ಬ್ರೇಕಿಂಗ್ ನ್ಯೂಸ್
06-01-24 03:40 pm Mangalore Correspondent ಕರಾವಳಿ
ಮಂಗಳೂರು, ಜ.6: ಕಾಂತಾರ ಚಿತ್ರದ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಗುರುಪುರ ವಜ್ರದೇಹಿ ಮಠದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಆಗಮಿಸಿದ್ದು, ಮೈಸಂದಾಯ ಮತ್ತು ಅಣ್ಣಪ್ಪ ಪಂಜುರ್ಲಿ ದೈವದ ಕೋಲದಲ್ಲಿ ಕಾಣಿಸಿಕೊಂಡಿದ್ದಾರೆ.
ನಿನ್ನೆ ರಾತ್ರಿ 12 ವೇಳೆಗೆ ಮೈಸಂದಾಯ ದೈವದ ಕೋಲ ನಡೆದಿದ್ದು, ಆ ಸಂದರ್ಭದಲ್ಲಿ ಗುರುಪುರ ಮಠದ ವಜ್ರದೇಹಿ ಸ್ವಾಮೀಜಿ ಜೊತೆಗೆ ಕಾಂತಾರ ಎರಡನೇ ಭಾಗದ ಚಿತ್ರೀಕರಣದ ಸಲುವಾಗಿ ದೈವದ ಅನುವು ಕೇಳಿದ್ದಾರೆ. ದೈವವು ರಿಷಬ್ ಶೆಟ್ಟಿ ಕೇಳಿಕೊಂಡ ಮಾತಿಗೆ ಅನುವು ನೀಡಿದಂತೆ ಬೆನ್ನು ತಟ್ಟಿ ಆಶೀರ್ವದಿಸಿದ ವಿಡಿಯೋ ವೈರಲ್ ಆಗಿದೆ. ಹೀಗಾಗಿ ದೈವ ಕಾಂತಾರದ ಚಿತ್ರಕ್ಕಾಗಿ ಅಭಯ ನೀಡಿದೆಯೆಂದು ಹೇಳಲಾಗುತ್ತಿದೆ.
ಆನಂತರ, ನಸುಕಿನ ವೇಳೆಗೆ ಅಣ್ಣಪ್ಪ ಪಂಜುರ್ಲಿ ದೈವದ ಕೋಲದ ಸಂದರ್ಭದಲ್ಲಿಯೂ ರಿಷಬ್ ಶೆಟ್ಟಿ ಬಂದು ದೈವದಲ್ಲಿ ಕಾಂತಾರದ ಚಿತ್ರಕ್ಕಾಗಿ ಬೇಡಿಕೊಂಡಿದ್ದಾರೆ. ಕಾಂತಾರ ಚಿತ್ರದ ಎರಡನೇ ಭಾಗದ ಚಿತ್ರೀಕರಣದಲ್ಲಿ ಬಿಝಿಯಾಗಿರುವ ರಿಷಬ್ ಶೆಟ್ಟಿ ಅದರ ನಡುವಲ್ಲೇ ಕೋಲಕ್ಕೆ ಬಂದು ಬೇಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರದ ಕಾರಣದಿಂದಲೇ ದೈವಾರಾಧನಗೆ ಅಪಚಾರ ಆಗಿದೆಯೆಂದು ಜಾಲತಾಣದಲ್ಲಿ ಟೀಕೆ ಬಂದಿತ್ತು. ಬೆಂಗಳೂರು, ಮಂಡ್ಯದಲ್ಲಿ ದೈವದ ಆವೇಶ, ಕೊರಗಜ್ಜನ ಕೋಲದಲ್ಲಿ ವಿಕೃತ ನಡವಳಿಕೆಯ ವಿಡಿಯೋ ವೈರಲ್ ಆಗಿದ್ದಕ್ಕೆ ದೈವಾರಾಧಕರು ಭಾರೀ ಟೀಕೆಯನ್ನೂ ಮಾಡಿದ್ದರು. ಇದೆಲ್ಲ ಕಾಂತಾರ ಚಿತ್ರದ ಬಳಿಕವೇ ಆಗಿರುವುದು ಎನ್ನುವ ಟೀಕೆ ವ್ಯಕ್ತವಾಗಿತ್ತು.
ಎರಡನೇ ಭಾಗದಲ್ಲಿ ದೈವದ ಕುರಿತಾಗಿ ಸಿನಿಮಾ ಮಾಡಬಾರದೆಂದು ರಿಷಬ್ ಶೆಟ್ಟಿ ಬಗ್ಗೆ ಟೀಕೆಯನ್ನೂ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಕೋಲದ ಸಂದರ್ಭದಲ್ಲಿ ಬಂದು ಸಿನಿಮಾ ಚಿತ್ರೀಕರಣಕ್ಕಾಗಿ ಬೇಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಯಾವ ರೀತಿಯ ಬೇಡಿಕೆಯನ್ನು ದೈವದ ಮುಂದಿರಿಸಿದ್ದರು, ದೈವ ಯಾವ ರೀತಿಯ ಆಶೀರ್ವಾದ ನೀಡಿದೆ ಎನ್ನುವ ಬಗ್ಗೆ ತಿಳಿಯಲು ಗುರುಪುರ ಸ್ವಾಮೀಜಿ ಸಂಪರ್ಕಕ್ಕೆ ಸಿಕ್ಕಿಲ್ಲ.
Kantara actor Rishab Shetty visits Gurupura Math Rajashekharananda swamiji in Mangalore.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 03:19 pm
Mangalore Correspondent
Ullal, Mangalore: ಸಮುದ್ರ ಮಧ್ಯದಲ್ಲೇ ಪೋರ್ಚುಗೀಸರ...
17-09-25 01:34 pm
Dharmasthala, Lakshmish Tolpadi, Mangalore: ಧ...
16-09-25 07:48 pm
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
17-09-25 06:04 pm
Mangalore Correspondent
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm