ಬ್ರೇಕಿಂಗ್ ನ್ಯೂಸ್
28-04-23 07:26 pm Mangalore Correspondent ಕರಾವಳಿ
ಮಂಗಳೂರು, ಎ.28: ಸಲಿಂಗ ಕಾಮಿಗಳ ಮದುವೆಗೆ ಸುಪ್ರೀಂ ಕೋರ್ಟ್ ಕಾನೂನು ಮಾನ್ಯತೆ ಕೊಡಬಾರದು. ಇದು ಪ್ರಕೃತಿಯ ವಿರುದ್ಧ ಮತ್ತು ಹಿಂದು ಸಂಸ್ಕೃತಿ, ಪದ್ಧತಿಗೆ ವಿರುದ್ಧವಾದುದು. ಈ ರೀತಿಯ ಮದುವೆಗಳಿಗೆ ಭಾರತದಲ್ಲಿ ಅಂಗೀಕಾರ ಕೊಡಬಾರದು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಜ್ರದೇಹಿ ಸ್ವಾಮೀಜಿ, ಸಲಿಂಗಿಗಳ ಅಥವಾ ಒಂದೇ ಲಿಂಗತ್ವದವರು ಮದುವೆಯಾಗುವುದು ಭಾರತೀಯ ಸನಾತನ ಸಂಸ್ಕೃತಿಗೆ ವಿರುದ್ಧ. ಈ ಬಗ್ಗೆ ಸುಪ್ರೀಂ ಕೋರ್ಟ್ ಕಾನೂನು ಮಾನ್ಯತೆ ನೀಡಿದರೆ, ಅದರಿಂದ ಹಿಂದುಗಳ ಭಾವನೆಗೆ ಘಾಸಿ ಮಾಡಿದಂತಾಗುವುದು. ಮದುವೆ ಅನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ಉನ್ನತ ಉದ್ದೇಶ ಮತ್ತು ಮಹತ್ವ ಹೊಂದಿದೆ. ಪುರುಷ ಮತ್ತು ಮಹಿಳೆ ಹೀಗೆ ದ್ವಿಲಿಂಗಿಗಳ ಮದುವೆಯಿಂದ ಸಂತಾನ ಪ್ರಾಪ್ತಿಯ ಜೊತೆಗೆ ಲೈಂಗಿಕ ಕಾಮನೆಗಳ ಈಡೇರಿಸುವುದಕ್ಕೆ ಅವಕಾಶ ನೀಡುತ್ತದೆ. ಇದರಿಂದ ಉತ್ತಮ ಪ್ರಜೆಗಳ ಸ್ಥಾಪನೆ, ಸಂತಾನ ಸೃಷ್ಟಿಗೂ ದಾರಿ ತೋರಿಸುತ್ತದೆ. ಆದರೆ, ಒಂದೇ ಲಿಂಗದವರು ಮದುವೆಯಾದಲ್ಲಿ ಸಂತಾನ ಉತ್ಪತ್ತಿ ಸಾಧ್ಯವಿಲ್ಲ. ಇದರಿಂದ ಭವಿಷ್ಯದ ಭಾರತಕ್ಕೆ ಅಪಾಯ ಬರಲಿದೆ ಎಂದರು.

ಸುಪ್ರೀಂ ಕೋರ್ಟ್ ಈ ರೀತಿಯ ಮದುವೆಗಳಿಗೆ ಕಾನೂನು ಮಾನ್ಯತೆ ನೀಡಿದರೆ, ಆ ಸಮುದಾಯ ಮುಂದೆ ಪ್ರತ್ಯೇಕ ಮೀಸಲಾತಿಗೂ ಆಗ್ರಹಿಸುವ ಸಾಧ್ಯತೆಯಿದೆ. ಇದರಿಂದ ಸಮಾಜದಲ್ಲಿ ಬಿರುಕು, ಸಂಘರ್ಷ ಉಂಟಾಗುವ ಪ್ರಮೇಯ ಬರಬಹುದು ಎಂದು ಹೇಳಿದ ಸ್ವಾಮೀಜಿ, ಒಂದು ವೇಳೆ ಸುಪ್ರೀಂ ಕೋರ್ಟ್ ಇಂತಹ ಮದುವೆಗಳಿಗೆ ಮಾನ್ಯತೆ ನೀಡಿದರೆ ಬೀದಿ ಹೋರಾಟವನ್ನೂ ಮಾಡುತ್ತೇವೆ. ಜೊತೆಗೆ, ಕಾನೂನು ಹೋರಾಟವನ್ನೂ ಮಾಡುತ್ತೇವೆ. ಭಾರತದ ಸಂಸ್ಕೃತಿ ವಿನಾಶಕ್ಕೆ ಹಾದಿ ಮಾಡಿಕೊಡುವ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಪುತ್ತೂರಿನಲ್ಲಿ ಅರುಣ್ ಪುತ್ತಿಲ ಸ್ಪರ್ಧೆಯ ವಿಚಾರದಲ್ಲ ಕೇಳಿದ ಪ್ರಶ್ನೆಗೆ, ಹಿಂದುತ್ವ ವಿಚಾರದಲ್ಲಿ ನಮ್ಮಲ್ಲಿ ಬದ್ಧತೆ ಇದೆ. ಪುತ್ತಿಲ ಅವರು ಹಿಂದುತ್ವವಾದಿಯೇ ಆಗಿದ್ದರೂ ಈಗ ರಾಜಕೀಯಕ್ಕೆ ಇಳಿದಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಭಾಜಪ ಹಿಂದುತ್ವ ಪರವಾಗಿದೆ. ನಮ್ಮ ಬೆಂಬಲ ಭಾಜಪಕ್ಕೆ ಮಾತ್ರ. ಅರುಣ್ ಪುತ್ತಿಲ ವ್ಯವಸ್ಥೆಯನ್ನು ಬಿಟ್ಟು ಹೋಗಿದ್ದಾರೆ. ಅದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದರು ಗುರುಪುರ ಸ್ವಾಮೀಜಿ.
ವಿದ್ಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಈ ರೀತಿಯ ಪ್ರಯತ್ನಗಳು ದೇಶದ ಭವ್ಯ ಪರಂಪರೆ, ಸಂಸ್ಕೃತಿಗೆ ಹೊಡೆತ ಕೊಡುವಂಥವು. ಅಪಾಯದ ಎಚ್ಚರಿಕೆಯೂ ಹೌದು ಎಂದರು. ಸುದ್ದಿಗೋಷ್ಟಿಯಲ್ಲಿ ಉಡುಪಿ ಶಂಕರಪುರದ ಶೈಲೇಶ್ವರ ಗುರೂಜಿ ಉಪಸ್ಥಿತರಿದ್ದರು.
The Supreme Court should not give legal recognition for same-sex marriage. It is against nature and Hindu culture and customs," said Gurpur Vajradehi Math Seer Sri Rajashekarananda Swami.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
05-09-26 04:58 pm
HK News Staffer
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
05-09-26 04:55 pm
HK News Staffer
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm
ಉಪ್ಪಿನಂಗಡಿ ಹೆದ್ದಾರಿ ಬದಿ ನಿಲ್ಲಿಸಿದ್ದ ಲಾರಿಗಳಿಂದ...
05-09-26 11:52 am