ಬ್ರೇಕಿಂಗ್ ನ್ಯೂಸ್
16-02-23 10:02 pm Mangalore Correspondent ಕರಾವಳಿ
ಮಂಗಳೂರು, ಫೆ.16: ಸುರತ್ಕಲ್ ಬಳಿಯ ಬಾಳ ಎಂಬಲ್ಲಿ ಬಡ ಮಹಿಳೆಗೆ ಸೇರಿದ ಕಟ್ಟಡ ಒಂದನ್ನು ಉದ್ಯಮಿ ಅಶೋಕ್ ರೈ ರಾತ್ರೋರಾತ್ರಿ ಜೆಸಿಬಿ ತಂದು ಒಡೆದು ಹಾಕಿರುವ ಘಟನೆ ನಡೆದಿದೆ. ಅಶೋಕ್ ರೈ ತನಗೆ ಸೇರಿದ ಜಾಗಕ್ಕೆ ರಸ್ತೆ ಮಾಡಲೆಂದು ಕಟ್ಟಡವನ್ನು ಒಡೆದು ಹಾಕಿದ್ದು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಾಳದಲ್ಲಿರುವ ಬಿಎಎಸ್ಎಫ್ ಕಾರ್ಖಾನೆಯ ಪಕ್ಕದಲ್ಲೇ ಇರುವ ಜಾಗದಲ್ಲಿ ನೌಕಾ ಪಡೆಯ ಮಾಜಿ ಯೋಧ ಚಿತ್ತರಂಜನ್ ರಾವ್ ಮತ್ತು ಅವರ ಪತ್ನಿ ಪ್ರಭಾವತಿಗೆ ಸೇರಿದ ಸಣ್ಣ ಕಟ್ಟಡ ಇತ್ತು. 30 ವರ್ಷಗಳ ಹಿಂದೆ ಚಿತ್ತರಂಜನ್ ರಾವ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾಗ ಕಷ್ಟದಲ್ಲಿ ಕಟ್ಟಿದ್ದ ಕಟ್ಟಡದಲ್ಲಿ ಪತ್ನಿ ಪ್ರಭಾವತಿ ಅವರು ಜೆರಾಕ್ಸ್ ಅಂಗಡಿ ಇನ್ನಿತರ ಕಚೇರಿ ಇಟ್ಟು ವಹಿವಾಟು ನಡೆಸುತ್ತಿದ್ದರು. ಆದರೆ ಜನವರಿ 9ರಂದು ರಾತ್ರಿ ಜೆಸಿಬಿ ತಂದು ಕಟ್ಟಡವನ್ನು ನೇರವಾಗಿ ಒಡೆದು ಹಾಕಿದ್ದಾರೆ. ಮಹಿಳೆ ಅಡ್ಡ ಬಂದು ಪ್ರಶ್ನೆ ಮಾಡಿದಾಗ, ನೀವು ಪೊಲೀಸ್ ದೂರು ಕೊಡಿ ಅಥವಾ ಕೋರ್ಟಿನಲ್ಲಿ ಕೇಸು ಹಾಕಿ ಎಂದು ಅಶೋಕ್ ರೈ ಆವಾಜ್ ಹಾಕಿದ್ದಾರೆ.
ತಾವು ದುಡಿದು ಕಟ್ಟಿದ್ದ ಕಟ್ಟಡವನ್ನು ಏಕಾಏಕಿ ಒಡೆದು ಹಾಕಿದ ಅಶೋಕ್ ರೈ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಭಾವತಿ ದೂರು ನೀಡಿದ್ದಾರೆ. ಆದರೆ ಪೊಲೀಸರು ಮಹಜರು ನಡೆಸಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಪ್ರಭಾವತಿ ಅವರು ಕಟ್ಟಡವನ್ನು ಒಡೆಯದಂತೆ ಅಡ್ಡಬಂದಾಗ ಅವರನ್ನು ಕೈಮಾಡಿ ದೂಡಿ ಹಾಕಿರುವ ಘಟನೆಯೂ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು ಮಾನಭಂಗ ಪ್ರಕರಣವೂ ದಾಖಲಾಗಿದೆ. ಕಟ್ಟಡವನ್ನು ಒಡೆದು ಹಾಕಿದ ಜಾಗದಲ್ಲಿ ಅಶೋಕ್ ರೈ ಕಾಂಕ್ರೀಟ್ ರಸ್ತೆ ನಿರ್ಮಿಸುತ್ತಿದ್ದಾರೆ. ಮಾಹಿತಿ ಪ್ರಕಾರ, ಅಲ್ಲಿಯೇ ಹಿಂಭಾಗದಲ್ಲಿ ಅಶೋಕ್ ರೈ ಎರೂಡವರೆ ಎಕ್ರೆ ಜಾಗ ಖರೀದಿಸಿದ್ದು ಅಲ್ಲಿ ಟಿವಿಎಸ್ ಕಂಪನಿಗೆ ಕಾರ್ಖಾನೆ ನಿರ್ಮಿಸಲು ಕೊಡುತ್ತಿದ್ದಾರೆ ಎನ್ನಲಾಗಿದೆ. ಕಾರ್ಖಾನೆಗೆ ಕಾಂಕ್ರೀಟ್ ರಸ್ತೆಯನ್ನು ಮಾಡಿಕೊಡಲು ಬಿಎಎಸ್ಎಫ್ ಕಂಪನಿಗೆ ಸೇರಿದ ಈ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಸ್ಥಳೀಯರಿಂದ ಲಭಿಸಿದೆ.
ಮಹಿಳೆ ಹೇಳುವ ಪ್ರಕಾರ, ಈ ಜಾಗ ಹಿಂದೆ ಚಿತ್ತರಂಜನ್ ರಾವ್ ಕುಟುಂಬಕ್ಕೆ ಸೇರಿದ್ದಾಗಿದ್ದು 30 ವರ್ಷಗಳ ಹಿಂದೆ ಬಿಎಎಸ್ಎಫ್ ಕಂಪನಿಗೆ ಬಿಟ್ಟು ಕೊಡಲಾಗಿತ್ತು. ಅದೇ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ 800 ಚದರಡಿ ವ್ಯಾಪ್ತಿಯಲ್ಲಿ ಪ್ರಭಾವತಿ ರಾವ್ ಸಣ್ಣ ಕಟ್ಟಡ ಕಟ್ಟಿಕೊಂಡಿದ್ದರು. ಆ ಜಾಗಕ್ಕೆ ಮಹಿಳೆಯ ಬಳಿ ಪ್ರತ್ಯೇಕ ಹಕ್ಕುಪತ್ರ ಇಲ್ಲವಾದರೂ, ಡೋರ್ ನಂಬರ್, ವಿದ್ಯುತ್ ಕನೆಕ್ಷನ್ ಕೊಡಲಾಗಿತ್ತು. ಹೀಗಾಗಿ ಕಟ್ಟಡವನ್ನು ಒಡೆಯುವ ಸಂದರ್ಭದಲ್ಲಿ ಪಂಚಾಯತ್ ಮೂಲಕ ತೆರವುಗೊಳಿಸುವ ಕಾರ್ಯ ಮಾಡಬೇಕಾಗಿತ್ತು. ಆದರೆ ಅಶೋಕ್ ರೈ ತಾನೇ ಜೆಸಿಬಿ ತಂದು ಕಟ್ಟಡವನ್ನು ಒಡೆಯುವ ಕಾರ್ಯ ಮಾಡಿದ್ದು ಮಹಿಳೆ ವಿರುದ್ಧ ದರ್ಪ ತೋರಿದ್ದಾರೆ.
#Mangalore Family in surathkal alleges of #Gundagiri by congress leader #AshokRai, house office demolished without any consent. FIR has been registered against #Ashokraiputtur at #surathkal police station.#BreakingNews pic.twitter.com/wShBMyYZxD
— Headline Karnataka (@hknewsonline) February 16, 2023
Mangalore Family in surathkal alleges of Gundagiri by congress leader Ashok Rai, house office demolished without any consent. FIR has been registered against Ashok rai at surathkal police station.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm