Heart attack, Mangalore: ಸೈಟ್ ವಿಸಿಟ್ ವೇಳೆ ಕುಸಿದು ಬಿದ್ದ ಸಿವಿಲ್ ಇಂಜಿನಿಯರ್ ; ಆಸ್ಪತ್ರೆ ಸಾಗಿಸುವಷ್ಟರಲ್ಲಿ ಸಾವು, ಪತಿಯ ದಿಢೀರ್ ಸಾವಿನಿಂದ ಪತ್ನಿ, ಮಕ್ಕಳು ಕಂಗಾಲು 

21-01-24 02:58 pm       Mangalore Correspondent   ಕರಾವಳಿ

ಸೈಟ್ ವಿಸಿಟ್ ವೇಳೆ ನಿರ್ಮಾಣ ಹಂತದ ಕಟ್ಟಡದಲ್ಲೇ ದಿಢೀರ್ ಕುಸಿದು ಬಿದ್ದ ಸಿವಿಲ್ ಇಂಜಿನಿಯರ್ ಓರ್ವರು ಆಸ್ಪತ್ರೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.

ಉಳ್ಳಾಲ, ಜ.21: ಸೈಟ್ ವಿಸಿಟ್ ವೇಳೆ ನಿರ್ಮಾಣ ಹಂತದ ಕಟ್ಟಡದಲ್ಲೇ ದಿಢೀರ್ ಕುಸಿದು ಬಿದ್ದ ಸಿವಿಲ್ ಇಂಜಿನಿಯರ್ ಓರ್ವರು ಆಸ್ಪತ್ರೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.

ಪ್ರವೀಣ್ ಆಚಾರ್ಯ (51) ಹೃದಯಾಘಾದಿಂದ ಮೃತ ಪಟ್ಟ ವ್ಯಕ್ತಿ. ಮೂಲತಃ ಮಾಣಿ ,ಅನಂತಾಡಿ ನಿವಾಸಿಯಾಗಿದ್ದ ಪ್ರವೀಣ್ ಪಂಡಿತ್ ಹೌಸಿನ ಬಾಡಿಗೆ ಮನೆಯಲ್ಲಿ ಪತ್ನಿ , ಇಬ್ಬರು ಹೆಣ್ಮಕ್ಕಳೊಂದಿಗೆ ನೆಲೆಸಿದ್ದರು. ಪ್ರವೀಣ್ ಕಳೆದ ಹಲವು ವರುಷಗಳಿಂದ ತೊಕ್ಕೊಟ್ಟುವಿನಲ್ಲಿ ಸಿವಿಲ್ ಇಂಜಿನಿಯರ್ ಕೆಲಸ ನಿರ್ವಹಿಸಿಸುತ್ತಿದ್ದು ಭಟ್ನಗರದಲ್ಲಿ ಕಚೇರಿ ಹೊಂದಿದ್ದರು. ಆದಿತ್ಯವಾರ ಬೆಳಗ್ಗೆ ಪ್ರವೀಣ್ ಅವರು ಉಳ್ಳಾಲ ಒಂಭತ್ತುಕೆರೆಯ ನಿರ್ಮಾಣ ಹಂತದ ಕಟ್ಟಡಕ್ಕೆ ಸೈಟ್ ಪರಿಶೀಲನೆಗೆ ತೆರಳಿದ್ದ ವೇಳೆ ಮೂರನೇ ಅಂತಸ್ತು ಏರುವಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನ ತೊಕ್ಕೊಟ್ಟಿನ ನೇತಾಜಿ ಎಲ್ಲಪ್ಪ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ಪತಿಯ ದಿಢೀರ್ ಅಗಲಿಕೆಯಿಂದ ಆಘಾತಗೊಂಡ ಪತ್ನಿ ತನ್ನ ಇಬ್ಬರು ಸಣ್ಣ ಹೆಣ್ಮಕ್ಕಳ ಜತೆ ಆಸ್ಪತ್ರೆಯಲ್ಲಿ ಅಳುತ್ತಿರುವ ದೃಶ್ಯ ಮನ ಕಲಕುವಂತಿತ್ತು.

Engineer dies of heart attack while site visit at Thokottu in Mangalore. The deceased has been identified as praveen acharaya.