ಬ್ರೇಕಿಂಗ್ ನ್ಯೂಸ್
03-05-23 08:25 pm Mangalore Correspondent ಕರಾವಳಿ
Photo credits : @cutinha_divya
ಮಂಗಳೂರು, ಮೇ 3 : ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ವಿಪರೀತ ಪ್ರಮಾಣದಲ್ಲಿ ಕುಸಿದಿರುವುದರಿಂದ ಮಂಗಳೂರು ನಗರಕ್ಕೆ ದಿನ ಬಿಟ್ಟು ದಿನ ಅಂದರೆ ಎರಡು ದಿನಕ್ಕೆ ಒಮ್ಮೆಯಂತೆ ನೀರು ಸರಬರಾಜು ಮಾಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ 4.34 ಮೀಟರ್ ಎತ್ತರಕ್ಕೆ ನೀರು ಲಭ್ಯವಿದ್ದು ಮಳೆ ಬಾರದೇ ಇದ್ದಲ್ಲಿ ಇದು 20 ದಿನಗಳಿಗೆ ಮಾತ್ರ ಸಾಕಾಗಲಿದೆ. 2019ರಲ್ಲಿ ಇದೇ ಸಮಯಕ್ಕೆ 4.67 ಮೀಟರ್ ನೀರು ಇತ್ತು ಎನ್ನುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ನೀರು ರೇಶನಿಂಗ್ ಮಾಡಲು ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದಾರೆ. ಅದರಂತೆ, ಮೇ 4ರ ನಂತರ ಎರಡು ದಿನಕ್ಕೊಮ್ಮೆ ನೀರು ಬಿಡಲು ನಿರ್ಧಾರಕ್ಕೆ ಬರಲಾಗಿದೆ.


ಮೇ 5ರಂದು ಪಾಲಿಕೆ ವ್ಯಾಪ್ತಿಯ ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ನೀಡಿದರೆ, 6ರಂದು ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ನೀರು ಹರಿಸಲು ನಿರ್ಣಯ ಮಾಡಲಾಗಿದೆ. ಒಂದು ದಿನ ನೀರು ಪೂರೈಕೆ ಕಡಿತವಾಗಲಿದ್ದು ಮಳೆ ಬರುವ ವರೆಗೂ ಇದೇ ಪ್ರಕಾರದಲ್ಲಿ ನೀರು ಪೂರೈಕೆ ಇರಲಿದ್ದು ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. ಇದಲ್ಲದೆ, ಇತರೇ ಕಟ್ಟಡ ನಿರ್ಮಾಣ ಕಾಮಗಾರಿ, ವಾಹನಗಳ ಸರ್ವಿಸಿಂಗ್ ಕೆಲಸಗಳಿಗೆ ನೀರು ಜೋಡಣೆ ಕಡಿತ ಮಾಡಲು ಸೂಚಿಸಲಾಗಿದ್ದು ನೀರಿನ ಪೋಲು ಮಾಡಿದ್ದು ಕಂಡುಬಂದಲ್ಲಿ ಅಂತಹ ಮನೆಗಳ ನೀರಿನ ಜೋಡಣೆಯನ್ನು ಕಡಿತ ಮಾಡಲು ಪಾಲಿಕೆ ಕಮಿಷನರ್ ಆದೇಶದಲ್ಲಿ ತಿಳಿಸಿದ್ದಾರೆ.
ಮಳೆ ಬಂದು ತುಂಬೆ ಅಣೆಕಟ್ಟಿನಲ್ಲಿ ನೀರು ಶೇಖರಗೊಳ್ಳುವ ವರೆಗೂ ಇದೇ ರೀತಿ ನೀರಿನ ರೇಶನಿಂಗ್ ಮುಂದುವರಿಯಲಿದೆ. ಈ ಬಾರಿ ಬೇಸಗೆ ಮಳೆ ಬಾರದೇ ಇರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಕುಸಿತವಾಗಿದೆ. ಇತ್ತೀಚೆಗೆ ಶಂಭೂರಿನ ಎಎಂಆರ್ ಅಣೆಕಟ್ಟಿನಿಂದ ತುಂಬೆಗೆ ನೀರು ಬಿಡಲಾಗಿತ್ತು. ಆದರೆ ಆ ನೀರು ಕೂಡ ತುಂಬೆಯಲ್ಲಿ ಖಾಲಿಯಾಗಿದ್ದು ರೇಶನಿಂಗ್ ಅನಿವಾರ್ಯ ಅನ್ನುವಂತಾಗಿದೆ. ತೀವ್ರ ಬಿಸಿಲಿನಿಂದಾಗಿ ನದಿಯಲ್ಲಿ ನೀರು ಬರಿದಾಗುತ್ತಿದ್ದು ಉಪ್ಪಿನಂಗಡಿ ಭಾಗದಲ್ಲಿ ನೇತ್ರಾವತಿ ಸಂಪೂರ್ಣ ಬತ್ತಿ ಹೋಗಿದೆ. ಈಗ ಅಣೆಕಟ್ಟಿನಲ್ಲಿ ಉಳಿದಿರುವ ನೀರು ಕೂಡ ಖಾಲಿಯಾಗುತ್ತಿದ್ದು ಮಂಗಳೂರಿನ ಜನರು ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ಎದುರಾಗಿದೆ.
Shortage of water in Thumbe vented dam, water supply on alternate days only in Mangalore city. In view of the drastic drop in water storage level at Thumbe vented dam, water rationing will be implemented from tomorrow (May 4) in the city limits.
03-07-26 01:21 pm
HK News Staffer
ರಾಮನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಬಾಂಗ್ಲಾ ಪ್ರಜೆ...
02-07-26 09:19 pm
ಆರ್ಎಸ್ಎಸ್ಗೆ ಬರುವ ಪ್ರತಿ ರೂಪಾಯಿಗೂ ಲೆಕ್ಕವಿದೆ,...
02-07-26 09:18 pm
ಬಿಜೆಪಿಯವರು ದೇವಸ್ಥಾನಗಳ ಮುಂದೆ ಹುಂಡಿ ಹಣ ಕಳ್ಳರಿದ್...
01-07-26 09:49 pm
ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನ...
29-06-26 10:33 pm
02-07-26 03:37 pm
HK News Staffer
ಹಿಂದು ವಿವಾಹಕ್ಕೆ ನೋಂದಣಿಯಷ್ಟೇ ಸಾಲದು, ಸಪ್ತಪದಿ ಇನ...
02-07-26 01:56 pm
ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ; ಟ್ರಸ್ಟಿ ಅನಿಲ್...
02-07-26 01:42 pm
1990ರ ಕಾಶ್ಮೀರಿ ಪಂಡಿತರ ನರಮೇಧ ; ನರ್ಸ್ ಸರಳಾ ಭಟ್...
30-06-26 08:06 pm
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
02-07-26 10:53 pm
HK News Desk
ಆರೆಂಜ್ ಅಲರ್ಟ್ ಸೂಚನೆ ; ದಕ್ಷಿಣ ಕನ್ನಡ ಜಿಲ್ಲೆಯಲ್ಲ...
02-07-26 10:11 pm
ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕ...
01-07-26 10:37 pm
ಭಾರಿ ಮಳೆ ; ಜುಲೈ 2 ದಕ್ಷಿಣ ಕನ್ನಡ ಶಾಲೆ - ಕಾಲೇಜಿಗ...
01-07-26 09:58 pm
ನಾಗುರಿ ದುರಂತ ನಮಗೆಲ್ಲ ಎಚ್ಚರಿಕೆ ಕರೆಗಂಟೆ, ವಿಕೋಪಗ...
01-07-26 09:18 pm
03-07-26 07:45 pm
HK News Staffer
ಮುಸ್ಲಿಂ ಧರ್ಮಗುರುಗಳಿಗೆ ನಿಂದನೆ ; ಪುನೀತ್ ಕೆರೆಹಳ್...
03-07-26 06:59 pm
ಇನ್ಸ್ಟಾ ಗ್ರಾಮ್ ಸ್ಟಾರ್ ಧನ್ಯಾ ಕುಂಬಳೆ ಹೆದ್ದಾರಿ...
03-07-26 04:22 pm
ಬೆಂಗಳೂರಿನಲ್ಲಿ ಡೇಂಜರ್ ಡೇ ಕೇರ್ ; ಪುಟ್ಟ ಮಕ್ಕಳನ್ನ...
03-07-26 02:41 pm
ಮಂಗಳೂರು ಜೈಲಿಗೆ ಹೊರಗಿನಿಂದ ಗಾಂಜಾ ಪೊಟ್ಟಣ ಎಸೆದ ವ್...
03-07-26 12:25 pm