ಬ್ರೇಕಿಂಗ್ ನ್ಯೂಸ್
20-01-24 10:38 pm Udupi Correspondent ಕರಾವಳಿ
ಉಡುಪಿ, ಜ.20: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ತನ್ನ ಮೂಲ ಮನೆಯಲ್ಲಿ ದೈವದ ಕೋಲದಲ್ಲಿ ಭಾಗಿಯಾಗಿದ್ದು ಈ ವೇಳೆ ಸ್ವತಃ ದೈವದ ಮುಖವಾಡವನ್ನು ಹೊತ್ತು ದೈವದ ಕೆಲಸ ಮಾಡಿದ್ದಾರೆ. ಕುಟುಂಬದ ಮೂಲ ಮನೆಯಲ್ಲಿ ನಡೆದ ದೈವದ ಉತ್ಸವದಲ್ಲಿ ಸ್ವತಃ ತಾವೇ ನಿಂತು ದೈವದ ಮುಖವಾಡವನ್ನು ಹೊತ್ತು ಸೇವೆ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿ ನಟನಾಗಿ ಹೆಸರು ಮಾಡಿದ್ದರೂ ತುಳುನಾಡಿನ ದೈವಗಳ ಕಾರಣಿಕ ಅರಿತು ಸೇವೆಯನ್ನು ತಪ್ಪಿಸಿಲ್ಲ. ಉಡುಪಿ ಜಿಲ್ಲೆಯ ಅಲೆವೂರು ದೊಡ್ಡ ಮನೆ ಇವರ ಮೂಲಮನೆಯಾಗಿದ್ದು ಸದ್ಯ ದೈವಗಳ ಆರಾಧನೆ ನಡೆಯುತ್ತಿದೆ. ಗುತ್ತಿನ ಮನೆಯ ಪ್ರತಿಯೊಬ್ಬರಿಗೂ ಈ ಆಚರಣೆಯಲ್ಲಿ ಜವಾಬ್ದಾರಿಗಳಿರುತ್ತವೆ. ತುಳುನಾಡಿನಲ್ಲಿ ಮಾತೃ ಪ್ರಧಾನ ವ್ಯವಸ್ಥೆ ಇದ್ದರೂ, ರಕ್ಷಿತ್ ಶೆಟ್ಟಿ ತನ್ನ ತಂದೆಯ ಮನೆಯ ದೈವದ ಚಾಕರಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ದೈವದ ಮನೆಯಲ್ಲಿ ಪ್ರತಿಷ್ಠಾಪನೆಯ ವೇಳೆ ಮುಖವಾಡವನ್ನು ತಾನೇ ಕೈಯಾರೆ ಹಿಡಿದು ಸೇವೆ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ವಿವಿಧ ಪೂಜೆಗಳು ನಡೆಯುತ್ತಿದ್ದು ಪ್ರತಿ ಕೆಲಸದಲ್ಲೂ ಹಾಜರಿದ್ದು ಮನೆ ಮಗನ ಕರ್ತವ್ಯ ನಿಭಾಯಿಸಿದ್ದಾರೆ.
ರಕ್ಷಿತ್ ಶೆಟ್ಟಿಯ ತಂದೆ ಶ್ರೀಧರ ಶೆಟ್ಟಿ ಅವರು ಈ ದೊಡ್ಡ ಮನೆ ಕುಟುಂಬಕ್ಕೆ ಸೇರಿದವರು. ಸುಮಾರು ಏಳು ಶತಮಾನಗಳ ಇತಿಹಾಸ ಇರುವ ಈ ಗುತ್ತಿನ ಮನೆಯಲ್ಲಿ ಪಂಜುರ್ಲಿ, ಧೂಮಾವತಿ ಸೇರಿದಂತೆ ಅನೇಕ ದೈವಗಳು ಇವೆ. ವರ್ಷಂಪ್ರತಿ ಇಲ್ಲಿ ದೈವಗಳ ಉತ್ಸವ ನಡೆಯುತ್ತದೆ. ಈಗ ದೈವದ ಗುಡಿ ಮತ್ತು ಗುತ್ತಿನ ಮನೆ ಜೀರ್ಣಾವಸ್ಥೆ ತಲುಪಿದ ಕಾರಣ ಕುಟುಂಬಿಕರೆಲ್ಲ ಸೇರಿ ನೂತನ ಕಟ್ಟಡ ನಿರ್ಮಿಸಿದ್ದಾರೆ.
ಮೂಲ ಮನೆಯಲ್ಲೀಗ ದೈವಗಳ ಕೋಲ ನಡೆಯುತ್ತಿದ್ದು ಹೆತ್ತವರ ಜೊತೆಗೆ ಮನೆ ಮಗನಾಗಿ ರಕ್ಷಿತ್ ಶೆಟ್ಟಿ ದೈವದ ಕೈಂಕರ್ಯ ನಡೆಸಿದ್ದಾರೆ.
Sandalwood actor Rakshit Shetty, who participated in the deity's kola at his original home, performed the divine work by carrying the mask of the deity himself. He stood by himself at the deity's festival held at the family's original home and served with the mask of the deity.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm