ಬ್ರೇಕಿಂಗ್ ನ್ಯೂಸ್
21-06-23 05:13 pm Mangalore Correspondent ಕರಾವಳಿ
ಉಳ್ಳಾಲ, ಜೂ.21: ಕಳೆದ ನಾಲ್ಕೈದು ತಿಂಗಳಿಂದ ನಗರ ವ್ಯಾಪ್ತಿಯ ತ್ಯಾಜ್ಯವೆಲ್ಲವೂ ರಾಶಿ ಬಿದ್ದು ಕಸದ ಕೊಂಪೆಯಾಗಿದ್ದ ಉಳ್ಳಾಲ ಬೀಚ್ ರಸ್ತೆಯಲ್ಲಿ ನಿನ್ನೆ ಸ್ಥಳೀಯರು ಆಕ್ರೋಶಿತರಾಗಿ ತ್ಯಾಜ್ಯವನ್ನ ನಗರಸಭೆ ಕಚೇರಿ ಮುಂದೆ ಸುರಿಯಲು ಮುಂದಾದ ಹಿನ್ನಲೆಯಲ್ಲಿ ಎಚ್ಚೆತ್ತ ದಪ್ಪ ಚರ್ಮದ ನಗರಾಡಳಿತವು ಇಂದು ಸೂರ್ಯೋದಯದಿಂದಲೇ ಬೀಚ್ ರಸ್ತೆಯ ತ್ಯಾಜ್ಯವನ್ನು ಮಂಗಳೂರಿನ ಡಂಪಿಗ್ ಯಾರ್ಡ್ ಗೆ ಸಾಗಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ.
ಕಳೆದ ಐದಾರು ವರ್ಷಗಳಿಂದ ಉಳ್ಳಾಲ ನಗರಸಭೆ ನಗರವಾಸಿಗಳಿಂದ ಸಂಗ್ರಹಗೊಂಡ ತ್ಯಾಜ್ಯವನ್ನ ಬೀಚ್ ರಸ್ತೆ ಬದಿಯಲ್ಲೇ ರಾಶಿ ಹಾಕಿ ವಿಂಗಡಿಸಿ ವಿಲೇವಾರಿ ನಡೆಸುತ್ತಿದೆ. ಇದರಿಂದ ಬೀಚ್ಗೆ ಬರುವ ಪ್ರವಾಸಿಗರು ಮೂಗು ಮುಚ್ಕೊಂಡು ವಿಹರಿಸೋ ಪರಿಸ್ಥಿತಿ ಬಂದಿದೆ. ಕಳೆದ ಐದಾರು ತಿಂಗಳಿಂದ ಇಲ್ಲಿ ರಾಶಿಗಟ್ಟಲೆ ತ್ಯಾಜ್ಯ ಸಂಗ್ರಹಗೊಂಡಿದ್ದು ಅದನ್ನ ವಿಂಗಡಿಸಿ ವಿಲೇವಾರಿ ನಡೆಸೋ ಕಾರ್ಯ ನಗರಸಭೆ ಆಡಳಿತ ಮಾಡಿಲ್ಲ. ತ್ಯಾಜ್ಯ ಶೇಖರಣೆಯಿಂದ ಸ್ಥಳೀಯರ ಬಾವಿಯ ನೀರು ಕಲುಷಿತಗೊಂಡಿದೆ.
ಆಕ್ರೋಶಿತ ಸ್ಥಳೀಯರು ಮಂಗಳವಾರ ತ್ಯಾಜ್ಯವನ್ನ ರಸ್ತೆಗೆಸೆದು ಪ್ರತಿಭಟಿಸಿದ್ದಲ್ಲದೆ, ನಗರಸಭೆ ಕಚೇರಿಗೂ ತ್ಯಾಜ್ಯ ಸುರಿಯಲು ಮುಂದಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ನಗರಸಭೆ ಪ್ರಭಾರಿ ಪೌರಾಯುಕ್ತೆ ವಾಣಿ ಆಳ್ವಗೆ ಪ್ರತಿಭಟನಾ ನಿರತ ಸೆಲ್ವಿ ಎಂಬ ಮಹಿಳೆ ಕಲುಷಿತಗೊಂಡಿರುವ ತನ್ನ ಬಾವಿಯ ನೀರನ್ನ ಕುಡಿಯುವಂತೆ ಹೇಳಿದ್ದರು. ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ವಾಣಿ ಆಳ್ವ ಸ್ಥಳದಿಂದ ತೆರಳಿದ್ದರು.
ಘಟನೆ ಕುರಿತಂತೆ ಬಿಜೆಪಿ ಮುಖಂಡ ಸತೀಶ್ ಕುಂಪಲ ಅವರು ಜಿಲ್ಲಾಧಿಕಾರಿಗೆ ದೂರಿತ್ತಿದ್ದು ಸಮಸ್ಯೆ ಸರಿಪಡಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಉಳ್ಳಾಲದ ಮಾನ ಹರಾಜಾಗುತ್ತಿದ್ದರೂ ಸುಮ್ಮನಿದ್ದ ನಗರಸಭೆಯ ಅಧಿಕಾರಿಗಳು ಇಂದು ಬೆಳಗ್ಗಿನಿಂದಲೇ ಹಿಟಾಚಿ ಯಂತ್ರದಿಂದ ತ್ಯಾಜ್ಯ ತೆರವು ಮಾಡಲು ಆರಂಭಿಸಿದ್ದಾರೆ.
Mangalore Garbage dump in Ullal beach road, cleaning process begins after protest from residents.
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 11:26 pm
Mangalore Correspondent
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm