ಬ್ರೇಕಿಂಗ್ ನ್ಯೂಸ್
27-04-23 04:56 pm Mangaluru Correspondent ಕರಾವಳಿ
ಉಳ್ಳಾಲ, ಎ.27: ನಿನ್ನೆ ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆಯಲ್ಲಿ ಶೂ, ಮೊಬೈಲ್, ಪರ್ಸ್ ಇಟ್ಟು ನಾಪತ್ತೆಯಾಗಿದ್ದ ಕಾರ್ ಡೀಲರ್ ಮೃತದೇಹ ಸೋಮೇಶ್ವರದ ಉಚ್ಚಿಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ಉಳ್ಳಾಲ ಧರ್ಮನಗರ ನಿವಾಸಿ ವಸಂತ್ ಅಮೀನ್(49) ನಿನ್ನೆ ಮಧ್ಯಾಹ್ನದ ವೇಳೆ ಸೋಮೇಶ್ವರದ ರುದ್ರಪಾದೆಯಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಸ್ಥಳೀಯ ಮೀನುಗಾರರು, ಈಜುಗಾರರಿಂದ ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದರು. ಇಂದು ಮಧ್ಯಾಹ್ನ ಉಚ್ಚಿಲ ಕಡಲ ಕಿನಾರೆಯಲ್ಲಿ ವಿಹಾರಕ್ಕೆ ಬಂದಿದ್ದ ಜೋಡಿಯೊಂದು ನೀರಾಟಕ್ಕಿಳಿದಾಗ ಯುವಕನ ಕಾಲಿಗೆ ವಸಂತ್ ಅವರ ಮೃತದೇಹ ಸಿಕ್ಕಿಕೊಂಡಿದೆ. ಭಯಗೊಂಡ ಯುವಕನು ಬೊಬ್ಬೆ ಹಾಕಿದಾಗ ಅಲ್ಲೇ ಇದ್ದ ನಿವೃತ್ತ ಯೋಧ ಜಗನ್ನಾಥ್ ಕೋಟೆಕಾರ್ ಎಂಬವರು ನೀರಿಗಿಳಿದು ಮೃತ ದೇಹವನ್ನ ಮೇಲಕ್ಕೆತ್ತಿದ್ದಾರೆ.
ಆತ್ಮಹತ್ಯೆ ಶಂಕೆ; ಕಾರಣ ನಿಗೂಢ
ಮೂಲತಃ ಉಳ್ಳಾಲ ಬಸ್ತಿಪಡ್ಪು ನಿವಾಸಿಯಾದ ವಸಂತ್ ಅಮೀನ್ ತಿಂಗಳ ಹಿಂದಷ್ಟೆ ಉಳ್ಳಾಲದ ಧರ್ಮನಗರದಲ್ಲಿ ಒಂದಸ್ತಿನ ಸುಂದರವಾದ ಮನೆ ನಿರ್ಮಿಸಿದ್ದರು. ಹಣಕಾಸಿನಲ್ಲಿ ವಸಂತ್ ಅವರಿಗೆ ಯಾವುದೇ ಮುಗ್ಗಟ್ಟು ಇರಲಿಲ್ಲವೆಂದು ಸ್ನೇಹಿತರಲ್ಲದೆ ನೆರೆಯ ಮನೆಯವರು ಹೇಳುತ್ತಾರೆ. ಎರಡು ತಿಂಗಳ ಹಿಂದಷ್ಟೆ ಮೃತ ವಸಂತ್ ಅವರು ಎರಡು ಲಕ್ಷದ ಚಿನ್ನಾಭರಣವನ್ನೂ ಖರೀದಿಸಿದ್ದರಂತೆ. ವಸಂತ್ ಅವರ ಏಕೈಕ ಮಗಳು ಜಿಯಾ SSLC ಪರೀಕ್ಷೆ ಬರೆದಿದ್ದು ಪಿಯು ತರಗತಿ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಳು. ನಿನ್ನೆ ಬೆಳಗ್ಗೆ ಮನೆಯಿಂದ ಹೊರಟ ವಸಂತ್ ಅವರು ಕಾರನ್ನ ಸೋಮೇಶ್ವರ ಕಡಲ ಕಿನಾರೆಯಲ್ಲಿ ನಿಲ್ಲಿಸಿ ರುದ್ರಪಾದೆಯಲ್ಲಿ ತನ್ನ ಸೊತ್ತುಗಳನ್ನ ಇರಿಸಿ ನಾಪತ್ತೆಯಾಗಿದ್ದರು.
ವಸಂತ್ ಅವರು ಬಿಕರ್ನಕಟ್ಟೆಯ ಜಯಶ್ರೀ ಗೇಟ್ ಬಳಿ ಪಾಲುದಾರಿಕೆಯಲ್ಲಿ ಕಾರ್ ಡೀಲಿಂಗ್ ಕಚೇರಿ ಹೊಂದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ವಸಂತ್ ಅವರು ತನ್ನ ಸ್ನೇಹಿತರಲ್ಲಿ ವಿಪರೀತ ಹೊಟ್ಟೆ ನೋವೆಂದು ಹೇಳುತ್ತಿದ್ದರಂತೆ. ಮೃತದೇಹವನ್ನ ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರು ಪತ್ನಿ ನೀತಾ, ಮಗಳು ಜಿಯಾಳನ್ನು ಅಗಲಿದ್ದಾರೆ
Mangalore Ullal Missing Car dealer body found at Someshwar Beach. The deceased has been identified as Vasant Amin (49). Couple who were swimming in the beach suddenly were shocked to see the body.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm