ಬ್ರೇಕಿಂಗ್ ನ್ಯೂಸ್
20-01-24 10:38 pm Udupi Correspondent ಕರಾವಳಿ
ಉಡುಪಿ, ಜ.20: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ತನ್ನ ಮೂಲ ಮನೆಯಲ್ಲಿ ದೈವದ ಕೋಲದಲ್ಲಿ ಭಾಗಿಯಾಗಿದ್ದು ಈ ವೇಳೆ ಸ್ವತಃ ದೈವದ ಮುಖವಾಡವನ್ನು ಹೊತ್ತು ದೈವದ ಕೆಲಸ ಮಾಡಿದ್ದಾರೆ. ಕುಟುಂಬದ ಮೂಲ ಮನೆಯಲ್ಲಿ ನಡೆದ ದೈವದ ಉತ್ಸವದಲ್ಲಿ ಸ್ವತಃ ತಾವೇ ನಿಂತು ದೈವದ ಮುಖವಾಡವನ್ನು ಹೊತ್ತು ಸೇವೆ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿ ನಟನಾಗಿ ಹೆಸರು ಮಾಡಿದ್ದರೂ ತುಳುನಾಡಿನ ದೈವಗಳ ಕಾರಣಿಕ ಅರಿತು ಸೇವೆಯನ್ನು ತಪ್ಪಿಸಿಲ್ಲ. ಉಡುಪಿ ಜಿಲ್ಲೆಯ ಅಲೆವೂರು ದೊಡ್ಡ ಮನೆ ಇವರ ಮೂಲಮನೆಯಾಗಿದ್ದು ಸದ್ಯ ದೈವಗಳ ಆರಾಧನೆ ನಡೆಯುತ್ತಿದೆ. ಗುತ್ತಿನ ಮನೆಯ ಪ್ರತಿಯೊಬ್ಬರಿಗೂ ಈ ಆಚರಣೆಯಲ್ಲಿ ಜವಾಬ್ದಾರಿಗಳಿರುತ್ತವೆ. ತುಳುನಾಡಿನಲ್ಲಿ ಮಾತೃ ಪ್ರಧಾನ ವ್ಯವಸ್ಥೆ ಇದ್ದರೂ, ರಕ್ಷಿತ್ ಶೆಟ್ಟಿ ತನ್ನ ತಂದೆಯ ಮನೆಯ ದೈವದ ಚಾಕರಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ದೈವದ ಮನೆಯಲ್ಲಿ ಪ್ರತಿಷ್ಠಾಪನೆಯ ವೇಳೆ ಮುಖವಾಡವನ್ನು ತಾನೇ ಕೈಯಾರೆ ಹಿಡಿದು ಸೇವೆ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ವಿವಿಧ ಪೂಜೆಗಳು ನಡೆಯುತ್ತಿದ್ದು ಪ್ರತಿ ಕೆಲಸದಲ್ಲೂ ಹಾಜರಿದ್ದು ಮನೆ ಮಗನ ಕರ್ತವ್ಯ ನಿಭಾಯಿಸಿದ್ದಾರೆ.




ರಕ್ಷಿತ್ ಶೆಟ್ಟಿಯ ತಂದೆ ಶ್ರೀಧರ ಶೆಟ್ಟಿ ಅವರು ಈ ದೊಡ್ಡ ಮನೆ ಕುಟುಂಬಕ್ಕೆ ಸೇರಿದವರು. ಸುಮಾರು ಏಳು ಶತಮಾನಗಳ ಇತಿಹಾಸ ಇರುವ ಈ ಗುತ್ತಿನ ಮನೆಯಲ್ಲಿ ಪಂಜುರ್ಲಿ, ಧೂಮಾವತಿ ಸೇರಿದಂತೆ ಅನೇಕ ದೈವಗಳು ಇವೆ. ವರ್ಷಂಪ್ರತಿ ಇಲ್ಲಿ ದೈವಗಳ ಉತ್ಸವ ನಡೆಯುತ್ತದೆ. ಈಗ ದೈವದ ಗುಡಿ ಮತ್ತು ಗುತ್ತಿನ ಮನೆ ಜೀರ್ಣಾವಸ್ಥೆ ತಲುಪಿದ ಕಾರಣ ಕುಟುಂಬಿಕರೆಲ್ಲ ಸೇರಿ ನೂತನ ಕಟ್ಟಡ ನಿರ್ಮಿಸಿದ್ದಾರೆ.
ಮೂಲ ಮನೆಯಲ್ಲೀಗ ದೈವಗಳ ಕೋಲ ನಡೆಯುತ್ತಿದ್ದು ಹೆತ್ತವರ ಜೊತೆಗೆ ಮನೆ ಮಗನಾಗಿ ರಕ್ಷಿತ್ ಶೆಟ್ಟಿ ದೈವದ ಕೈಂಕರ್ಯ ನಡೆಸಿದ್ದಾರೆ.
Sandalwood actor Rakshit Shetty, who participated in the deity's kola at his original home, performed the divine work by carrying the mask of the deity himself. He stood by himself at the deity's festival held at the family's original home and served with the mask of the deity.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm