ಬ್ರೇಕಿಂಗ್ ನ್ಯೂಸ್
01-08-23 11:09 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 1: ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಪ್ರೋಟೋಕಾಲ್ ಪ್ರಕಾರ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೆಸರು ಹಾಕದ ಕಾರಣಕ್ಕೆ ಕಾರ್ಯಕ್ರಮ ರದ್ದುಪಡಿಸಿದ್ದಲ್ಲದೆ, ಇರುವೈಲು ಗ್ರಾಮ ಪಂಚಾಯತ್ ಪಿಡಿಓ ಮತ್ತು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣ ಅಧಿಕಾರಿಯನ್ನು ಅಮಾನತು ಮಾಡಿರುವ ಕ್ರಮವನ್ನು ಆಕ್ಷೇಪಿಸಿ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ನ್ಯಾಯ ಕೇಳಿದ ಪ್ರಸಂಗ ನಡೆದಿದೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಉಮಾನಾಥ ಕೋಟ್ಯಾನ್, ಆಮಂತ್ರಣ ಪತ್ರಿಕೆಯನ್ನು ಜಿಲ್ಲಾಡಳಿತದ ಪ್ರೋಟೋಕಾಲ್ ಪ್ರಕಾರವೇ ಮುದ್ರಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರ ಹೆಸರನ್ನೂ ಹಾಕಲಾಗಿತ್ತು. ಆದರೆ, ಎರಡು ದಿನ ಇರುವಾಗ ಕಾರ್ಯಕ್ರಮ ರದ್ದುಪಡಿಸಿದ್ದಲ್ಲದೆ ಇಬ್ಬರು ಅಧಿಕಾರಿಗಳನ್ನು ಜಿಪಂ ಸಿಇಓ, ವಿನಾಕಾರಣ ಸಸ್ಪೆಂಡ್ ಮಾಡಿದ್ದಾರೆ ಎಂದರು. ಇದಕ್ಕೆ ಆಕ್ಷೇಪಿಸಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿಗಳ ಗಮನಕ್ಕೆ ವಿಷಯದ ವಿವರಣೆ ನೀಡಿದರು.
ಆದರೆ, ಈ ಬಗ್ಗೆ ಇತರೇ ಬಿಜೆಪಿ ಶಾಸಕರು ಆಕ್ಷೇಪ ಸೂಚಿಸಿದ್ದಲ್ಲದೆ, ಈ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದರು. ಯಾಕಾಗಿ ಇಬ್ಬರನ್ನು ಸಸ್ಪೆಂಡ್ ಮಾಡಿದ್ದಾರೆ ಎಂದು ವಿವರಣೆ ಕೊಡಬೇಕು ಎಂದು ಉಮಾನಾಥ ಕೋಟ್ಯಾನ್ ಕೇಳಿಕೊಂಡರು. ಮುಖ್ಯಮಂತ್ರಿ ಜಿಲ್ಲಾಧಿಕಾರಿಯನ್ನು ಪ್ರಶ್ನೆ ಮಾಡಿದ್ದು, ಪ್ರೋಟೋಕಾಲ್ ಮೀರದಂತೆ ಸೂಚನೆ ನೀಡಿದರು. ಪ್ರೋಟೋಕಾಲ್ ತಪ್ಪು ಮಾಡಿದ್ದರೆ, ಜಿಲ್ಲಾಧಿಕಾರಿಯನ್ನು ಸಸ್ಪೆಂಡ್ ಮಾಡಿ. ಅವರು ಹೇಳಿದ ರೀತಿಯಲ್ಲೇ ಆಮಂತ್ರಣ ಪತ್ರಿಕೆ ಮಾಡಲಾಗಿತ್ತು ಎಂದು ಹೇಳಿ ಪತ್ರಿಕೆಯನ್ನು ಮುಖ್ಯಮಂತ್ರಿಯ ಕೈಗಿತ್ತರು ಉಮಾನಾಥ ಕೋಟ್ಯಾನ್.
ಸಚಿವ ಪ್ರಿಯಾಂಕ ಖರ್ಗೆ ಹೆಸರು ಹಾಕಿಲ್ಲ ಎಂದು ಅಧಿಕಾರಿಗಳನ್ನು ಅಮಾನತು ಮಾಡಬೇಕಿತ್ತೇ.. ರಾಜ್ಯದಲ್ಲಿ 5950 ಗ್ರಾಮ ಪಂಚಾಯತ್ ಗಳಿವೆ. ಎಲ್ಲದಕ್ಕೂ ಸಚಿವರಿಗೆ ಬರುವುದಕ್ಕೆ ಆಗುತ್ತಾ.. ಹಾಗಂತ, ಸಸ್ಪೆಂಡ್ ಮಾಡುವುದಾ.. ಈ ಬಗ್ಗೆ ನಾವು ಶಾಸಕರು ಫೋನ್ ಮಾಡಿ ಕೇಳಿದರೂ, ಜಿಲ್ಲಾಧಿಕಾರಿ, ಸಿಇಓ ಕ್ಯಾರ್ ಮಾಡಿಲ್ಲ. ಕನಿಷ್ಠ ಗೌರವ ಕೊಟ್ಟಿಲ್ಲ ಎಂದು ದೂರಿದರು ಕೋಟ್ಯಾನ್. ಯಾವುದೇ ಪಕ್ಷದ ಶಾಸಕರು ಆದರೂ ಅಧಿಕಾರಿಗಳು ಗೌರವ ಕೊಡಬೇಕು. ಅವರು ಜನರಿಂದ ಆಯ್ಕೆಯಾಗಿ ಬಂದವರು. ಅವರಿಗೆ ಗೌರವ ಕೊಡಲೇಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿಸುವುದಾಗಿ ಮುಖ್ಯಮಂತ್ರಿ ಸಭೆಯಲ್ಲಿ ತಿಳಿಸಿದರು.
ಜುಲೈ 31ರಂದು ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಉದ್ಘಾಟನೆ ಕಾರ್ಯಕ್ರಮವನ್ನು ಕಾಂಗ್ರೆಸ್ ನಾಯಕರ ಸೂಚನೆಯಂತೆ ರದ್ದುಪಡಿಸಲಾಗಿತ್ತು. ಸಚಿವ ಪ್ರಿಯಾಂಕ ಖರ್ಗೆ ಸೂಚನೆ ಪ್ರಕಾರ, ಕಾರ್ಯಕ್ರಮ ರದ್ದು ಮತ್ತು ಇಬ್ಬರು ಅಧಿಕಾರಿಗಳ ಅಮಾನತು ಆಗಿತ್ತು ಎಂದು ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದ್ದರು.
Moodbidri Mla Umanth Kotian slams Congress leaders before CM for suspending PDO and EO for missing Priyank Kharge name in invitation.
18-05-24 10:01 pm
Bangalore Correspondent
Bangalore crime: ತನ್ನ ಮೊಬೈಲ್ ತೆಗೆದು ಗೇಮ್ಸ್ ಆ...
18-05-24 08:20 pm
Dr Dhananjaya Sarji, Vidhan Parishad election...
18-05-24 07:24 pm
Bangalore KSRTC Bus accident, Bridge: ಡ್ರೈವರ್...
18-05-24 04:18 pm
Haveri Lokayukta arrest Police: ಇಸ್ಪೀಟ್ ಆಡಿಸಲ...
18-05-24 10:25 am
18-05-24 10:18 pm
HK News Desk
Pavithra Jayaram, Chandrakanth suicide: ಸೀರಿಯ...
18-05-24 09:15 pm
ಕರೆಂಟ್ ಶಾಕ್ ಹೊಡೆದು ಕುಸಿದು ಬಿದ್ದ ಆರು ವರ್ಷದ ಬಾಲ...
18-05-24 11:54 am
ಮೋದಿ ನೇತೃತ್ವದಲ್ಲಿ ಭಾರತ ಹೊಸ ಎತ್ತರಕ್ಕೆ ಹೋಗಿದೆ,...
17-05-24 09:56 pm
PM Modi, Ayodhya Ram Temple, Yogi Adityanath:...
17-05-24 05:59 pm
18-05-24 10:31 pm
Mangalore Correspondent
Raghupati Bhat, BJP, Mangalore: ಬಿಜೆಪಿಯಲ್ಲಿ ಗ...
18-05-24 05:13 pm
Mangalore Naturals Ice Cream owner, Raghunand...
18-05-24 11:48 am
Mangalore News, Traffic police video: ಪೊಲೀಸ್...
17-05-24 09:17 pm
MLA Ashok Rai Puttur: ಶಾಸಕನಾಗಿ ಒಂದು ವರ್ಷ ; ಜನ...
17-05-24 04:32 pm
18-05-24 04:05 pm
HK News Desk
ಹೊಸದುರ್ಗ ; ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ನಸುಕಿನ...
17-05-24 09:52 pm
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm