೆ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್ಕ್ಯೂ ಸೆಂಟರ್ನ ತಜ್ಞ ವೈದ್ಯರು ಸ್ಥಳಕ್ಕೆ ಬಂದಿದ್ದು ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.
ಚಿರತೆ ಮರಿಯನ್ನು ರಕ್ಷಿಸಲು ಅಪಾಯ ಲೆಕ್ಕಿಸದೆ ಬಾವಿಗೆ ಇಳಿಯಲೇಬೇಕಿತ್ತು. ಆದರೆ ಒಂದು ವರ್ಷ ಪ್ರಾಯದ ಚಿರತೆ ಬಾವಿಯಲ್ಲಿದ್ದಾಗ ಅದರೊಳಗೆ ಇಳಿಯಲು ಯಾರೂ ಮುಂದಾಗಲಿಲ್ಲ. ಕೊನೆಗೆ, ಸಂರಕ್ಷಣಾ ತಂಡದ ಡಾ. ಮೇಘನಾ ಪೆಮ್ಮಯ್ಯ ಅವರು ಅರಿವಳಿಕೆ ಮದ್ದು ತುಂಬಿದ ಗನ್ ಹಿಡಿದು ಬೋನಿನಲ್ಲಿ ಕುಳಿತು ಬಾವಿಗೆ ಇಳಿದಿದ್ದಾರೆ.
ಡಾ. ಮೇಘನಾ ಬಾವಿಗೆ ಇಳಿಯುತ್ತಲೇ ಗುಹೆಯಲ್ಲಿ ಅಡಗಿ ಕುಳಿತ ಚಿರತೆ ಮರಿಯತ್ತ ಅರಿವಳಿಕೆ ಚುಚ್ಚು ಮದ್ದು ಪ್ರಯೋಗಿಸಿದ್ದಾರೆ. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಅರಣ್ಯ ಇಲಾಖೆಯ ಸಿಬಂದಿ ಹಗ್ಗದ ಮೂಲಕ ಕೆಳಗಿಳಿದು ಹೆಣ್ಣು ಚಿರತೆ ಮರಿಯನ್ನು ಮೇಲಕ್ಕೆ ತಂದಿದ್ದಾರೆ. ಜೊತೆಗೆ, ಅಮೋಘ ಕಾರ್ಯಾಚರಣೆ ನಡೆಸಿದ ಡಾ. ಮೇಘನಾ ಕೂಡ ಬಾವಿಯಿಂದ ಮೇಲಕ್ಕೆ ಬಂದಿದ್ದಾರೆ. ಬಳಿಕ ಚಿರತೆ ಚೇತರಿಸುತ್ತಿದ್ದಂತೆಯೇ ಅದನ್ನು ಅರಣ್ಯ ಇಲಾಖೆಯವರು ದಟ್ಟ ಕಾಡಿಗೆ ಒಯ್ದು ಬಿಟ್ಟು ಬಂದಿದ್ದಾರೆ.
A one-year-old leopard which fell into a well at Niddodi was rescued and later released into the wild on Sunday February 12. The forest department officials tried luring it inside a cage and were unsuccessful. A rescue team led by wild life specialist Dr Yashasvi Naravi with Dr Meghana, Dr Prithvi and Dr Nafisa decided to immobilise the leopard and bring it up from the well which was too deep and also which had caved inside where the leopard was hiding.
23-05-25 11:54 am
HK News Desk
ಕೊಡಗಿನಲ್ಲಿ ಈ ಬಾರಿ ಮಳೆ ಹೆಚ್ಚು ; ಮತ್ತೆ ಪ್ರಕೃತಿ...
22-05-25 11:09 pm
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
BJP Chalavadi Narayanaswamy, Congress, Priyan...
22-05-25 06:31 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
22-05-25 10:29 pm
Mangalore Correspondent
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
Kishor Kumar Puttur; ಸರ್ಕಾರಿ ಆಸ್ಪತ್ರೆ ಬಳಿಯ ಜನ...
21-05-25 11:09 pm
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
23-05-25 10:02 am
Mangalore Correspondent
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm