ಬ್ರೇಕಿಂಗ್ ನ್ಯೂಸ್
10-01-24 07:19 pm Mangalore Correspondent ಕರಾವಳಿ
ಮಂಗಳೂರು, ಜ.10: ನವಮಂಗಳೂರು ಬಂದರಿಗೆ ಹೊಸ ವರ್ಷದ ಮೊದಲ ಕ್ರೂಸ್ ಹಡಗು ಆಗಮಿಸಿದೆ. ಎಂ.ಎಸ್. ರಿವೀರಿಯ ಹೆಸರಿನ ಕ್ರೂಸ್ ಹಡಗು ಬುಧವಾರ ಎನ್ಎಂಪಿಟಿ ಬಂದರಿಗೆ ಆಗಮಿಸಿದ್ದು, ಹಡಗಿನಲ್ಲಿ ಬಂದ ವಿದೇಶಿ ಪ್ರವಾಸಿಗರು ಮಂಗಳೂರು ಸುತ್ತಾಡಿದ್ದಾರೆ. ಈ ಸಾಲಿನ ಸೀಸನ್ನಲ್ಲಿ ಬಂದ ನಾಲ್ಕನೇ ಪ್ರವಾಸಿ ಹಡಗು ಇದಾಗಿದೆ.
ಹಡಗಿನಲ್ಲಿ ಸಿಬಂದಿ ಸೇರಿ ಒಟ್ಟು 980 ಪ್ರವಾಸಿಗರಿದ್ದರು. ದುಬೈ, ಮುಂಬೈ, ಮರ್ಮಗೋವಾ ಬಂದರಿನ ಮೂಲಕ ಮಂಗಳೂರಿಗೆ ಆಗಮಿಸಿದ್ದು, ಐಷಾರಾಮಿ ಹಡಗು 239 ಮೀಟರ್ ಉದ್ದವಾಗಿದೆ. 66,172 ಟನ್ ಭಾರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹಡಗಿನಲ್ಲಿ ಬಂದ ಪ್ರವಾಸಿಗರಿಗೆ ಮಂಗಳೂರಿನ ಬಂದರಿಗೆ ಕಾಲಿಡುತ್ತಿದ್ದಂತೆ ಕರಾವಳಿಯ ಸಾಂಪ್ರದಾಯಿಕ ಕಲೆ ಯಕ್ಷಗಾನ ಮೂಲಕ ಸ್ವಾಗತ ನೀಡಲಾಯಿತು. ವಿವಿಧ ರೀತಿಯ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಏರ್ಪಡಿಸಲಾಗಿತ್ತು.





ಪ್ರವಾಸಿಗರನ್ನು ಮಂಗಳೂರು ಸುತ್ತಮುತ್ತ ಸುತ್ತಾಡಿಸಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆಯುಷ್ ಇಲಾಖೆಯಿಂದ ಮೆಡಿಟೇಶನ್ ಸೆಂಟರ್, ಎನ್ಎಂಪಿಟಿ ಬಂದರಿನಲ್ಲಿ ಫ್ರೀ ವೈಫೈ, ಯಕ್ಷಗಾನ ಕಲಾವಿದರ ಜೊತೆಗೆ ಫೋಟೋ ಕ್ಲಿಕ್ಕಿಸಲು ಸೆಲ್ಫಿ ಸ್ಟಾಂಡ್ ಒದಗಿಸಲಾಗಿತ್ತು. ಹಡಗಿನ ಪ್ರಮುಖ ಅಧಿಕಾರಿಗಳನ್ನು ಎನ್ಎಂಪಿಎ ಬಂದರಿನ ಡೆಪ್ಯುಟಿ ಚೇರ್ಮನ್ ಕೆ.ಜಿ. ನಾಥ್, ಸೆಕ್ರಟರಿ ಜಿಜೋ ಥಾಮಸ್ ಗೌರವಿಸಿದರು. ಆಬಳಿಕ ಪ್ರವಾಸಿಗರಿಗೆಂದೇ ಮಂಗಳೂರಿನ ಸ್ಥಳೀಯ ಕಲಾವಿದರ ತಂಡದಿಂದ ಯಕ್ಷಗಾನ ಏರ್ಪಡಿಸಲಾಗಿತ್ತು.
ಮಂಗಳೂರಿನಲ್ಲಿ ಕಾರ್ಕಳ ಗೊಮ್ಮಟೇಶ್ವರ, ಮೂಡುಬಿದ್ರೆ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಅಚಲ್ ಕ್ಯಾಶ್ಯು ಫ್ಯಾಕ್ಟರಿ, ಸೈಂಟ್ ಅಲೋಸಿಯಸ್ ಚರ್ಚ್, ಹಳೆ ಶೈಲಿಯ ಮನೆಗಳಿಗೆ ಪ್ರವಾಸಿಗರು ಭೇಟಿ ನೀಡಿದ್ದು, ಸಂಜೆಯ ವೇಳೆಗೆ ಹಡಗು ಕೊಚ್ಚಿ ಬಂದರಿನತ್ತ ತೆರಳಿತು.
Mangalore Cruise Ship Riviera arrives at NMPT Mangalore Port. A Total of 980 people including staffs and passengers have arrived.
07-08-26 10:42 pm
HK News Desk
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಸಾವಿಗೂ ಬಾರದ ಪ...
06-08-26 03:49 pm
ಕಲಬುರಗಿಯಲ್ಲಿ SIR ಪರಿಷ್ಕರಣೆ ಶಾಕ್ ; 5.36 ಲಕ್ಷ...
06-08-26 02:19 pm
'ಮಂತ್ರಿ ಸ್ಥಾನಕ್ಕೆ ಕೋಟಿ ಕೋಟಿ ಡೀಲ್?' ಮಾಜಿ ಸಚಿವರ...
05-08-26 10:56 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
07-08-26 10:13 pm
HK News Desk
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
BC Road Accident, Mangalore: ಬಿಸಿ ರೋಡ್ ಬಳಿ ಟಿ...
06-08-26 11:03 pm
ಅಯೋಧ್ಯೆ ಕಾಣಿಕೆ ಹಣ ಕಳವು ತೀವ್ರ ಆಘಾತಕಾರಿ, ಯಾವುದೇ...
06-08-26 10:22 pm
ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ...
06-08-26 09:33 pm
07-08-26 10:37 pm
HK News Desk
ಮುಡಿಪು ಬಳಿ ಹಾಡಹಗಲೇ ಒಂಟಿ ವೃದ್ಧೆಯ ಮೇಲೆ ಹಲ್ಲೆ ನಡ...
07-08-26 09:23 pm
ಉಡುಪಿಯ ಯುವ ಮಾಡೆಲ್ ಮನೆಯಲ್ಲೇ ಆತ್ಮಹತ್ಯೆ ; ಖಾಸಗಿ...
07-08-26 08:44 pm
Udupi Murder, David Dsouza: ಕುಂದಾಪುರ ಶೂಟೌಟ್ ಮ...
07-08-26 06:00 pm
ಬಟ್ಟೆ ವಿಚಾರಕ್ಕೆ ಸಹೋದರಿಯರ ಸಣ್ಣ ಜಗಳ; ತಾಯಿ ಬೈದಿದ...
07-08-26 04:22 pm