ಬ್ರೇಕಿಂಗ್ ನ್ಯೂಸ್
29-05-23 05:53 pm Mangaluru Correspondent ಕರಾವಳಿ
ಮಂಗಳೂರು, ಮೇ 29: ಮುಂಬೈ ಕನ್ನಡಿಗ ಲೇಖಕಿ ಅಶ್ವಿತಾ ಶೆಟ್ಟಿಯವರ ಚೊಚ್ಚಲ ಕಥಾ ಸಂಕಲನ ‘’ಮರ್ಸಿಡಿಸ್ ಬೆಂಝ್ ನ ಹಿಂದೆ ’’ ಎನ್ನುವ ಪುಸ್ತಕವನ್ನು ಹೈಕೋರ್ಟ್ ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿ ಹರೇಕಳ ಪಾವೂರಿನ ಇನೋಳಿ ಸೋಮನಾಥೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.
ಎಂಆರ್ ಪಿಎಲ್ ಸಂಸ್ಥೆಯ ನಿವೃತ್ತ ವ್ಯವಸ್ಥಾಪಕ ನಿರ್ದೇಶಕಿ ವೀಣಾ ಟಿ. ಶೆಟ್ಟಿ, ಇನ್ನೋಳಿ ಸೋಮನಾಥೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಾಲ ಶೆಟ್ಟಿ ಬಾರ್ಲ, ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಐಲೇಸಾ ದಿವಾಯ್ಸ್ ಆಫ್ ಓಶಿಯನ್ ಸ್ಥಾಪಕ, ಲೇಖಕ ಶಾಂತರಾಮ ಶೆಟ್ಟಿ, ಬೆಂಗಳೂರಿನ ಟೋಟಲ್ ಕನ್ನಡ ಪ್ರಕಾಶಕ ಲಕ್ಷ್ಮೀಕಾಂತ್, ನಿವೃತ್ತ ಶಿಕ್ಷಕ ಗಂಗಾಧರ ಪೂಜಾರಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಸಿವಿಲ್ ನ್ಯಾಯಾಧೀಶ ಪ್ರಸಾದ್ ಕೆವಿ, ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿ, ಸಾಹಿತಿ ಶಶಿರಾಜ್ ಕಾವೂರು ಮತ್ತಿತರರು ಉಪಸ್ಥಿತರಿದ್ದರು.
ಅಶ್ವಿತಾ ಶೆಟ್ಟಿ ಮೂಲತಃ ಇನ್ನೋಳಿಯವರಾಗಿದ್ದು, ಮದುವೆಯಾದ ಬಳಿಕ ಮುಂಬೈನಲ್ಲಿ ನೆಲೆಸಿದ್ದಾರೆ. ಅಲ್ಲಿದ್ದುಕೊಂಡೇ ಕನ್ನಡದಲ್ಲಿ ಬರವಣಿಗೆ ಮುಂದುವರಿಸಿದ್ದಾರೆ. ಯುಗಪುರುಷ ಮಾಸ ಪತ್ರಿಕೆಯಲ್ಲಿ 15ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಇದೀಗ ಮೊದಲ ಬಾರಿಗೆ 22 ಕಥೆಗಳನ್ನು ಒಳಗೊಂಡ ಮರ್ಸಿಸಿಡ್ ಬೆಂಝ್ ಹಿಂದೆ ಎನ್ನುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಆಧುನಿಕತೆಯ ಬೆನ್ನುಹತ್ತಿದ ಯುವ ಜನಾಂಗ, ಎದುರಿಸುತ್ತಿರುವ ತವಕ, ತಲ್ಲಣಗಳನ್ನು ತೆರೆದಿಟ್ಟಿದ್ದಾರೆ.
ಯುವಕನೊಬ್ಬ ಉದ್ಯೋಗ ಅರಸಿ ಜರ್ಮನಿಗೆ ಹೊರಟು ಅಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯಲ್ಲಿ ದುಡಿದು ಕಂಪನಿಯ ಯಶಸ್ಸಿಗೆ ಕಾರಣವಾಗುತ್ತಾನೆ. ದೊಡ್ಡ ಕಂಪನಿ, ಟಾರ್ಗೆಟ್ ಎನ್ನುತ್ತಾ 24 ಗಂಟೆ ದುಡಿತದ ಕಾರಣ ಇತ್ತ ಆತನ ಸ್ವಂತ ಜೀವನ ನರಕಕ್ಕೆ ಹೋಗುತ್ತದೆ. ಕಂಪನಿಯಿಂದ ಹೊರಬಂದು ನೋಡಿದಾಗ, ತನ್ನದೆಲ್ಲವೂ ನಶ್ವರವಾಗಿರುತ್ತೆ ಎನ್ನುವ ಚಿತ್ರಣವನ್ನು ಕಟ್ಟಿಕೊಡುವ ಕಥೆಗಳು ಆಧುನಿಕ ವಾಸ್ತವಗಳನ್ನು ತೆರೆದಿಡುತ್ತವೆ. ಕಾರ್ಯಕ್ರಮದಲ್ಲಿ ಪ್ರೊ.ಸಾಯಿಗೀತಾ ಹೆಗ್ಡೆ ಕೃತಿ ಪರಿಚಯಿಸಿದರು. ಹರಿಶ್ಚಂದ್ರ ಶೆಟ್ಟಿ ಕರ್ನಿರೆ ಸ್ವಾಗತಿಸಿದರು.
High court judge Justice Vishwajith Shetty launches book of Kannada Author Ashwitha Shetty called "Mercedes Benz Na Hindey" in Mangalore at Sri Somanatheshwara Temple. Ashwitha Shetty hails from Inoli, Mangalore and is now based in Mumabi. Mercedes Benz Na Hindey book contains 22 stories.
16-07-25 11:47 am
HK News Desk
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 11:42 am
Mangalore Correspondent
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm