ಬ್ರೇಕಿಂಗ್ ನ್ಯೂಸ್
10-01-24 07:19 pm Mangalore Correspondent ಕರಾವಳಿ
ಮಂಗಳೂರು, ಜ.10: ನವಮಂಗಳೂರು ಬಂದರಿಗೆ ಹೊಸ ವರ್ಷದ ಮೊದಲ ಕ್ರೂಸ್ ಹಡಗು ಆಗಮಿಸಿದೆ. ಎಂ.ಎಸ್. ರಿವೀರಿಯ ಹೆಸರಿನ ಕ್ರೂಸ್ ಹಡಗು ಬುಧವಾರ ಎನ್ಎಂಪಿಟಿ ಬಂದರಿಗೆ ಆಗಮಿಸಿದ್ದು, ಹಡಗಿನಲ್ಲಿ ಬಂದ ವಿದೇಶಿ ಪ್ರವಾಸಿಗರು ಮಂಗಳೂರು ಸುತ್ತಾಡಿದ್ದಾರೆ. ಈ ಸಾಲಿನ ಸೀಸನ್ನಲ್ಲಿ ಬಂದ ನಾಲ್ಕನೇ ಪ್ರವಾಸಿ ಹಡಗು ಇದಾಗಿದೆ.
ಹಡಗಿನಲ್ಲಿ ಸಿಬಂದಿ ಸೇರಿ ಒಟ್ಟು 980 ಪ್ರವಾಸಿಗರಿದ್ದರು. ದುಬೈ, ಮುಂಬೈ, ಮರ್ಮಗೋವಾ ಬಂದರಿನ ಮೂಲಕ ಮಂಗಳೂರಿಗೆ ಆಗಮಿಸಿದ್ದು, ಐಷಾರಾಮಿ ಹಡಗು 239 ಮೀಟರ್ ಉದ್ದವಾಗಿದೆ. 66,172 ಟನ್ ಭಾರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹಡಗಿನಲ್ಲಿ ಬಂದ ಪ್ರವಾಸಿಗರಿಗೆ ಮಂಗಳೂರಿನ ಬಂದರಿಗೆ ಕಾಲಿಡುತ್ತಿದ್ದಂತೆ ಕರಾವಳಿಯ ಸಾಂಪ್ರದಾಯಿಕ ಕಲೆ ಯಕ್ಷಗಾನ ಮೂಲಕ ಸ್ವಾಗತ ನೀಡಲಾಯಿತು. ವಿವಿಧ ರೀತಿಯ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಏರ್ಪಡಿಸಲಾಗಿತ್ತು.
ಪ್ರವಾಸಿಗರನ್ನು ಮಂಗಳೂರು ಸುತ್ತಮುತ್ತ ಸುತ್ತಾಡಿಸಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆಯುಷ್ ಇಲಾಖೆಯಿಂದ ಮೆಡಿಟೇಶನ್ ಸೆಂಟರ್, ಎನ್ಎಂಪಿಟಿ ಬಂದರಿನಲ್ಲಿ ಫ್ರೀ ವೈಫೈ, ಯಕ್ಷಗಾನ ಕಲಾವಿದರ ಜೊತೆಗೆ ಫೋಟೋ ಕ್ಲಿಕ್ಕಿಸಲು ಸೆಲ್ಫಿ ಸ್ಟಾಂಡ್ ಒದಗಿಸಲಾಗಿತ್ತು. ಹಡಗಿನ ಪ್ರಮುಖ ಅಧಿಕಾರಿಗಳನ್ನು ಎನ್ಎಂಪಿಎ ಬಂದರಿನ ಡೆಪ್ಯುಟಿ ಚೇರ್ಮನ್ ಕೆ.ಜಿ. ನಾಥ್, ಸೆಕ್ರಟರಿ ಜಿಜೋ ಥಾಮಸ್ ಗೌರವಿಸಿದರು. ಆಬಳಿಕ ಪ್ರವಾಸಿಗರಿಗೆಂದೇ ಮಂಗಳೂರಿನ ಸ್ಥಳೀಯ ಕಲಾವಿದರ ತಂಡದಿಂದ ಯಕ್ಷಗಾನ ಏರ್ಪಡಿಸಲಾಗಿತ್ತು.
ಮಂಗಳೂರಿನಲ್ಲಿ ಕಾರ್ಕಳ ಗೊಮ್ಮಟೇಶ್ವರ, ಮೂಡುಬಿದ್ರೆ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಅಚಲ್ ಕ್ಯಾಶ್ಯು ಫ್ಯಾಕ್ಟರಿ, ಸೈಂಟ್ ಅಲೋಸಿಯಸ್ ಚರ್ಚ್, ಹಳೆ ಶೈಲಿಯ ಮನೆಗಳಿಗೆ ಪ್ರವಾಸಿಗರು ಭೇಟಿ ನೀಡಿದ್ದು, ಸಂಜೆಯ ವೇಳೆಗೆ ಹಡಗು ಕೊಚ್ಚಿ ಬಂದರಿನತ್ತ ತೆರಳಿತು.
Mangalore Cruise Ship Riviera arrives at NMPT Mangalore Port. A Total of 980 people including staffs and passengers have arrived.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
01-08-25 10:02 pm
Mangalore Correspondent
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm